Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

Public TV
Last updated: July 31, 2024 7:48 am
Public TV
Share
3 Min Read
Wayanad Landslide Houses washed away town partially swept off Chooralmala Mundakkai Meppadi News
SHARE

– ಇಡೀ ಊರಿಗೆ ಊರೇ ಸ್ಮಶಾನ
– ನೀರಿನಲ್ಲಿ ಕೊಚ್ಚಿ ಹೋಯ್ತು 300ಕ್ಕೂ ಹೆಚ್ಚು ಮನೆಗಳು

ಕೆಪಿ ನಾಗರಾಜ್‌
ಮೇಪ್ಪಾಡಿ: ಕೇರಳದ ವಯನಾಡಿನಲ್ಲಿ (Wayanad) ಜಲಪ್ರಳಯ ಉಂಟಾಗಿದೆ. ಇಡೀ ಊರಿಗೆ ಊರೇ ಸ್ಮಶಾನವಾಗಿದೆ. ಮನೆ, ಮಠ, ಜೀವ ಎಲ್ಲವು ಕ್ಷಣಾರ್ಧದಲ್ಲಿ ಸಮಾಧಿಯಾಗಿವೆ. ಇಲ್ಲೊಂದು ಊರು ಇತ್ತಾ? ಇಲ್ಲಿ ನೂರಾರು ಜನರು ಬದುಕಿದ್ರಾ ಎಂಬ ಯಾವ ಕುರುಹು ಸಿಗದಂತೆ ಈ ಪ್ರಳಯ ಕ್ಷಣಾರ್ಧದಲ್ಲಿ ಮಾಡಿಟ್ಟಿದೆ. ರಾತ್ರೋರಾತ್ರಿ ಊರಿನ ಶೇ.50 ರಷ್ಟು ಜನ ಜಲ ಸಮಾಧಿಯಾಗಿದ್ದಾರೆ. ಮನೆ, ತೋಟ, ಶಾಲೆ, ದೇವಸ್ಥಾನ, ಮಸೀದಿ ಗಳು ನೀರಿನಲ್ಲಿ ಹೋಮವಾಗಿ ಹೋಗಿವೆ –

ಇದು ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ (Meppadi) ಪಟ್ಟಣದಿಂದ 8 ಕಿ.ಮೀ ದೂರದಲ್ಲಿ ಮುಂಡಕೈ ಎಂಬ ಬೆಟ್ಟದ ತಪ್ಪಲಿನಲ್ಲಿನ ಚೂರಲ್ ಮಲೈ (Chooralmala) (ಮಲಯಾಳಂನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ) ಗ್ರಾಮದ ಸ್ಥಿತಿ. ಈ ಗ್ರಾಮದಲ್ಲಿ 500 ಮನೆಗಳಿದ್ದವು. ಗ್ರಾಮಕ್ಕೆ ಹೊಂದಿಕೊಂಡಂತೆ ಚೂರಲ್ ಮಲೈ ಎಂಬ ನದಿ ನಿಧಾನವಾಗಿ ಹರಿಯುತ್ತಿತ್ತು. ಮುಂಡಕೈ ಎಂಬ ಬೆಟ್ಟದಿಂದ ಹರಿಯುವ ನೀರಿನಿಂದ ಚೂರಲ್ ಮಲೈ ನದಿ ಸೃಷ್ಟಿಯಾಗಿ ಹರಿಯುತ್ತದೆ. ಇದರ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ಅದೇ ನದಿ ಯಮ ಸ್ವರೂಪಿಯಾಗಿ ಇಡೀ ಊರನ್ನೇ ಅಹುತಿ ಪಡೆದಿದೆ. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

ಹೆಚ್ಚು ಕಡಿಮೆ 300 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 150 ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಇದರಲ್ಲಿ ಸದ್ಯಕ್ಕೆ 100 ಜನರ ಮೃತದೇಹ ಪತ್ತೆಯಾಗಿವೆ. ಉಳಿದವರು ಬದುಕಿದ್ದಾರಾ ಜಲ ಸಮಾಧಿಯಾಗಿದ್ದಾರಾ ಗೊತ್ತಿಲ್ಲ. ಅಷ್ಟರಮಟ್ಟಿಗೆ ಈ ನದಿ ಊರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಕೇಕೆ ಹಾಕಿದೆ.

ಚೂರಲ್ ಮಲೈನಲ್ಲಿ ಇದ್ದವರೆಲ್ಲಾ ಬಹುತೇಕರು ಕೂಲಿ ಕಾರ್ಮಿಕ ವರ್ಗದ ಜನ. ಸುತ್ತಮುತ್ತಲಿನ ಎಸ್ಟೇಟ್ ನೋಡಿಕೊಳ್ಳುತ್ತಾ ಬದುಕು ಕಟ್ಟಿಕೊಂಡಿದ್ದರು. ಇದರಲ್ಲಿ ಶೇ.20 ರಷ್ಟು ಕುಟುಂಬದ ಮನೆಯ ಯುವಕರು ಗಲ್ಫ್‌ ರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಇಲ್ಲಿ ಇದ್ದಿದ್ದು ಇಳಿ ವಯಸ್ಸಿನ ತಂದೆ, ತಾಯಿಗಳು ಮಾತ್ರ! ಕೆಲವರು ಪತ್ನಿ – ಮಕ್ಕಳನ್ನು ಇಲ್ಲೆ ಬಿಟ್ಟು ಗಲ್ಫ್‌ನಲ್ಲಿ ದುಡಿದ ಇವರನ್ನು ಸಾಕುತ್ತಿದ್ದರು.


ಒಂದರ್ಥದಲ್ಲಿ ಈ ಊರು ಸ್ವರ್ಗ ದಂತಿತ್ತು. ಸುತ್ತು ಬೆಟ್ಟ, ಊರಿನ ಮಧ್ಯ ತಣ್ಣಗೆ ಹರಿಯವ ನದಿ‌. ಮನೆಯ ಮುಂಭಾಗವೆ ಕೆಲಸ. ಬಡತನ ನಿವಾರಣೆಗೆ ಮಗ, ಗಂಡ ದುಬೈನಿಂದ ಕಳಿಸುತ್ತಿದ್ದ ಹಣ! ಇವರ ಬದುಕಿಗೆ ಇಷ್ಟು ಸಾಕಾಗಿತ್ತು. ಊರಿನಿಂದ 8 ಕಿ.ಮೀ ದೂರ ಇರುವ ಮುಪ್ಪಾಡಿ ಎಂಬ ಪಟ್ಟಣದ ಸಹವಾಸವೂ ಬೇಡ ಎಂಬಂತೆ ಇಲ್ಲಿನ ಕುಟುಂಬಗಳು ಬದುಕುತ್ತಿದ್ದವು.

ಕಳೆದ 15 ದಿನಗಳಿಂದ ಕೇರಳದಲ್ಲಿ ಕುಂಭದ್ರೋಣ ಮಳೆ ಆಗುತ್ತಿದೆ. ಹೀಗಾಗಿ ಚಿಕ್ಕ ನದಿಗಳು ಕೂಡ ಭೋರ್ಗರೆದು ಹರಿಯುತ್ತಿದ್ದವು. ಆದರೂ ಚೂರಲ್ ಮಲೈ ನದಿ ಅಪಾಯದ ಮಟ್ಟ ಮೀರಿರಲಿಲ್ಲ. ಯಾವಾಗಲೂ ಈ ನದಿಗೆ ಸೌಮ್ಯವೇ ಭೂಷಣವಾಗಿತ್ತು. ಹೀಗಾಗಿಯೇ ಈ ಗ್ರಾಮದ ಜನರು ಯಾವ ಆತಂಕವೂ ಇಲ್ಲದೆ ನಿದ್ದೆಗೆ ಜಾರಿದ್ದರು. ಗಲ್ಫ್‌ನಲ್ಲಿರುವ ಈ ಕುಟುಂಬದ ಆಧಾರ ಸ್ಥಂಭಗಳಿಗೂ ಮಳೆ ಹೆಚ್ಚಾಯ್ತು ಈಗ ಹೇಗಪ್ಪಾ ಎಂಬ ಕಿಂಚಿತ್ತೂ ಆತಂಕ ಕೂಡ ಇರಲಿಲ್ಲ.

ಜುಲೈ 30ರ ನಸುಕಿನ ಜಾವ ನದಿಯ ವರಸೆಯೆ ಬದಲಾಯ್ತು. ದೈವ ಕಳೆಯಲ್ಲಿದ್ದ ನದಿ ಯಮಸ್ವರೂಪಿ ಆಗಿ ಬದಲಾಯ್ತು. ಹೀಗೆ ನದಿ ಯಮಸ್ವರೂಪಿ ಆಗಿ‌ಬದಲಾಗಲು ಕಾರಣ ಮುಂಡಕೈ ಬೆಟ್ಟದಲ್ಲಿ ಉಂಟಾದ ಭಾರೀ ಜಲಸ್ಪೋಟ. ಈ ಸ್ಪೋಟದ ಪರಿಣಾಮ ಚೂರಲ್ ಮಲೈ ನದಿಯ ಒಡಲಿಗೆ ಏಕಾಏಕಿ ಭಾರೀ ಪ್ರಮಾಣದ ನೀರು ಸೇರಿತು. ನೀರಿನ‌ ಜೊತೆಗೆ ಬೆಟ್ಟದಲ್ಲಿನ ಭಾರೀ ಬಂಡೆಗಳು ಗೋಲಿಯಂತೆ ನದಿಯಲ್ಲಿ ಹರಿದು ಬಂದವು. ನದಿಯ ಭೋರ್ಗರೆತದ ಸದ್ದು ಜೋರಾಯ್ತು. ಈ ಸದ್ದೇ ನೂರಾರು ಕನಸುಗಳ ಒದ್ದು ಮಲಗಿದ್ದ ಜನರ ಬದುಕಿಗೆ ಚರಮ ಗೀತೆಯಾಯ್ತು. ಇದನ್ನೂ ಓದಿ: Wayanad Landslides: 93 ಮೃತದೇಹ ಸಿಕ್ಕಿವೆ, ಸಾವಿನ ಸಂಖ್ಯೆ ಹೆಚ್ಚಾಗಬಹುದು – ಸಿಎಂ ಪಿಣರಾಯಿ ಆತಂಕ

ಈ ಗ್ರಾಮದ ಎತ್ತರದ ಪ್ರದೇಶದಲ್ಲಿದ್ದ ಜನಕ್ಕೆ ಏನಾಗ್ತಿದೆ ಗ್ರಾಮದ ಒಳಗೆ ಅನ್ನೋದು ಗೊತ್ತಾಗುವ ಮುನ್ನವೇ ಅರ್ಧ ಊರು ನೀರು ಪಾಲಾಗಿತ್ತು.‌ ಸಂಬಂಧಿಕರು, ಸ್ನೇಹಿತರು ಎಲ್ಲರೂ ಜಲಸಮಾಧಿ ಆಗಿಬಿಟ್ಟಿದ್ದಾರೆ. ಮಂಗಳವಾರದ ಸೂರ್ಯೋದಯದ ಹೊತ್ತಿಗೆ ಇಡೀ ದೇಶಕ್ಕೆ ಈ ಸುದ್ದಿ ಹಬ್ಬಿತು.

 

TAGGED:ChooralmalalandslideWayanadಕೇರಳಚೂರಲ್ ಮಲೈವಯನಾಡು
Share This Article
Facebook Whatsapp Whatsapp Telegram

Cinema Updates

Harshika Poonacha Bhuvan Ponnanna toured 3 countries with Tridevi 1
ತ್ರೀದೇವಿ ಜೊತೆ 3 ದೇಶ ಸುತ್ತಿದ ಹರ್ಷಿಕಾ, ಭುವನ್
Cinema Latest Sandalwood
Darshan Thailand
ಥಾಯ್ಲೆಂಡ್‌ನಿಂದ ದರ್ಶನ್ ವಾಪಸ್ ಬರೋ ದಿನಾಂಕ ಫಿಕ್ಸ್
Cinema Latest Sandalwood Top Stories
B Saroja Devi
ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ
Cinema Latest
Yash mother
ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ – ಯಶ್‌ ತಾಯಿ ಮಾತು
Cinema Latest Sandalwood Top Stories
Vijay Devarakonda
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ
Cinema Latest Top Stories

You Might Also Like

India vs England 4th Test Day 1 India Suffer Huge Rishabh Pant Blow Reach 264 4
Cricket

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

Public TV
By Public TV
5 hours ago
Kadugodi andhra murder
Bengaluru City

ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
By Public TV
5 hours ago
ಸಾಂದರ್ಭಿಕ ಚಿತ್ರ
Latest

ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

Public TV
By Public TV
6 hours ago
IPS Soumyalatha
Bengaluru City

ಧರ್ಮಸ್ಥಳ ಹೂತಿಟ್ಟ ಶವ ಕೇಸ್‌- ಓರ್ವ ಐಪಿಎಸ್ ಅಧಿಕಾರಿಯನ್ನು ಕೈಬಿಡಲು ಸರ್ಕಾರಕ್ಕೆ ಶಿಫಾರಸು

Public TV
By Public TV
6 hours ago
AI ಚಿತ್ರ
Dakshina Kannada

ಉಡುಪಿ, ಮಂಗಳೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ

Public TV
By Public TV
6 hours ago
Narendra Modi and Chinese President Xi Jinping
Latest

5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?