Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಮಂಡ್ಯ| ಮೂರು ದಿನಗಳ ಅಕ್ಷರ ಜಾತ್ರೆಗೆ ತೆರೆ

Public TV
Last updated: December 22, 2024 9:17 pm
Public TV
Share
2 Min Read
3 day Kannada Literary Conference concludes at mandya 1
SHARE

ಮಂಡ್ಯ: ಸಾಲು ಸಾಲು ಗೊಂದಲ, ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಡ್ಯದ ಸಾಹಿತ್ಯ ಸಮ್ಮೇಳನ (Mandya Kannada Sahitya Sammelana) ಸಂಪನ್ನವಾಗಿದೆ. ಮೂರು ದಿನಗಳ ಕಾಲ ಸಕ್ಕರೆನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಮೂರು ದಿನದ ನುಡಿ ಜಾತ್ರೆ, ದಾಖಲೆಯ ಜನ ಜಾತ್ರೆಯೊಂದಿಗೆ ಯಶಸ್ವಿಯಾಯ್ತು.

ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಜನ ಬರ್ತಾರಾ? ಸಾಕಷ್ಟು ಗೊಂದಲಗಳ ನಡುವೆ ಸಮ್ಮೇಳನ ಯಶಸ್ವಿಯಾಗುತ್ತಾ? ಅನ್ನೋ ಚರ್ಚೆಗಳು ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತು. ಆದರೆ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿದ ಜನ ಸೇರುವ ಮೂಲಕ ಆ ಎಲ್ಲಾ ಚರ್ಚೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ.

ಮೊದಲ ದಿನದಿಂದ ಕೊನೆ ದಿನದವರೆಗೂ ಸಾಗರೋಪಾದಿಯಾಗಿ ಜನ ಸಮ್ಮೇಳನಕ್ಕೆ ಬರುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣವಾದ್ರು. ಜೊತೆಗೆ ಮೂರು ದಿನಗಳೂ ಕೂಡ ಯಾವುದೇ ಗೊಂದಲ, ಗದ್ದಲಕ್ಕೆ ಎಡೆ ಮಾಡಿಕೊಡದೆ ಹೊರಗಿನಿಂದ ಬಂದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ಉತ್ತಮ ಆತಿಥ್ಯ ನೀಡುವಲ್ಲೂ ಸೈ ಎನಿಸಿಕೊಂಡರು.

3 day Kannada Literary Conference concludes at mandya 2

ಈ ಬಾರಿಯ ಸಮ್ಮೇಳನದಲ್ಲಿ ಹೊರನಾಡ ಕನ್ನಡಿಗರಷ್ಟೇ ಅಲ್ಲದೇ, ವಿದೇಶಿ ಕನ್ನಡಿಗರು ಕೂಡ ಭಾಗಿಯಾಗಿದರು. ಇದೇ ಮೊದಲ ಬಾರಿಗೆ ವಿದೇಶಿ ಕನ್ನಡಿಗರಿಗಾಗಿ ವಿಶೇಷ ಗೋಷ್ಠಿಯನ್ನೇ ಆಯೋಜನೆ ಮಾಡಲಾಗಿತ್ತು. ಇದೇ ಸಮ್ಮೇಳನದಲ್ಲಿ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಬೆಂಕಿ ಬಸಣ್ಣ ಅವರ ಸಂಪಾದಕತ್ವದಲ್ಲಿ ಮುದ್ರಿಸಿರುವ ವಿಶ್ವಕನ್ನಡ ಕೂಟಗಳ ಕೈಪಿಡಿ ಬಿಡುಗಡೆ ಮಾಡಲಾಯ್ತು. ಇದನ್ನೂ ಓದಿ: ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್‌ಗಳ ವಿರುದ್ಧ ಎಫ್‍ಐಆರ್

ಮೂರು ದಿನಗಳ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ವಿಚಾರಗೋಷ್ಠಿ, ಕವಿಗೋಷ್ಠಿಗಳನ್ನು ಆಯೋಜಿಸಿ ಎಲ್ಲಾ ವರ್ಗದವರಿಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಯ್ತು. ಇದರೊಂದಿಗೆ ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮೇಳದ ಜೊತೆ ಜೊತೆಗೆ ಸ್ಥಳೀಯ ಹಾಗೂ ಖ್ಯಾತ ಕಲಾವಿದರು ನಡೆಸಿಕೊಟ್ಟ ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಆಕರ್ಷಣೀಯವಾಗಿತ್ತು.

ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯ ಸಮ್ಮೇಳನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಕೇಂದ್ರ ಕೂಡ ತೆರೆದು ರೈತರನ್ನ ಉತ್ತೇಜಿಸುವ ಪ್ರಯತ್ನ ಮಾಡಲಾಯಿತು. ಇದೇ ಮೊದಲ ಬಾರಿಗೆ ಅತೀ ಗಣ್ಯರಿಂದ ಹಿಡಿದು ಶ್ರೀ ಸಾಮಾನ್ಯನವರೆಗೂ ಒಂದೇ ಬಗೆಯ ಊಟೋಪಚಾರ ಮಾಡಲಾಗಿತ್ತು. ಸಮ್ಮೇಳನದ ಅಂಗವಾಗಿ ಮಂಡ್ಯ ನಗರವನ್ನ ವರ್ಣರಂಜಿತ ದೀಪಾಂಲಕಾರದಿಂದ ಸಿಂಗರಿಸಲಾಗಿತ್ತು. ಸಮಾರೋಪದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರು ದಸರಾದಲ್ಲಿ ಮಾತ್ರ ನಡೆಯುತ್ತಿದ್ದ ಪೊಲೀಸ್ ಬ್ಯಾಂಡ್ ಗೆ ಜನ ಮನಸೋತರು.

cheluvarayaswamy 2

ಸಮ್ಮೇಳನದ ಸಮಾರೋಪ ಸಮಾರಂಭ ರಾಜಕೀಯ ಬದ್ಧ ವೈರಿಗಳ ಮುಖಾಮುಖಿಗೆ ಸಾಕ್ಷಿಯಾಯ್ತು. ಹೆಚ್‌ಡಿಕೆ ವೇದಿಕೆ ಏರುತ್ತಿದ್ದಂತೆ ಎದ್ದುನಿಂತಿದ್ದ ಚಲುವರಾಯಸ್ವಾಮಿ ಮುಂದೆಯೇ ಹೋದರೂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿಸದೇ ಮುಂದೆ ಸಾಗಿ ನಿಗದಿಯಾಗಿದ್ದ ಆಸನದಲ್ಲಿ ಕುಳಿತರು.

ಸ್ವಾಗತದ ವೇಳೆ ಖುದ್ದು ಜಿಲ್ಲಾ ಮಂತ್ರಿಯಾದ ಚಲುವರಾಯಸ್ವಾಮಿಯವರೇ (Cheluvarayaswamy) ಹೆಚ್‌ಡಿಕೆಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗಮನ ಸೆಳೆದರು. ನಂತರ ಭಾಷಣ ಮಾಡುವ ವೇಳೆ ಸಮ್ಮೇಳನ ಯಶಸ್ವಿಗೆ ಸಚಿವ ಚಲುವರಾಯಸ್ವಾಮಿ ಶ್ರಮ ಇದೆ ಎಂದು ಕುಮಾರಸ್ವಾಮಿ ಹೊಗಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು:
* ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- 2022 ಸಮಗ್ರ ಜಾರಿಗೆ ಒತ್ತಾಯ.
* ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು‌. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಬೇಕು
* ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು.
* ಧಾರವಾಡದಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನ ಶೀಘ್ರ ಮಾಡಬೇಕು.
* ರಾಷ್ಟ್ರಕವಿ ಪ್ರಶಸ್ತಿಯನ್ನು  ಘೋಷಿಸಿಬೇಕು.

 

TAGGED:kannadamandyasahitya sammelanaಕನ್ನಡಮಂಡ್ಯಸಾಹಿತ್ಯ ಸಮ್ಮೇಳನ
Share This Article
Facebook Whatsapp Whatsapp Telegram

Cinema Updates

RASHMIKA MANDANNA 3
‌’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ
50 minutes ago
vijayalakshmi darshan 1
‘ಮುದ್ದು ರಾಕ್ಷಸಿ’ ಹಾಡಿಗೆ ಪತ್ನಿ ಕೈಹಿಡಿದು ದರ್ಶನ್ ರೊಮ್ಯಾಂಟಿಕ್ ಡ್ಯಾನ್ಸ್
2 hours ago
vijayalakshmi darshan
ದರ್ಶನ್ ದಾಂಪತ್ಯಕ್ಕೆ 22 ವರ್ಷ- ಹೊಸ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ
2 hours ago
Ajith Kumar Car Rase Accident
ರೇಸ್ ವೇಳೆ ನಟ ಅಜಿತ್ ಕಾರ್ ಟಯರ್ ಸ್ಫೋಟ!
14 hours ago

You Might Also Like

Solapura Fire Accident
Crime

ಮಹಾರಾಷ್ಟ್ರ | ಸೋಲಾಪುರದ ಟೆಕ್ಸ್‌ಟೈಲ್‌ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 8 ಮಂದಿ ಬಲಿ

Public TV
By Public TV
13 minutes ago
Tumakuru Car accident
Crime

ಕರ್ನೂಲ್ ಬಳಿ ಕಾರು ಅಪಘಾತ – ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಸಾವು

Public TV
By Public TV
51 minutes ago
Bengaluru Mahadevapura Woman Death Compound Collapse
Bengaluru City

ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು

Public TV
By Public TV
1 hour ago
D K Shivakumar 2
Bengaluru City

Bengaluru Rain | ನಾನು ನಿಮ್ಮಲ್ಲಿ ಒಬ್ಬ, ನಿಮ್ಮೊಂದಿಗೆ ನಿಲ್ಲುತ್ತೇನೆ: ಡಿಕೆಶಿ

Public TV
By Public TV
1 hour ago
Ramanagara KSRTC Bus Overturns
Crime

Ramanagara | 2 ಬೈಕ್‌ಗಳಿಗೆ ಗುದ್ದಿ ಹಳ್ಳಕ್ಕೆ ಬಿದ್ದ KSRTC ಬಸ್ – ಸಬ್ ಇನ್ಸ್‌ಪೆಕ್ಟರ್ ಸಾವು

Public TV
By Public TV
2 hours ago
Race to IPL 2025 playoffs three teams battle for one spot
Cricket

ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?