ಕೆಡಿ ಸಿನಿಮಾದ (KD Cinema) ನಂತರ ಮುಂದೇನು ಅನ್ನುವ ಪ್ರಶ್ನೆಯನ್ನು ಧ್ರುವ ಸರ್ಜಾಗೆ (Dhruva Sarja) ಹಲವರು ಮಾಡುತ್ತಿದ್ದರು. ಹಲವಾರು ಕಥೆಗಳನ್ನು ಕೇಳಿದ್ದ ಧ್ರುವ ಸರ್ಜಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಈವರೆಗೂ ಉತ್ತರ ಕೊಟ್ಟಿಲ್ಲ. ಬಹಿರಂಗವಾಗಿಯೂ ಮಾತಾಡಿಲ್ಲ. ಆದರೆ, ಧ್ರುವ ಸರ್ಜಾ ಸದ್ಯಕ್ಕೆ ಮೂರು ಭಾರೀ ಬಜೆಟ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಧ್ರುವ ಸರ್ಜಾ ಆಪ್ತರು ಹೇಳುವ ಪ್ರಕಾರ ಕನ್ನಡದ ಮೂರು ಪ್ರತಿಭಾವಂತ ನಿರ್ದೇಶಕರಿಗೆ ಧ್ರುವ ಸರ್ಜಾ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಈಗಾಗಲೇ ಕೆರೆಬೇಟೆ ಸಿನಿಮಾ ಮಾಡಿರುವ ರಾಜ್ ಗುರು, ಧ್ರುವಗಾಗಿಯೇ ವಿಶೇಷ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಧ್ರುವ ಕೂಡ ಕಥೆ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಹಿಂದಿಯ ನಿರ್ಮಾಣ ಸಂಸ್ಥೆಯೊಂದು ತಯಾರಿಸಲಿದೆಯಂತೆ. ಇದನ್ನೂ ಓದಿ: ಶೆಫಾಲಿ ಸಾವಿನ ಬೆನ್ನಲ್ಲೇ ಪುನೀತ್ ಸಾವಿನ ಬಗ್ಗೆ ಚರ್ಚೆ
ಮಫ್ತಿ ಹಾಗೂ ಭೈರತಿ ರಣಗಲ್ ಖ್ಯಾತಿಯ ನರ್ತನ್ ಕೂಡ ಧ್ರುವಗಾಗಿ ಚಿತ್ರವೊಂದನ್ನು ಮಾಡಲಿದ್ದಾರಂತೆ. ಈಗಾಗಲೇ ಧ್ರುವ ಜೊತೆ ಮಾತುಕತೆ ಕೂಡ ಆಗಿದೆಯಂತೆ. ಇದು ಭಾರೀ ಬಜೆಟ್ ಚಿತ್ರವಾಗಲಿದ್ದು, ಕೆಡಿ ಚಿತ್ರವನ್ನು ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಚಿತ್ರಕ್ಕೆ ಹಣ ಹೂಡಿಕೆ ಮಾಡಲಿದೆಯಂತೆ.
ದರ್ಶನ್ ಗಾಗಿ ಜಗ್ಗುದಾದಾ ಸಿನಿಮಾ ಮಾಡಿದ್ದ ರಾಘವೇಂದ್ರ ಹೆಗ್ಡೆ ಕೂಡ ಧ್ರುವಗಾಗಿ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಗೆ ಶಕ್ತಿಮಾನ್ ಅನ್ನೋ ಟೈಟಲ್ ಇಟ್ಟುಕೊಂಡು ಕಥೆಯನ್ನೂ ಹೆಣೆದಿದ್ದಾರಂತೆ. ಈ ಚಿತ್ರವಾಗಲು ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಾಲಿವುಡ್ ನಟಿ ಶೆಫಾಲಿ ಸಾವು – ಮುಂಬೈ ಪೊಲೀಸರು ಹೇಳಿದ್ದೇನು?