ಬೆಂಗಳೂರು: ನಾಯಕತ್ವದ ಬಗ್ಗೆ ಇರೋ ಗೊಂದಲವನ್ನ ರಾಹುಲ್ ಗಾಂಧಿ (Rahul Gandhi) ಇತ್ಯರ್ಥ ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಆಗ್ರಹಿಸಿದ್ದಾರೆ.
ಸಿಎಂ-ಡಿಸಿಎಂ ರಿಂದ ರಾಹುಲ್ ಭೇಟಿ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಭೇಟಿ ಮಾಡಿರುವ ಸಿಎಂ-ಡಿಸಿಎಂ ಭೇಟಿಯ ಸಂದರ್ಭದಲ್ಲಿ ಪರಿಹಾರ ಸಿಗಬೇಕು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಎದ್ದಿರುವ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು. ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ. ಗೊಂದಲ ಪರಿಹಾರ ಮಾಡದಿದ್ದರೆ ಆಡಳಿತದ ಮೇಲೆ ಪರಿಣಾಮ ಆಗಲಿದೆ. ಅನಗತ್ಯವಾಗಿರುವ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತದೆ. ಪರ ವಿರೋಧ ಅಭಿಪ್ರಾಯಗಳು ಕೂಡ ಬರಲಿದೆ. ಇದಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡಬೇಕು ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಎರಡು ಬಾರಿ ಲೀಸ್ ಬೇಸ್ನಲ್ಲಿಯೇ ಸಿಎಂ ಆಗಿದ್ದು: ಸಿದ್ದು ಸಮರ್ಥಿಸಿ ಶಿವಲಿಂಗೇಗೌಡ ಕಿಡಿ
ಈ ಹಿಂದೆಯೇ ನಾನು ಇದನ್ನು ಒತ್ತಾಯ ಮಾಡಿದ್ದೆ. ಈಗಲೂ ಹೈಕಮಾಂಡ್ಗೆ ಒತ್ತಾಯ ಮಾಡುತ್ತೇನೆ. ಗೊಂದಲ ಪರಿಹಾರ ಆಗದಿದ್ದರೆ ಶಾಸಕರಲ್ಲಿ ಗೊಂದಲ ಇರುತ್ತದೆ. ಯಾರ್ ಸಿಎಂ ಆಗ್ತಾರೆ? ನಮ್ಮದೇನು ಅಂತ ಗೊಂದಲ ಇರುತ್ತದೆ. ಜೊತೆಗೆ ಬೆಂಗಳೂರು ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಆಗಬೇಕಿದೆ. ಕಾರ್ಪೊರೇಷನ್ ಚುನಾವಣೆ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಆಗದಿದ್ದರೆ, ಕೇಂದ್ರದಿಂದ ಬರುವ ಅನುದಾನಕ್ಕೆ ತೊಂದರೆಯಾಗಲಿದೆ ಅಂತ ತಿಳಿಸಿದರು.
ಜನವರಿ 16ಕ್ಕೆ ಸಿಹಿ ಸುದ್ದಿ ಬರಲಿದೆ ಎಂಬ ಡಿಕೆಶಿ ಬಣದ ನಾಯಕರ ಹೇಳಿಕೆ ವಿಚಾರಕ್ಕೆ ತಿರುಗೇಟು ಕೊಟ್ಟ ಅವರು,ಸಿಹಿ,ಸುದ್ದಿ ಆದ್ರೂ ಬರಲಿ ಏನಾದರೂ ಬರಲಿ. ಒಂದು ಕಡೆ ಸಿಎಂ ಬದಲಾವಣೆ ಅನ್ನುವಂತ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಮಾತು ಕೊಟ್ಟಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಏನೇ ಆಗಿದ್ರು ಹೈಕಮಾಂಡ್ ಸ್ಪಷ್ಟನೆ ಕೊಡಲಿ. ಡಿಕೆಶಿಗೆ ಅವಕಾಶ ಸಿಕ್ಕರೆ ಅದು ಹೈಕಮಾಂಡ್ ತೀರ್ಮಾನ ಆಗಲಿ ಎಂದರು. ಇದನ್ನೂ ಓದಿ: ಜಿಬಿಎ 5 ಪಾಲಿಕೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ: ಕೆ.ಜೆ.ಜಾರ್ಜ್

