Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

Chikkaballapur

ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

Public TV
Last updated: November 23, 2024 7:19 pm
Public TV
Share
3 Min Read
Bhoga Nandishwara Gudi 2
SHARE

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂಧೀಶ್ವರನ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ (Bhoga Nandishwara Gudi) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುರುಳಗುರ್ಕಿ ಗ್ರಾಮದ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತದ ಹಣ ಖರ್ಚು ಮಾಡಿ ಭವ್ಯವಾದ ರಥ (Chariot) ಮಾಡಿಸಿ ಅರ್ಪಿಸಿದ್ದಾರೆ.

Bhoga Nandishwara Gudi

ಅಂದಹಾಗೆ ಮಹಾಶಿವರಾತ್ರಿ ಹಬ್ಬದ ಮರುದಿನ ಶ್ರೀ ಭೋಗನಂದೀಶ್ವರ ಸ್ವಾಮಿ ಹಾಗೂ ಅರುಣಾಚಲೇಶ್ವರ ಸ್ವಾಮಿಯ ಜೋಡಿ ಬ್ರಹ್ಮರಥೋತ್ಸವ ಪ್ರತಿ ವರ್ಷವೂ ವಿಜೃಂಭಣೆಯಿಂದ ನೆರವೇರುತ್ತದೆ. ಆದ್ರೆ ಪುರಾತನ ಕಾಲದ ಹಳೆಯ ಕಾಲದ ರಥ ಬಳಕೆಗೆ ಯೋಗ್ಯವಾಗಿರಲಿಲ್ಲ. ರಥೋತ್ಸವದ ವೇಳೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇನ್ನೂ ಕಳೆದ ಬಾರಿ ರಥದ ಅಚ್ಚು ಮುರಿದು ರಥ ಕದಲೇ ಇಲ್ಲ. ಇದ್ರಿಂದ ಭಕ್ತರಿಗೆ ಸಾಕಷ್ಟು ಬೇಸರ ಸಹ ಆಗಿತ್ತು. ಹಾಗಾಗಿ ಶಿವನ ಭಕ್ತನೂ ಆಗಿರುವ ಉದ್ಯಮಿ ವೆಂಕಟೇಗೌಡ ಎಂಬುವವರು ಈಗ ಕುಂದಾಪುರ ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ಸಾಗುವಾನಿ ಹಾಗೂ ಭೋಗಿ ಮರ ಬಳಸಿ ಭವ್ಯವಾದ ರಥ ನಿರ್ಮಾಣ ಮಾಡಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

Bhoga Nandishwara Gudi 3

ರಥ ನೋಡಲು ಬಲು ಅಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ನೂತನ ರಥವನ್ನ ಇದೇ ಕಾರ್ತಿಕ ಸೋಮವಾರದಂದು ಅಧಿಕೃತವಾಗಿ ಬ್ರಹ್ಮರಥೋತ್ಸವ ಮಾಡುವ ಮೂಲಕ ಚಾಲನೆ ಕೊಡಲಾಗುತ್ತಿದೆ. ಇದಕ್ಕೂ ಮುನ್ನ ಭಾನುವಾರದಂದು ಹೋಮ ಹವನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಗ್ಗೆ ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಥದಾನಿ ವೆಂಕಟೇಗೌಡ, ನಾನು ನಂದಿ ಗ್ರಾಮದಲ್ಲೇ ಓದಿದವನಾಗಿದ್ದು ಬಹಳಷ್ಟು ವರ್ಷಗಳಿಂದ ಜಾತ್ರೆ ಹಾಗೂ ರಥೋತ್ಸವವನ್ನ ಕಣ್ತುಂಬಿಕೊಂಡಿದ್ದೇನೆ. ನಾನು ಶಿವರಾತ್ರಿ ಸಮಯದಲ್ಲೂ ಈ ದೇವಾಲಯಕ್ಕೆ ಬಂದು ಹೋಗುತ್ತಿದ್ದೆ, ದೇವಾಲಯಕ್ಕೆ ಬಂದಾಗ ಭಗವಂತ ನನಗೆ ಶಕ್ತಿ ಕೊಡು ಅಂತ ಬೇಡಿಕೊಂಡಿದ್ದೆ. ಹಾಗೆಯೇ ಧರ್ಮಸ್ಥಳ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದು ಶ್ರೀ ಭೋಗ ನಂದೀಶ್ವರ ರಥ ಮಾಡಿಸುವ ಶಕ್ತಿ ಕೊಡಪ್ಪ ಅಂತ ಕೈ ಮುಗಿದು ಬೇಡಿಕೊಂಡಿದ್ದೆ. ಆ ದೇವರ ಪ್ರೇರಣೆ ಎಂಬಂತೆ ಈಗ ರಥ ನಿರ್ಮಾಣವಾಗಿದೆ ಎಂದು ಸ್ಮರಿಸಿದ್ದಾರೆ.

ಸೋಮವಾರ (ನ.25) ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ರಥದಾನಿ ವೆಂಕಟೇಗೌಡ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ರಥ ಶಿಲ್ಪಿ ರಾಜಗೋಪಾಲ್ ಆಚಾರ್. ವೆಂಕಟೇಗೌಡರು ರಥ ಮಾಡಿಸಲು ನಮ್ಮ ಬಳಿ ಬಂದಾಗ ಬಹಳಷ್ಟು ರಥಧ ಮಾದರಿಗಳನ್ನ ತೋರಿಸಿದ್ದೆವು. ಆಗ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ರಥ ಕಂಡ ವೆಂಕಟೇಗೌಡರು ಅದೇ ಮಾದರಿಯ ರಥ ಬೇಕು ಅಂತ ತಿಳಿಸಿದರು. ಈಗ ಅದೇ ಮಾದರಿಯಲ್ಲೇ ರಥ ಸುಂದರವಾಗಿ ಮೂಡಿ ಬಂದಿದೆ.

ಇದು ಶೈವಾಗಮ ಶೈಲಿಯಲ್ಲಿದ್ದು, ಶಿವನಿಗೆ ಸಂಬಂಧಪಟ್ಟ ಕಥಾ ಪ್ರಾಕಾರಗಳನ್ನ ಕೆತ್ತನೆ ಮಾಡಲಾಗಿದೆ. ರಥದ ಚಕ್ರಗಳು 8 ಅಡಿ ಎತ್ತರವಿದೆ, ರಥದ ಜಿಡ್ಡೆ ಭಾಗ 15 ಅಡಿ ಇದ್ದು, ದೇವರ ಪೀಠ 3 ಅಡಿ ಎತ್ತರವಿದೆ. 5 ಅಡಿಯ ಕಳಶ ಹೊಂದಿದೆ. ಒಟ್ಟು 54 ಅಡಿ ಎತ್ತರ ಇರಲಿದೆ. 6 ಚಕ್ರ ಹೊಂದಿರುವ ರಥವನ್ನ ಬ್ರಹ್ಮರಥ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

ಭಾನುವಾರ ವಿಶೇಷ ಪೂಜೆ ಹೋಮ-ಹವನ ನಡೆಸಿದ ನಂತರ ಧರ್ಮಸ್ಥಳದ ಪ್ರಧಾನ ಅರ್ಚಕರು ತಮ್ಮ ತಂಡದೊಂದಿಗೆ ದೇವಾಲಯಕ್ಕೆ ರಥ ಸಮರ್ಪಣೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಥಕ್ಕೆ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಸೋಮವಾರದಂದು ಆಗಮಿಸುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಸಹ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!

TAGGED:Bhoga Nandishwara GudichariotChikkaballapuradevoteeHindu Templeಚಿಕ್ಕಬಳ್ಳಾಪುರಭೋಗನಂದೀಶ್ವರರಥ
Share This Article
Facebook Whatsapp Whatsapp Telegram

Cinema news

Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories
The Devil
10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್
Bengaluru City Cinema Latest Main Post Sandalwood
Samantha Ruth Prabhu 1
ಮೊದಲು ನಿಧಿ ಅಗರ್ವಾಲ್‌, ನಂತ್ರ ಸಮಂತಾ – ಫ್ಯಾನ್ಸ್‌ನಿಂದಲೇ ಕಸಿವಿಸಿ
Cinema Latest South cinema Top Stories

You Might Also Like

Karnataka Transport Staff To Go On Strike
Bengaluru City

ಹೊಸ ವರ್ಷಕ್ಕೆ ಸದ್ದಿಲ್ಲದೇ ಸಾರಿಗೆ ಮುಷ್ಕರಕ್ಕೆ ಮುಂದಾದ ಸಿಬ್ಬಂದಿ

Public TV
By Public TV
8 minutes ago
G Parameshwar
Bengaluru City

ಸ್ಥಳೀಯವಾಗಿಯೇ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಬೇಕು, ಖರ್ಗೆಯವರ ಹೇಳಿಕೆಗೆ ಗೌರವ ಕೊಡ್ತೇವೆ: ಪರಮೇಶ್ವರ್

Public TV
By Public TV
20 minutes ago
Leopard 1
Districts

ಚಿರತೆ ದಾಳಿಗೆ ಹಸು ಸಾವು – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

Public TV
By Public TV
24 minutes ago
Koppal Boy Falling from first floor
Districts

ಪಾರಿವಾಳ ನೋಡುವಾಗ ಆಯತಪ್ಪಿ ಬಿದ್ದ 6ರ ಬಾಲಕ

Public TV
By Public TV
45 minutes ago
stock market sensex nifty
Latest

ಸೆನ್ಸೆಕ್ಸ್‌ 638, ನಿಫ್ಟಿ 195 ಅಂಶ ಏರಿಕೆ – ವಿದೇಶಿ ಹೂಡಿಕೆದಾರರು ಮರಳಿದ್ದು ಯಾಕೆ?

Public TV
By Public TV
1 hour ago
puc student dies after drowning in tunga river
Crime

ತುಂಗಾ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?