ಬೆಂಗಳೂರು: ಸಚಿವರುಗಳ ವಿರುದ್ಧ ಶಾಸಕರ ಆರೋಪ ಹಾಗೂ ಸಚಿವರ ರಾಜೀನಾಮೆಗೆ ಒತ್ತಾಯ ವಿಚಾರ ನಡೆದಾಗ ನಾನು ವಿದೇಶದಲ್ಲಿದ್ದೆ. ನಾನೂ ನೋಡಿದ್ದೇನೆ, ಶಾಸಕರು ಸಿಎಂ ಅವರನ್ನು ಭೇಟಿಯಾಗಿ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ಯಾರ್ಯಾರು ಹೇಳಿಕೆ ಕೊಟ್ಟಿದ್ದಾರೆ ಅವರನ್ನು ಸಿಎಂ (Siddaramaiah) ಕರೆದು ಮಾತನಾಡುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನೇನು ಸಮಸ್ಯೆ ಇದೆಯೋ ಅದನ್ನು ಸಿಎಂ ಪರಿಹರಿಸುತ್ತಾರೆ. ಏನೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಶಾಸಕರ ಅಭಿಪ್ರಾಯ ಗೌರವಿಸಬೇಕಾಗುತ್ತದೆ, ಅದನ್ನ ಮಾಡುತ್ತಾರೆ. ಯಾರ ವಿರುದ್ಧ ಆರೋಪ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಯಾವ ಉಸ್ತುವಾರಿ ಸಚಿವರು ಸ್ಪಂದಿಸುತ್ತಿಲ್ಲ, ಯಾರು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಾರೆ ಅವರ ವಿರುದ್ದ ಸಿಎಂ, ಡಿಸಿಎಂ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ
ಸಿಎಂ, ಜಮೀರ್ ಅವರಿಂದ ವಿವರಣೆ ಪಡೆದುಕೊಳ್ಳುತ್ತಾರೆ. ಸಿಎಂ ಅವರು ದೆಹಲಿಗೆ ಹೋಗಿದ್ದು ಬೇರೆ ವಿಚಾರಕ್ಕೆ ಆದರೆ ಈಗ ಸಂಪುಟ ವಿಸ್ತರಣೆ ಸೇರಿ ಏನೇ ಇದ್ದರೂ ಅದು ಹೈಕಮಾಂಡ್ ನಿರ್ಣಯ. ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ, ಅದೇನು ತಪ್ಪಿಲ್ಲ. ಸಿಎಂ ಅವರು ಕರೆದು ಸಮಸ್ಯೆ ಬಗೆಹರಿಸುತ್ತಾರೆ. ಜಮೀರ್ ಅವರ ಪಿಎ ಮಾತಾಡಿದ್ದು, ಸತ್ಯಾಂಶ ತಿಳಿದುಕೊಂಡು ಮಾತನಾಡಬೇಕು. ನಾವು ಸಲಹೆ ಸೂಚನೆ ಕೊಡುವಷ್ಟು ದೊಡ್ಡವರಲ್ಲ. ಎಲ್ಲರ ಸಮಸ್ಯೆಗೆ ಪರಿಹಾರ ಸಿಎಂ ಅವರು ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಗಂಡಸರಿಗೆ ತೊಂದರೆಯಾಗ್ತಿದೆ: ಆರ್ವಿ ದೇಶಪಾಂಡೆ