ಬೀದರ್: ಆಸ್ತಿ ನೋಂದಣಿಗಾಗಿ ಪಿಡಿಓ (PDO) ಹಣ ಪಡೆಯುತ್ತಿರುವ ವೈರಲ್ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಕಮಲನಗರ (Kamalanagar) ಪಿಡಿಓ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹಣ ಪಡೆದಿದ್ದು ನಿಜ, ಆದರೆ ಅದು ಟ್ಯಾಕ್ಸ್ ಮತ್ತು ಅಭಿವೃದ್ಧಿ ಹಣವಾಗಿದ್ದು 2024ರ ಅಕ್ಟೋಬರ್ 21ರಂದು ಫಲಾನುಭವಿ ಆಸ್ತಿ ಟ್ಯಾಕ್ಸ್ ಕಟ್ಟಿದ್ದಾರೆ. ಆದರೆ ಇದು ಲಂಚ ಎಂದು ಕೆಲವು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅದು ಪ್ಲಾಟ್ ಆಸ್ತಿ ನೋಂದಣಿಯ ಟ್ಯಾಕ್ಸ್ ಹಣವಾಗಿದೆ. ಸಿಇಓಗೆ ದೂರು ನೀಡಿದವರು 8 ತಿಂಗಳ ಹಿಂದೆಯೇ ಈ ವೀಡಿಯೋ ಮಾಡಿದ್ದು, ಈಗ ವೈರಲ್ ಮಾಡಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಲ್ಪ್ಲೈನ್ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್ಐಆರ್
ಪ್ರಕರಣ ಏನು?
ಬೀದರ್ ಜಿಲ್ಲೆಯ ಕಮಲನಗರ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಹಣ ಪಡೆದು ಎಣಿಸಿಕೊಳ್ಳುತ್ತಿರುವ ಪಿಡಿಓ ರಾಜಕುಮಾರ್ ವೀಡಿಯೋ ವೈರಲ್ ಆಗಿತ್ತು. ಹಣ ಪಡೆಯುತ್ತಿರುವ ವೀಡಿಯೋದೊಂದಿಗೆ ಜಿ.ಪಂ ಸಿಇಓಗೆ ಹೋರಾಟಗಾರ ದೀಲಿಪ್ ಮುದಾಳೆ ಎಂಬವರು ದೂರು ನೀಡಿದ್ದರು. ಇದನ್ನೂ ಓದಿ: ಬಂಕರ್ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ