ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ (Krishi Honda) ತಾಯಿ ಮಗಳ ಮೃತದೇಹಗಳು ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇಂಡರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 30 ವರ್ಷದ ಮಾಲಾ ಹಾಗೂ 8 ವರ್ಷದ ಅನುಶ್ರೀ ಮೃತರು. ಮೃತ ಮಾಲಾ ಜಮೀನು ಭಾಗ ಮಾಡಿಕೊಳ್ಳುವಂತೆ ಗಂಡನಿಗೆ ಒತ್ತಡ ಹಾಕಿದ್ದಳಂತೆ ಹಾಗಾಗಿ ಕುಟುಂಬಸ್ಥರಲ್ಲಿ ಜಮೀನು ವಿಚಾರದಲ್ಲಿ ಮನಸ್ತಾಪಗಳು ಮೂಡಿದ್ದವು. ಇದೇ ವಿಚಾರದಲ್ಲಿ ಗಂಡ ನಾಗರಾಜ್ ಅತ್ತೆ ಮೈದುನ ಮುನಿರಾಜು, ಅತ್ತೆ ಅಂಜಿನಮ್ಮ ಸೇರಿ ನಾದಿನಿ ವಿರುದ್ದ ಕೊಲೆ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂಗೆ ಪರಮೇಶ್ವರ್ ಭೇಟಿ – ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ಸ್ಥಳ ವೀಕ್ಷಣೆ
ಮೃತ ಮಾಲಾ ತಂದೆ-ತಾಯಿ ಸಂಬಂಧಿಕರು ಗಂಡನ ಮನೆಯವರ ಜೊತೆ ಗಲಾಟೆ ನಡೆಸಿ ಮನೆಯ ಮುಂದೆಯೇ ಮೃತ ದೇಹ ಅಂತ್ಯಕ್ರಿಯೆ ಮಾಡಿ ಮಣ್ಣು ಮಾಡಲು ಮುಂದಾಗಿದ್ದಾರೆ. ಈ ವೇಳೆ ಗಲಾಟೆ ನಡೆದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಆಗಮಿಸಿ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಹಾಸನ | ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದ ಸಮಾಜ ಸೇವಕ ನಿಶಾದ್ ಅಹಮ್ಮದ್ ಹೃದಯಾಘಾತದಿಂದ ನಿಧನ