Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

Latest

ಕುಳಿತಲ್ಲೇ ಫುಡ್‌ ಆರ್ಡರ್‌; ಬೊಜ್ಜು, ಶುಗರ್‌, ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ – ಶಾಕ್‌ ಕೊಟ್ಟ WHO, UNICEF ರಿಪೋರ್ಟ್‌

Last updated: October 25, 2025 11:55 pm
By
Public TV
Share
6 Min Read
online food order

ಕುಳಿತಲ್ಲೇ ಆರ್ಡರ್ ಮಾಡಿದರೆ ಎಲ್ಲವೂ ಮನೆ ಬಾಗಿಲಿಗೆ ಬರುತ್ತವೆ. ಊಟ, ದಿನಸಿ, ತಿನಿಸುಗಳು ಹೀಗೆ ಬೇಕಾದ್ದನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಎಲ್ಲವೂ ಮೊಬೈಲ್‌ನಲ್ಲಿ ಒಂದು ಕ್ಲಿಕ್‌ನಲ್ಲಿ ಆಗುತ್ತವೆ. ನಗರ ಭಾಗದ ಜನರು ತುಂಬಾ ಬ್ಯುಸಿಯಾಗಿದ್ದಾರೆ. ತಮಗೆ ಬೇಕಾದ್ದನ್ನು ಹೊರಗಡೆ ಹೋಗಿ ತರುವಷ್ಟು ಸಮಯ ಇಲ್ಲ. ಹೀಗಾಗಿ, ಆನ್‌ಲೈನ್ ಸೇವೆಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್‌ಗಳಿಂದ ತಮ್ಮಿಷ್ಟದ ಊಟ-ತಿಂಡಿಗಳನ್ನು ಮನೆಗೆ ತರಿಸಿಕೊಂಡು ಸೇವಿಸುವ ಪರಿಪಾಠ ದಿನೇ ದಿನೆ ಹೆಚ್ಚುತ್ತಿದೆ. ಪರಿಣಾಮವಾಗಿ ಮನೆಯಲ್ಲೇ ಅಡುಗೆ ಮಾಡುಕೊಳ್ಳುವಂತಹ ಸಂಪ್ರದಾಯ ಕ್ಷೀಣಿಸುತ್ತಿದೆ. ತಂತ್ರಜ್ಞಾನ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಆದರೆ, ಈ ಪ್ರವೃತ್ತಿಯಿಂದ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಕಳವಳಕಾರಿಯಾಗಿದೆ.

ನೆರೆಹೊರೆಯ ಅಂಗಡಿಗೆ ಹೋಗುವ ಅಥವಾ ವೀಕೆಂಡ್ ಸಂತೋಷಕೂಟ ಯೋಜಿಸುವ ದಿನಗಳು ಮರೆಯಾಗಿವೆ. ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಅಪ್ಲಿಕೇಶನ್‌ಗಳ ಹೆಚ್ಚಳವು ಜನರ ಆಹಾರ ಸೇವನೆ ಕ್ರಮವನ್ನೇ ಬದಲಾಯಿಸಿವೆ. ಆನ್‌ಲೈನ್‌ ಫುಡ್‌ ಡೆಲಿವರಿ (Online Food Delivery) ಪ್ಲಾಟ್‌ಫಾರ್ಮ್‌ಗಳ ಕಡೆಗಿನ ಜನರ ಒಲವು ಹೆಚ್ಚುತ್ತಿದೆ. ಇದರಿಂದ ಜನರ ದೈಹಿಕ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ. ಹೆಚ್ಚಿನ ಕ್ಯಾಲೊರಿ ಇರುವ ಆಹಾರಗಳ ಮೇಲಿನ ಅವಲಂಬನೆ ಜಾಸ್ತಿಯಾಗಿದೆ. ರುಚಿಯೆನಿಸುವ ಜಂಕ್‌ಫುಡ್ ಸೇವನೆಯೂ ಮಿತಿಮೀರಿದೆ. ಇದು ಜನರಿಗೆ ಅರಿವಾಗದಂತೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೊಜ್ಜು ಮತ್ತು ಇತರೆ ಆರೋಗ್ಯದ ಅಪಾಯಗಳು ಹೆಚ್ಚುತ್ತಿವೆ.

WHO ಬಿಚ್ಚಿಟ್ಟ ಆತಂಕಕಾರಿ ವಿಷಯ ಏನು?
2022 ರಲ್ಲಿ ವಿಶ್ವದಾದ್ಯಂತ ಎಂಟು ಜನರಲ್ಲಿ ಒಬ್ಬರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಅಧಿಕ ತೂಕ ಹೊಂದಿದ್ದ 250 ಕೋಟಿ ವಯಸ್ಕರಲ್ಲಿ 89 ಕೋಟಿ ಜನರು ಬೊಜ್ಜು ಸಮಸ್ಯೆಗೆ ಒಳಗಾಗಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿಯೂ ಬೊಜ್ಜು ಹೆಚ್ಚಾಗಿದೆ. 5-19 ವರ್ಷ ವಯಸ್ಸಿನ ಸುಮಾರು 16 ಕೋಟಿ ಹದಿಹರೆಯದವರು ಬೊಜ್ಜು ಸಮಸ್ಯೆಗೆ ತುತ್ತಾಗಿದ್ದಾರೆ.

Bread Pizza 2

More Read

RV Deshpande
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಆರ್.ವಿ.ದೇಶಪಾಂಡೆ
C.T.RAVI
ನಿಷ್ಕ್ರಿಯವಾಗಿರೋ ಸರ್ಕಾರದ ಆಡಳಿತ ಯಂತ್ರ ದೆಹಲಿಗೆ ಶಿಫ್ಟ್ ಆಗಿದೆ: ಸಿ.ಟಿ‌.ರವಿ
ARAGA JNANENDRA
ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಇಲ್ಲ: ಅರಗ ಜ್ಞಾನೇಂದ್ರ

ಬೊಜ್ಜು ಹೊಂದುವವರಲ್ಲಿ ಭಾರತವೇ ನಂ.1
ಭಾರತದಲ್ಲಿಯೂ ಬೊಜ್ಜು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. 2030 ರ ವೇಳೆಗೆ ಭಾರತವು ಜಾಗತಿಕವಾಗಿ ಅತಿ ಹೆಚ್ಚು ತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳನ್ನು ಹೊಂದಬಹುದು ಎಂದು ಯುನಿಸೆಫ್ ಎಚ್ಚರಿಸಿದೆ. ಸುಮಾರು 3 ಕೋಟಿ ಹದಿಹರೆಯದವರು ಬೊಜ್ಜು ಹೊಂದುವ ನಿರೀಕ್ಷೆಯಿದೆ. ಜಗತ್ತಿನ ಒಟ್ಟು ಪ್ರಮಾಣದಲ್ಲಿ ಶೇ.11 ರಷ್ಟು ಭಾರತದ್ದೇ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೊಜ್ಜು/ತೂಕ ಹೆಚ್ಚಳದಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೀಲು ಸಮಸ್ಯೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಅಪಾಯವೂ ಹೆಚ್ಚುತ್ತಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

1995ರಲ್ಲಿ ಆರಂಭ
ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪರಿಕಲ್ಪನೆ ಹೊಸದೇನಲ್ಲ. 1995 ರ ಆರಂಭದಲ್ಲಿ, Waiter.com (ಆಗ ವರ್ಲ್ಡ್ ವೈಡ್ ವೇಟರ್ ಎಂದು ಕರೆಯಲಾಗುತ್ತಿತ್ತು) ಎಂಬ ಪ್ಲಾಟ್‌ಫಾರ್ಮ್ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಇಂಟರ್ನೆಟ್ ಆಧಾರಿತ ಆಹಾರ ವಿತರಣೆಯನ್ನು ನೀಡಲು ಪ್ರಾರಂಭಿಸಿತು. ನಂತರ ಇತರ ಯುಎಸ್ ನಗರಗಳಿಗೆ ಇದು ವಿಸ್ತರಿಸಿತು. ಗ್ರಾಹಕರು ಡಿಜಿಟಲ್ ಮೆನುಗಳಿಗೆ ಆಕರ್ಷಿತರಾದರು. ತಮ್ಮ ಆರ್ಡರ್‌ಗಳನ್ನು ನೀಡಿದರು, ಆನ್‌ಲೈನ್ ಪಾವತಿ ಮಾಡಿದರು. ಇದು ಈಗ ಪ್ರಪಂಚದಾದ್ಯಂತ ವ್ಯಾಪಿಸಿದೆ.

ಭಾರತದಲ್ಲಿ ಹೆಚ್ಚುತ್ತಿವೆ ಫುಡ್ ಆರ್ಡರ್‌ಗಳು
ಕಳೆದ ದಶಕದಲ್ಲಿ ಭಾರತದಲ್ಲಿ ಈ ವಲಯವು ಉತ್ತುಂಗಕ್ಕೇರಿತು. ಹೆಚ್ಚಿದ ಸ್ಮಾರ್ಟ್‌ಫೋನ್‌ಗಳ ಬಳಕೆ, ಕಡಿಮೆ ಬೆಲೆಯ ಮೊಬೈಲ್ ಡೇಟಾ, ಆದಾಯದಲ್ಲಿನ ಹೆಚ್ಚಳ ಮೊದಲಾದ ಕಾರಣಗಳಿಗೆ ಫುಡ್ ಆರ್ಡರ್ ಪ್ರವೃತ್ತಿ ಮಿತಿಮೀರಿದೆ. 2008 ರಲ್ಲಿ ಸ್ಥಾಪನೆಯಾದ ಪ್ಲಾಟ್‌ಫಾರ್ಮ್‌ವೊಂದು, ರೆಸ್ಟೋರೆಂಟ್ ಅನ್ವೇಷಣೆ ಸೇವೆಯಾಗಿ ಪ್ರಾರಂಭವಾಯಿತು. ಆದರೆ, ಅದು 2015 ರಲ್ಲಿ ವಿತರಣಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತು. 2014 ರಲ್ಲಿ ಪ್ರಾರಂಭವಾದ ಮತ್ತೊಂದು ಪ್ಲಾಟ್‌ಫಾರ್ಮ್‌ ತ್ವರಿತ ಸೇವೆ ಕ್ರಮದೊಂದಿಗೆ ಬಹುಬೇಗ ತನ್ನ ನೆಲೆ ವಿಸ್ತರಿಸಿಕೊಂಡಿತು. ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯು 2019 ರಿಂದ 2023 ರವರೆಗೆ 2.8 ಪಟ್ಟು ಬೆಳೆದಿದೆ. ವಾರ್ಷಿಕವಾಗಿ 18% ನಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಭಾರತೀಯ ಆಹಾರ ಸೇವಾ ಉದ್ಯಮದ ಬೆಳವಣಿಗೆಯ ದರಕ್ಕಿಂತ 1.5 ಪಟ್ಟು ಹೆಚ್ಚು ಎಂದು ಬೈನ್ & ಕಂಪನಿ ಹಾಗೂ ಐಪಿಒ-ಬೌಂಡ್ ಸ್ವಿಗ್ಗಿಯ 2024 ರ ವರದಿಯು ತಿಳಿಸಿದೆ. ಭಾರತದಲ್ಲಿ ಆಹಾರ ಸೇವೆಗಳ ಮಾರುಕಟ್ಟೆ 2030 ರ ವೇಳೆಗೆ ಸುಮಾರು 9-10 ಲಕ್ಷ ಕೋಟಿ ರೂ.ಗಳನ್ನು ಮುಟ್ಟುವ ನಿರೀಕ್ಷೆಯಿದೆ. ಈ ಹೊತ್ತಿಗೆ ಆನ್‌ಲೈನ್ ಆಹಾರ ವಿತರಣೆಯು ಒಟ್ಟಾರೆ ಮಾರುಕಟ್ಟೆಗೆ ಸುಮಾರು 20% ನಷ್ಟು ಕೊಡುಗೆ ನೀಡುವ ನಿರೀಕ್ಷೆಯಿದೆ. ಇದು ಆಹಾರ ಪದ್ಧತಿಯಲ್ಲಿ ಸಾಂಸ್ಕೃತಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಸಂದರ್ಭಗಳಿಗೆ ಮಾತ್ರ ಮೀಸಲಾಗಿದ್ದು, ಈಗ ದೈನಂದಿನ ಪರಿಪಾಠವಾಗಿ ಬದಲಾಗಿದೆ.

food delivery

ಆರೋಗ್ಯದ ಮೇಲಾಗುತ್ತಿರೋ ಎಫೆಕ್ಟ್ ಏನು?
ಆನ್‌ಲೈನ್ ಫುಡ್ ಆರ್ಡರ್ ಪ್ರವೃತ್ತಿಯಿಂದ ಜನರ ಜೀವನಶೈಲಿಯಲ್ಲಿ ಬದಲಾವಣೆಯಾಗಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಮನೆಯಲ್ಲೇ ಆರೋಗ್ಯಕರ ಅಡುಗೆ ತಯಾರಿಸುವ ಪರಿಪಾಠವೂ ಇಲ್ಲವಾಗಿದೆ. ಆರೋಗ್ಯಕರವಲ್ಲದ ಹೊರಗಡೆಯ ರುಚಿಕರ ಆಹಾರ ಮತ್ತು ಜಂಕ್‌ಫುಡ್‌ಗಳಿಗೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅಧಿಕ ತೂಕ, ಬೊಜ್ಜು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆಂದು ಅಧ್ಯಯನಗಳು ತಿಳಿಸಿವೆ. 2024ರಲ್ಲಿ ಚೀನಾ ಅಧ್ಯಯನವೊಂದನ್ನು ನಡೆಸಿತು. ಆನ್‌ಲೈನ್‌ನಲ್ಲಿ ಹೆಚ್ಚಾಗಿ ಫುಡ್ ಆರ್ಡರ್ ಮಾಡಿ ಸೇವಿಸುವವರಲ್ಲಿ ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಕುಳಿತಲ್ಲೇ ತಮಗೆ ಬೇಕಾದ್ದನ್ನು ಸುಲಭವಾಗಿ ಆರ್ಡರ್ ಮಾಡುತ್ತಾರೆ. ಇದರಿಂದ ಅತಿಯಾಗಿ ತಿನ್ನುವ ಹವ್ಯಾಸವೂ ರೂಢಿಯಾಗಿದೆ. ಹೆಚ್ಚಿನ ಕ್ಯಾಲೋರಿ ಇರುವ ತಿನಿಸುಗಳನ್ನೇ ಆಯ್ಕೆ ಮಾಡುತ್ತಾರೆ. ಪೌಷ್ಟಿಕತೆಗೆ ಬದಲಾಗಿ ಸಂಸ್ಕರಿಸಿದ ಆಹಾರಗಳನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಾರೆ. ಹೀಗಾಗಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

‘ಕಳಪೆ ಆಹಾರ ಪದ್ಧತಿಗಳು: ಭಾರತದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಕಡೆಗಿನ ಆಕರ್ಷಣೆ’ ಎಂಬ ಶೀರ್ಷಿಕೆಯಡಿ 2021 ರಲ್ಲಿ ಅಧ್ಯಯನ ನಡೆಸಲಾಗಿತ್ತು. ಜಂಕ್‌ಫುಡ್‌ನ್ನು ಹೆಚ್ಚಾಗಿ ಆರ್ಡರ್ ಮಾಡಿ ಸೇವಿಸುತ್ತಿರುವುದೇ ಜನರಲ್ಲಿ ಬೊಜ್ಜು ಸಮಸ್ಯೆಗೆ ಕಾರಣವಾಗಿದೆ. ಸಕ್ಕರೆಯುಕ್ತ ಆಹಾರದ ಅತಿಯಾದ ಸೇವನೆಯು ಹಲ್ಲುಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಮನೆ ಆಹಾರ ಸೇವಿಸುವವರಲ್ಲಿ ಯಾವುದೇ ಅನಾರೋಗ್ಯ ತೊಂದರೆಗಳು ಕಂಡುಬಂದಿಲ್ಲ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ, ಹೆಚ್ಚಿನ ಕ್ಯಾಲೊರಿ, ಪೋಷಕಾಂಶಗಳ ಕೊರತೆ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನೇ ಜನರು ಆರಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಅಮೆರಿಕನ್ ಅಧ್ಯಯನದ ವರದಿಯಲ್ಲಿ, ಹೆಚ್ಚು ಆರ್ಡರ್ ಮಾಡಿದ ಆಹಾರಗಳಲ್ಲಿ ‘ಚೀಸ್ ಬರ್ಗರ್ ಮತ್ತು ಫ್ರೈಸ್, ಪಿಜ್ಜಾ, ನ್ಯಾಚೋಸ್, ಚೀಸ್‌ಕೇಕ್, ಬೇಬಿ ಬ್ಯಾಕ್ ಹಂದಿ ಪಕ್ಕೆಲುಬು, ಚಿಕನ್ ಮತ್ತು ವೇಫಲ್ ಸ್ಲೈಡರ್‌ಗಳು ಇತ್ಯಾದಿಗಳಿವೆ. ಆನ್‌ಲೈನ್ ಸೇವೆಗಳಲ್ಲಿ ಆಹಾರದ ಗುಣಮಟ್ಟ, ಸುರಕ್ಷತೆ ಇರಲ್ಲ. ಆರ್ಡರ್ ಮಾಡಿ ಆಹಾರದೊಳಗೆ ಇಲಿ, ಹಲ್ಲಿ, ಜಿರಳೆ, ಹುಳ, ಪ್ಲಾಸ್ಟಿಕ್ ಕವರ್ ಮೊದಲಾದವು ಇವೆ ಎಂದು ಗ್ರಾಹಕರು ದೂರಿರುವ ಸಾಕಷ್ಟು ಪ್ರಕರಣಗಳು ಇದಕ್ಕೆ ನಿದರ್ಶನ.

WHO

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇ-ಕಾಮರ್ಸ್ ಆಹಾರ ವೇದಿಕೆಗಳಿಗೆ ಕಠಿಣ ನಿಯಮಗಳನ್ನು ರೂಪಿಸಿದೆ. ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ಗಳ 70 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, FSSAI ಎಲ್ಲಾ ರಶೀದಿಗಳು ಮತ್ತು ಇನ್‌ವಾಯ್ಸ್‌ಗಳಲ್ಲಿ ಪರವಾನಗಿ ಮತ್ತು ನೋಂದಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು, ಗೋದಾಮು ಮತ್ತು ಸಂಗ್ರಹಣಾ ಸೌಲಭ್ಯದ ವಿವರಗಳನ್ನು FoSCoS ಪೋರ್ಟಲ್‌ನಲ್ಲಿ ಬಹಿರಂಗಪಡಿಸಬೇಕು. ಎಲ್ಲಾ ಆಹಾರ ನಿರ್ವಾಹಕರು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣೀಕರಣ (FoSTaC) ಕ್ಕೆ ಒಳಗಾಗಬೇಕು, ಗೋದಾಮುಗಳನ್ನು ಪರವಾನಗಿ ನೀಡಬೇಕು ಮತ್ತು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದೆ.

ವೇಗದ ಜೀವನ.. ಕಾಯಿಲೆಗೆ ಆಹ್ವಾನ
ನವಿ ಮುಂಬೈನ ಖಾರ್ಘರ್‌ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಡಯೆಟಿಕ್ಸ್ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಪಾಂಡಾ, ಆನ್‌ಲೈನ್ ಫುಡ್‌ ಆರ್ಡರ್‌ ಅಪ್ಲಿಕೇಶನ್‌ಗಳನ್ನು ತ್ವರಿತ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಅವುಗಳ ವ್ಯಾಪಕ ಬಳಕೆಯು ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜು, ಮಧುಮೇಹ ಮತ್ತು ಜೀವನಶೈಲಿ-ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ಅಲ್ಟ್ರಾ-ಸಂಸ್ಕರಿಸಿದ ಆಹಾರವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಹೆಚ್ಚುತ್ತಿರುವ ಬೊಜ್ಜಿಗೆ ಅವುಗಳ ಕೊಡುಗೆ ಗಣನೀಯವಾಗಿದೆ. ಹಾಗಂತ, ಈ ಅಪ್ಲಿಕೇಶನ್‌ಗಳ ಮೇಲೆ ದೂಷಣೆ ಸರಿಯಲ್ಲ. ಜೀವನಶೈಲಿ ಆಯ್ಕೆಗಳು, ಆಹಾರ ಪದ್ಧತಿ ಮತ್ತು ವೈಯಕ್ತಿಕ ದಿನಚರಿ ಸಹ ಪ್ರಮುಖ ಪಾತ್ರವಹಿಸುತ್ತವೆ. ಹಠಾತ್‌ ನಿರ್ಧಾರ, ಬಾಯಿಚಪಲ ಮೊದಲಾದ ಕಾರಣಗಳು ಸಾಮಾನ್ಯವಾಗಿ ಜನರಿಗೆ ಹಸಿವಿಲ್ಲದಿದ್ದರೂ ತಿನ್ನಲು ಪ್ರೇರೇಪಿಸುತ್ತವೆ ಎಂದು ತಿಳಿಸಿದ್ದಾರೆ. ಫುಡ್‌ ಡೆಲಿವರಿಗೆ ಅಪ್ಲಿಕೇಶನ್‌ಗಳಿಂದ ನಿರಂತರವಾಗಿ ತಿನಿಸುಗಳು ಮತ್ತು ರಿಯಾಯಿತಿಗೆ ಸಂಬಂಧಿಸಿದ ಸಂದೇಶಗಳು ಮೊಬೈಲ್‌ಗೆ ಬರುತ್ತಿರುತ್ತವೆ. ಅದನ್ನು ನೋಡಿ ತಿನ್ನಲು ಆಸೆ ಪಡುವವರೇ ಹೆಚ್ಚು. ತಕ್ಷಣ ಬುಕ್‌ ಮಾಡಿ ಆರ್ಡರ್‌ ಪಡೆಯುವವರು ಹೆಚ್ಚಾಗಿದ್ದಾರೆ.

ಈ ರೀತಿಯ ಆಕರ್ಷಣೆ ತಿನ್ನಲು ಹಸಿವಿಲ್ಲದಿದ್ದರೂ ತಿನ್ನುವಂತೆ ಮಾಡುತ್ತದೆ. ಇದನ್ನು ಜನರು ಮಿತಿಗೊಳಿಸಬೇಕು. ಪ್ರಜ್ಞಾಪೂರ್ವಕ ಆಯ್ಕೆಗಳು ಇರಬೇಕು. ಆಹಾರವನ್ನು ಸೇವಿಸುವ ಮೊದಲು ಅದು ಸುರಕ್ಷಿತ, ಆರೋಗ್ಯಕರ ಮತ್ತು ಪೌಷ್ಟಿಕಾಂಶಕ್ಕೆ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಲೇಬಲ್ ಅನ್ನು ಎಚ್ಚರಿಕೆಯಿಂದ ಓದುವುದು ಮತ್ತು ಮಾರ್ಕೆಟಿಂಗ್ ಒತ್ತಡಗಳನ್ನು ವಿರೋಧಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜನರು ಆರೋಗ್ಯಕರ ಆಯ್ಕೆಗಳಿಗೆ ಒತ್ತು ನೀಡಬೇಕು. ಸರಿಯಾದ ಆಯ್ಕೆಗಳನ್ನು ಮಾಡಬೇಕು.

Share This Article
Facebook Whatsapp Whatsapp Telegram Copy Link
Cinema News
Ranveer Singh At Mysuru Chamundeshwari Temple
ʻಕಾಂತಾರʼ ದೈವಕ್ಕೆ ಅಪಮಾನ – ಚಾಮುಂಡಿ ತಾಯಿ ಎದುರು ತಲೆಬಾಗಿ ರಣವೀರ್‌ ಸಿಂಗ್‌ ಕ್ಷಮೆಯಾಚನೆ
niranjan sudhindra engagement
ಉಪೇಂದ್ರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ಅಣ್ಣನ ಮಗ ನಿರಂಜನ್‌ ಎಂಗೇಜ್ಮೆಂಟ್‌
hema malini padma award 2026
ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ – ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ
Kavya Shaiva
ಬಿಗ್‌ಬಾಸ್ ಸ್ಪರ್ಧಿ ಕಾವ್ಯಾಗೆ ಅವಮಾನ – ವೇದಿಕೆ ಮೇಲೆ ಹೈಡ್ರಾಮಾ, ಅಭಿಮಾನಿಗಳ ಗದ್ದಲ

You Might Also Like

Joseph Vijay

ಡಿಕೆಶಿ ಹೇಳಿಕೆಗೆ ವಿರೋಧ – ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್‌ ಒತ್ತಾಯ

35 minutes ago
virat kohli shubman gill

80% ಮಳೆ ಭೀತಿ: ಆರ್‌ಸಿಬಿ vs ಜಿಟಿ ಪಂದ್ಯ ರದ್ದಾದ್ರೆ ಯಾರಿಗೆ ಸಂಕಷ್ಟ?

41 minutes ago
Accident 3

ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ ವೇಯಲ್ಲಿ ಡಿವೈಡರ್‌ಗೆ ಇನ್ನೋವಾ ಕಾರು ಡಿಕ್ಕಿ – ಬಾಲಕ ಸಾವು

50 minutes ago
Huge opposition to relocation of Hampi elephant Lakshmi Tears from Mavutanas family protests from locals

ಹಂಪಿ ಆನೆ ಲಕ್ಷ್ಮಿ ಸ್ಥಳಾಂತರಕ್ಕೆ ಭಾರಿ ವಿರೋಧ – ಮಾವುತನ ಕುಟುಂಬದ ಕಣ್ಣೀರು, ಸ್ಥಳೀಯರಿಂದ ಪ್ರತಿಭಟನೆ!

1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact