Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿ.ಕೆ. ಶಿವಕುಮಾರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿ.ಕೆ. ಶಿವಕುಮಾರ್‌

Bengaluru City

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿ.ಕೆ. ಶಿವಕುಮಾರ್‌

Public TV
Last updated: February 9, 2026 9:40 pm
Public TV
Share
6 Min Read
DK Shivakumar 1 1
SHARE

– ಹೊಸದಾಗಿ ದರ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ತಡೆಹಿಡಿಯುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಕಳುಹಿಸಿರುವ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (D.K Shivakumar) ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಡಿಸಿಎಂ ಸ್ಪಷ್ಟನೆ ನೀಡಿದರು. “ಇಲ್ಲಿ ಯಾವುದೇ ರಾಜಕೀಯವಿಲ್ಲ. ನಮಗೆ ಯಾವುದೇ ರೀತಿಯ ನಿರ್ದೇಶನ ನೀಡುವ ಹಾಗೂ ಹಸ್ತಕ್ಷೇಪ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ದೆಹಲಿ ಮೆಟ್ರೋ ಅಳವಡಿಸಿಕೊಂಡಿರುವ ಸೂತ್ರದ ಅನ್ವಯದಂತೆ ಹೊಸದಾಗಿ ಲೆಕ್ಕಾಚಾರ ಮಾಡಲು ತಿಳಿಸಿದ್ದೇನೆ” ಎಂದರು. ಇದನ್ನೂ ಓದಿ

“ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ದೆಹಲಿಯಲ್ಲಿ ಸಭೆ ಕರೆಯುತ್ತಾರೆ ಎಂದುಕೊಂಡಿದ್ದೆ. ಸಭೆ ನಡೆಸಿ ಏನು ಆದೇಶ ಕೊಡುತ್ತಾರೆ ಎಂದು ಕಾಯುತ್ತಿದ್ದೆ. ಏನು ರಾಜಕಾರಣ ಮಾಡುತ್ತಾರೆ ಎಂದು ನೋಡುತ್ತಿದ್ದೆ. ವಾಸ್ತವತೆ ಬಿಟ್ಟು ಇದರಲ್ಲಿ ರಾಜಕಾರಣ ಹೆಚ್ಚಾಗಿದೆ. ಆದ ಕಾರಣ ನಾನು ಇದರ ಬಗ್ಗೆ ಏನೂ ಮಾತನಾಡದೇ ಸುಮ್ಮನಿದ್ದೆ. ದೆಹಲಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ತಾತ್ಕಾಲಿಕ ಜಯ ಎಂದು ಹೇಳುತ್ತಿರುವವರು ಇಂದು ಬೋರ್ಡ್‌ ಮೀಟಿಂಗ್‌ ಮಾಡಿ ನಿರ್ದೇಶನ ನೀಡಬೇಕಿತ್ತು” ಎಂದರು.

NAMMA METRO 2

ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಕೇಳಿಕೊಂಡಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ದರ ಏರಿಕೆ ತಡೆ ಹಿಡಿಯಿರಿ ಎಂದು ಕೇಂದ್ರ ಸರ್ಕಾರದವರು ಪತ್ರ ಬರೆದಿರಬಹುದು. ಆದರೆ ಈ ರೀತಿ ಮಾಡಲು ಅವರಿಗೂ ಕಾನೂನಿನಲ್ಲಿ ಅವಕಾಶವಿಲ್ಲ. ಅವರು ಯಾವ ಕಾನೂನಿನ ಅಡಿ, ಯಾವ ಆಕ್ಟ್‌ ಅನ್ವಯ ಪತ್ರ ಬರೆದಿದ್ದಾರೆ ಎಂದು ಹೇಳಿದರೆ ಒಪ್ಪಿಕೊಳ್ಳೋಣ. ಇದನ್ನು ಹೊಸದಾಗಿ ತೀರ್ಮಾನ ಮಾಡಬೇಕು ಎಂದಾದರೆ ನೂತನ ದರ ನಿಗದಿ ಸಮಿತಿ ರಚನೆ ಆಗಬೇಕು. ನಾನು ನಮ್ಮ ಜನರ ದನಿಯಾಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ.” ಎಂದರು.

“ನನ್ನ ರಾಜಕೀಯದ ಅನುಭವದ ಆಧಾರದ ಮೇಲೆ ಹಾಗೂ ನಾನು ಇತರೇ ರಾಜ್ಯಗಳ ಮೇಲೆ ಮೆಟ್ರೋ ನಿಗಮದ ಬಳಿ, ವಿಷಯ ತಜ್ಞರು, ಕೇಂದ್ರದ ತಜ್ಞರ ಬಳಿ ಇದರ ಬಗ್ಗೆ ಚರ್ಚೆ ನಡೆಸಿ ಗಮನಿಸಿದಾಗ ಹೊಸ ಸಮಿತಿ ರಚನೆಯಾಗುವ ತನಕ ಈ ರೀತಿ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹೊಸ ಸಮಿತಿ ಇದರ ಬಗ್ಗೆ ನಿರ್ದೇಶನ ನೀಡುತ್ತದೆ. ಪತ್ರ ಬರೆದಿರುವವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದೇನಲ್ಲ. ಅವರು ದಡ್ಡರಲ್ಲ ಎಂದು ಕೊಂಡಿದ್ದೇನೆ. ಇದರ ಬಗ್ಗೆ ಸ್ಥಳೀಯ ಸಂಸದರು ಒಂದಷ್ಟು ಜನ ಮಾತನಾಡಬಹುದಷ್ಟೇ. ಅವರೂ ಸಹ ಎಲ್ಲಾ ರಾಜ್ಯಗಳನ್ನು ನಡೆಸಬೇಕಲ್ಲವೇ. ಈಗ ಬರೆದಿರುವ ಪತ್ರವನ್ನು ಇಟ್ಟುಕೊಂಡು ಯಾರೋ ಹೆಸರು ತೆಗೆದುಕೊಳ್ಳುತ್ತಿದ್ದಾರಲ್ಲ ಅದು ಸಾಧ್ಯವಿಲ್ಲ. ನಾವು ದರ ಏರಿಕೆ ಮಾಡಿ ಎಂದು ಕೇಳಿಲ್ಲ. ಈ ಹಿಂದಿನ ಸಮಿತಿ ಏನು ತೀರ್ಮಾನ ಮಾಡಿದೆ ಅದರಂತೆ ಮುನ್ನಡೆದಿದೆ” ಎಂದರು.

ನಮ್ಮಿಂದ ದರ ಏರಿಕೆಗೆ ತಡೆ ಬಿದ್ದಿದೆ ಎಂದು ಹೇಳುತ್ತಿರುವವರ ಬಗ್ಗೆ ಕೇಳಿದಾಗ, “ಇದರಿಂದ ಹೆಸರನ್ನು ಯಾರು ಬೇಕಾದರೂ ತೆಗೆದುಕೊಳ್ಳಲಿ. ಅಂತಿಮವಾಗಿ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ನನ್ನ ವಾರ್‌ ಕ್ರೆಡಿಟ್‌ ಪಡೆಯಲು ಅಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂದು ಯುದ್ಧ ಮಾಡುತ್ತಿರುವೆ. ಜನರಿಗೆ ಹಾಗೂ ಮೆಟ್ರೋ ಸಂಸ್ಥೆಗೂ ಭಾರ ಆಗಬಾರದು. ನಾನು ಯಾರ ಒತ್ತಡಕ್ಕೂ ಒಳಗಾಗಿ ಕೆಲಸ ಮಾಡುತ್ತಿಲ್ಲ. ನನಗೆ ಅಂತಿಮವಾಗಿ ಬಿಎಂಆರ್‌ ಸಿಎಲ್‌ ಸಂಸ್ಥೆ ಹಾಗೂ ಜನರೂ ಉಳಿಬೇಕು” ಎಂದರು.

“ದರ ಏರಿಕೆ ಬಗ್ಗೆ ನಮ್ಮ ಬಳಿ ಏನೂ ಕೇಳಿಲ್ಲ, ಮಾತನಾಡಿಲ್ಲ. ನಾವು ಚರ್ಚೆ ಮಾಡಿಲ್ಲ. ನಾವು ಅವರನ್ನು ಕೇಳೇ ಇಲ್ಲ, ಇದರ ಬಗ್ಗೆ ಹೇಳೇ ಇಲ್ಲ. ಮೆಟ್ರೋ ದರ ಏರಿಕೆ ಬಗ್ಗೆ ತೀರ್ಮಾನವಾಗಿರುವುದು ಈಗಲ್ಲ. ಒಂದು ವರ್ಷದ ಹಿಂದೆ. ಅಂದರೆ 09.02.2025 ರಂದೇ ಶೇ.5 ರಷ್ಟು ದರ ಏರಿಕೆಯನ್ನು 9.02.26 ರಂದು ಮಾಡಬೇಕು ಎಂದು ದರ ಏರಿಕೆ ಸಮಿತಿ ಅಂದೇ ಆದೇಶ ನೀಡಿದೆ. ಆ ಪ್ರಕಾರ ದರ ಏರಿಕೆ ಮಾಡಲಾಗಿದೆ. ಈಗ ಮಾತನಾಡುತ್ತಿರುವವರು ಯಾರು ಸಹ ಅವತ್ತು ಇದರ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರಿನ ಜನತೆ ಗೌರವದಿಂದ ಇದನ್ನು ಸ್ವೀಕಾರ ಮಾಡಿದ್ದಾರೆ” ಎಂದರು.

Namma Metro Greenline

“ದರ ಏರಿಕೆಯನ್ನು ತಡೆಯುವುದರ ಕುರಿತಂತೆ ರಾಜ್ಯ ಸರ್ಕಾರ, ಅಧಿಕಾರಿಗಳು ಒಂದು ತೀರ್ಮಾನ ಮಾಡಿದ್ದೇವೆ. ಬಿಎಂಆರ್‌ ಸಿಎಲ್‌ ದರ ಏರಿಕೆಗೆ ಮೂರು ಮುಖ್ಯ ಮಾನದಂಡಗಳಿವೆ. ಓಎಂಆರ್‌ ವೆಚ್ಚ, ಬದಲಾಗುವ ಸಿಪಿಐ, ಸಿಬ್ಬಂದಿ ವೆಚ್ಚ, ಪ್ರತಿ ಯುನಿಟ್‌ ವೆಚ್ಚ, ಇಂಧನ ವೆಚ್ಚವನ್ನು ಲೆಕ್ಕಚಾರ ಮಾಡಲು ಅವಕಾಶವಿದೆ. ಇವುಗಳ ಆಧಾರದ ಮೇಲೆ ಮತ್ತೊಮ್ಮೆ ಮರು ಲೆಕ್ಕಚಾರವನ್ನು ಮಾಡಿಕೊಂಡು ಬನ್ನಿ ಎಂದು ನಮ್ಮ ಸರ್ಕಾರ ಮಾರ್ಗದರ್ಶನ ನೀಡಿದೆ. ಅಲ್ಲಿಯವರೆಗೂ ದರ ಏರಿಕೆಯನ್ನು ತಡೆಯಿಡಿಯಿರಿ ಎಂದು ಸೂಚನೆ ನೀಡಿದ್ದೇನೆ” ಎಂದರು.

“ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ದರ ಪಟ್ಟಿ ಹೆಚ್ಚಿದೆ ಎಂದು ಹೇಳುತ್ತಾರೆ. ಉದಾಹರಣೆಗೆ ದೆಹಲಿಯಲ್ಲಿ ಭದ್ರತಾ ವಿಭಾಗದ ಜವಾಬ್ದಾರಿ ಕೇಂದ್ರ ಸರ್ಕಾರದ ಅಡಿಯಲ್ಲಿದೆ. ಸಿಎಸ್‌ಎಫ್‌ ಅಲ್ಲಿನ ಜವಾಬ್ದಾರಿ ತೆಗೆದುಕೊಂಡಿದೆ. ಇಲ್ಲಿ ನಾವೇ ಭದ್ರತೆಯ ಜವಾಬ್ದಾರಿ ಹೊತ್ತಿದ್ದೇವೆ. ಜೊತೆಗೆ ನಾವು ಇಲ್ಲಿ ಇದಕ್ಕೆ ಜಿಎಸ್‌ ಟಿಯನ್ನೂ ಸಹ ಪಾವತಿಸುತ್ತಿದ್ದೇವೆ. ಕ್ಯಾಶ್‌ ಲಾಸ್‌ ಮರುಪಾವತಿಗೆ ಎಂದು 1064.32 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ನೀಡಿದೆ. ಸಾಲ ಮರುಪಾವತಿಗೆ ಎಂದು ಕೇಂದ್ರ ಸರ್ಕಾರಕ್ಕೆ 4,002.23 ಕೋಟಿ ರೂ. ನೀಡಿದ್ದೇವೆ. ಒಟ್ಟು 5,066. 55 ಕೋಟಿ ರೂ. ಕೊಟ್ಟಿದ್ದೇವೆ” ಎಂದರು.

ದರ ಏರಿಕೆ ತಡೆ ಎಷ್ಟು ಸಮಯ ಎಂದು ಕೇಳಿದಾಗ, “ಪ್ರತಿಯೊಂದಕ್ಕೂ ಹಂತಗಳಿವೆ. ಒಂದೆರಡು ದಿನಗಳಲ್ಲಿ ಎಂದು ಹೇಳಲು ಆಗುವುದಿಲ್ಲ. ಬೇರೆಯವರು ಹೇಗೆ ಎಷ್ಟು ವೇಗದಲ್ಲಿ ಇರುವರೋ ನಮ್ಮ ರೈಲು ಸಹ ಅಷ್ಟೇ ವೇಗವಾಗಿ ಹೋಗುತ್ತದೆ” ಎಂದು ಹೇಳಿದರು.

ಹಲವಾರು ಕಡೆ ಮೆಟ್ರೋ ಇದ್ದರೂ ಇಲ್ಲಿ ಮಾತ್ರ ರಾಜಕೀಯ ಮಾಡಲಾಗುತ್ತಿದೆಯೇ ಎಂದು ಕೇಳೀದಾಗ, “ಇಲ್ಲಿ ಕೇವಲ ಟ್ರಂಕ್‌ ಗಳು, ದನಿ, ಮೈಕ್‌ ಮಾತ್ರ ಇವೆ. ದೆಹಲಿ, ಮುಂಬೈ ಹೈದರಾಬಾದ್‌ ಹೀಗೆ ಎಲ್ಲಾದರೂ ಮಾತನಾಡಿದ್ದಾರಾ? ಎಲ್ಲಿಯೂ ಮಾತನಾಡಿಲ್ಲ. ದೆಹಲಿಯಲ್ಲಿ ಸಂಸದರೊಬ್ಬರು ವಾದ ಮಾಡುತ್ತಿದ್ದಾರೆ. ನೀವು (ಮಾಧ್ಯಮಗಳು) ಅವರ ಫೋಟೋ ಹಾಕುತ್ತಿರಿ” ಎಂದು ತಿವಿದರು.

ದರ ಏರಿಕೆಯಲ್ಲಿ ನಮ್ಮ ಪಾಲಿಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಆರ್‌.ಆಶೋಕ್‌ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಮಾಧ್ಯಮದ ಮುಂದೆ ಅವರು ಏನು ಬೇಕಾದರೂ ತಿಳಿಸಲಿ. ಏನು ಬೇಕು ಎಂದು ನನಗೆ ತಿಳಿಸಿದರೆ, ನಾನು ಅದಕ್ಕೆ ಉತ್ತರ ನೀಡುತ್ತೇನೆ” ಎಂದರು.

ಹೊಸ ದರ ನಿಗದಿ ಸಮಿತಿಗೆ ಒತ್ತಾಯ ಮಾಡುವಿರಾ ಎಂದು ಕೇಳಿದಾಗ, “ಸದ್ಯಕ್ಕೆ ಈ ಗೊಂದಲಕ್ಕೆ ನಾನು ಹೋಗುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್‌ ಏನು ಮಾಡಲು ಸಾಧ್ಯವೋ ಅದನ್ನು ಮಾಡಲಾಗುವುದು. ಇದು ನಮ್ಮ ಭೂಮಿ. ನಮ್ಮ ಗ್ರಾಹಕರಿಗೆ ಯಾವ ರೀತಿ ಸಹಾಯ ಮಾಡಲಾಗುವುದೋ ಆ ದಾರಿಯನ್ನು ಹುಡುಕಲಾಗಿದೆ” ಎಂದರು.

ಶೇ. 5 ರಷ್ಟು ದರ ಇಳಿಕೆಯಾಗುತ್ತದೆ ಎಂದು ಆಶಾಭಾವನೆ ಇಟ್ಟುಕೊಳ್ಳಬಹುದೇ ಎಂದು ಕೇಳಿದಾಗ, “ಮರು ಲೆಕ್ಕಾಚಾರ ಮಾಡಿ ಎಂದು ಸೂಚನೆ ನೀಡಿದ್ದೇನೆ. ಯಾವುದೇ ಸಂಸ್ಥೆಯಾದರೂ ಅಲ್ಲಿನ ಖರ್ಚುವೆಚ್ಚದಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಅದೇ ರೀತಿ ಇಲ್ಲಿ ಇಂಧನ ದರ ಏರಿಕೆ ಸೇರಿದಂತೆ ಇತರೇ ಲೆಕ್ಕಾಚಾರಗಳು ಇರುತ್ತವೆ” ಎಂದರು.

ದರ ಏರಿಕೆ ನಿರ್ಧಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂದು ಕೇಳಿದಾಗ, “ಯಾರ ವ್ಯಾಪ್ತಿಗೂ ಬರುವುದಿಲ್ಲ. ದರ ಪರಿಷ್ಕರಣಾ ಸಮತಿಯ ಅಡಿಯಲ್ಲಿ ಬರುತ್ತದೆ. ಈ ಮೊದಲು ರಾಜ್ಯ ಸರ್ಕಾರದವರು ಈ ಸಮಿತಿಯಲ್ಲಿ ಇರುತ್ತಿದ್ದರು. ಈಗ ಇಲ್ಲ” ಎಂದರು.

ಹಳೇ ಸಮಿತಿ ಅನ್ವಯ ದರ ಪರಿಷ್ಕರಣೆ ಮಾಡಲಾಗುವುದೇ ಎಂದು ಕೇಳಿದಾಗ, “ಈ ರೀತಿ ಮಾಡಲು ಅಧಿಕಾರವಿಲ್ಲ. ಹೊಸ ಸಮಿತಿ ರಚನೆ ಆಗುವ ತನಕ ಕೇಂದ್ರ, ರಾಜ್ಯ, ಬಿಎಂಆರ್‌ಸಿಎಲ್‌ ಯಾರಿಗೂ ಅಧಿಕಾರವಿಲ್ಲ” ಎಂದರು.

TAGGED:BMRCLd k shivakumarnamma metroಕಾಂಗ್ರೆಸ್
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Dharwad 1
Crime

ಧಾರವಾಡ | ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ – ಮೂವರ ವಿರುದ್ಧ FIR

Public TV
By Public TV
6 minutes ago
North Western Road Transport Corporation
Bagalkot

ಉಪಚುನಾವಣೆ | ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಲಿಖಿತ ಪರೀಕ್ಷೆ ಏ.10ಕ್ಕೆ ಮುಂದೂಡಿಕೆ

Public TV
By Public TV
25 minutes ago
dk shivakumar
Bengaluru City

ಶಿವಶಂಕರಪ್ಪಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು – ಡಿಕೆಶಿ

Public TV
By Public TV
30 minutes ago
RCB 3
Cricket

ನಾಳಿನ ಆರ್‌ಸಿಬಿ ಪಂದ್ಯಕ್ಕೆ ಶಾಸಕರಿಗೆ ಸಿಗಲಿದೆ 1+1 ಟಿಕೆಟ್‌

Public TV
By Public TV
47 minutes ago
S Madhu Bangarappa
Bengaluru City

ಕರ್ನಾಟಕದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ – ಹಿಂದಿ ಹೇರಿಕೆಗೆ ಬ್ರೇಕ್?

Public TV
By Public TV
2 hours ago
Ramnavami in raichuru
Districts

ರಾಮನವಮಿ ಸಡಗರ – ರಾಯಚೂರಿನ ದೇವಾಲಯಗಳಲ್ಲಿ ನಿರಂತರ ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?