Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು

Districts

ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು

Public TV
Last updated: March 6, 2023 7:50 pm
Public TV
Share
2 Min Read
MND prathap simha 1
SHARE

ಮಂಡ್ಯ: ಮೈಸೂರಿನಿಂದ (Mysuru) ಪಲಾಯನ ಮಾಡಿಕೊಂಡು ಬಾದಾಮಿಗೆ (Badami) ಹೋಗಬೇಕಾದ ದುಸ್ಥಿತಿ ಬಂದದ್ದು ಬುರುಡೆ ಬಿಡುವ ಸಿದ್ದರಾಮಯ್ಯನವರಿಗೆ (Siddaramaiah) ಹೊರತು ನನಗಲ್ಲ ಎಂದು ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದಲ್ಲಿ ಪ್ರತಾಪ್ ಸಿಂಹ ಬುರುಡೆ ಬಿಡುತ್ತಾನೆ ಎಂಬ ವಿಚಾರವಾಗಿ ಮಂಡ್ಯದ (Mandya) ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

PRATHAP SIMHA

ಮೈಸೂರಲ್ಲಿ ಯಾರು ಬುರುಡೆ, ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ ಅವರಿಗೆ ಜನ ಬುದ್ದಿ ಕಲಿಸಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ, ಟಿ.ನರಸಿಪುರದಲ್ಲಿ ಮಹದೇವಪ್ಪನವರಿಗೆ (H.C.Mahadevappa) ಸರಿಯಾದ ಪಾಠ ಕಲಿಸಿದ್ದಾರೆ ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಾನು ಮೈಸೂರಿನಲ್ಲಿ ಗೆದ್ದಿದ್ದೇನೆ. 2018ರಲ್ಲಿ ನಾನು ದಾಖಲೆಯ ಅಂತರದಲ್ಲಿ ಗೆದ್ದಿದ್ದೇನೆ. ಯಾರು ಬುರುಡೆ ಬಿಡುತ್ತಿದ್ದಾರೆ ಎಂದು ಜನ ತೀರ್ಪು ನೀಡಿದ್ದಾರೆ. ಡಾ.ಮಹದೇವಪ್ಪನವರಿಂದ ನಾನು ಏನು ಕಲಿಯುವ ಅಗತ್ಯವಿಲ್ಲ. ಮಹದೇವಪ್ಪನವರು ಅಭಿವೃದ್ಧಿಯ ವಿರೋಧಿ. ಮೈಸೂರಿನ ಜಲದರ್ಶಿನಿಯಿಂದ ಪಡುವಾರಹಳ್ಳಿಯವರೆಗೆ 6 ಲೇನ್ ಮಾಡುತ್ತೇನೆ ಎಂದು ದುಡ್ಡು ತಂದು ಮಾಡಲಿಲ್ಲ. ನ್ಯಾಷನಲ್ ಹೈವೇ (National Highway) ಯಾವ ರೀತಿ ಆಗುತ್ತದೆ ಎನ್ನುವ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಹಾಗೂ ಮಹದೇವಪ್ಪನವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

ಪಿಡಬ್ಲೂಡಿಯಲ್ಲಿರುವ ನ್ಯಾಷನಲ್ ಹೈವೇ ವಿಂಗ್ ಅವರು ಇದನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ. 2014ರ ಸೆಪ್ಟೆಂಬರ್‌ನಲ್ಲಿ ಇದರ ಡಿಪಿಆರ್ ಆಗುತ್ತದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ಈ ಯೋಜನೆಯನ್ನು ತೆಗೆದುಕೊಳ್ಳುತ್ತದೆ. 2018 ಫೆಬ್ರವರಿ 19ರಂದು ಮೋದಿ (Narendra Modi) ಅವರು ಇದರ ಬಗ್ಗೆ ಮೈಸೂರಿನಲ್ಲಿ ಘೋಷಣೆ ಮಾಡುತ್ತಾರೆ. ಫೆಬ್ರವರಿ 20ರಂದು ಕ್ಯಾಬಿನೆಟ್ ಕಮಿಟಿ ಪ್ರಧಾನಮಂತ್ರಿಗಳು ಇದಕ್ಕೆ ಅಪ್ರೂವಲ್ ಕೊಡುತ್ತಾರೆ. ಮಾರ್ಚ್ 24ರಂದು ಇದರ ಭೂಮಿ ಪೂಜೆ ನಡೆಯುತ್ತದೆ. ಇದು ಮೋದಿ ಕನಸಿನ ಕೂಸು ಹೊರತು ಬೇರೆಯವರ ಕೂಸು ಅಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: Exclusive:`ಯುವ’ ರಾಜ್‌ಕುಮಾರ್- ಸಪ್ತಮಿ ಗೌಡ ಫೋಟೋಶೂಟ್

siddaramaiah 1 1

ಸಿದ್ದರಾಮಯ್ಯ, ಮಹದೇವಪ್ಪನವರು ಎಷ್ಟೇ ಮೈ ಪರಚಿಕೊಂಡರೂ ಅವರಿಗೆ ಏನೂ ಗಿಟ್ಟುವುದಿಲ್ಲ. ಸಿದ್ದರಾಮಯ್ಯನವರು ಹೈವೇ ಪರಿಶೀಲನೆ ಮಾಡಬಾರದು ಎಂದು ನಮ್ಮ ತಕರಾರು ಇಲ್ಲ. ಸಿದ್ದರಾಮಯ್ಯನವರೇ 2 ತಿಂಗಳು ಕಾಯಿರಿ, ಜನ ಹೇಗಿದ್ದರೂ ನಿಮಗೆ ನಿವೃತ್ತಿ ಕೊಡುತ್ತಾರೆ. ಆಗ ಮೊಮ್ಮಕ್ಕಳು ಎಲ್ಲರ ಜೊತೆ ಸೇರಿ ಬೆಂಗಳೂರು-ಮೈಸೂರಿಗೆ ಜಾಲಿ ರೈಡ್ ಮಾಡಬಹುದು. ಈಗ ಪರಿಶೀಲನೆ, ರಿವ್ಯೂ ಮಾಡುವುದಕ್ಕೆ ಏನು ಉಳಿದಿಲ್ಲ. ಜಾಲಿ ರೈಡ್ ಮಾಡುವುದಕ್ಕೆ ಒಂದು ಹೈವೇ ಮಾಡಿದ್ದೇವೆ. ಅದು 12ಕ್ಕೆ ಉದ್ಘಾಟನೆ ಆಗುತ್ತದೆ. ಕುಟುಂಬ ಸಮೇತ ಬಂದು ಎಷ್ಟು ಒಳ್ಳೆ ರಸ್ತೆ ಮಾಡಿದ್ದಾರೆ, ಇಂತಹ ರಸ್ತೆ ನಮ್ಮ ಕೈಯಲ್ಲಿ ಮಾಡುವುದಕ್ಕೆ ಆಗಲಿಲ್ಲ ಎಂದು ಪಶ್ಚಾತ್ತಾಪ ಪಡಿ. ನಮ್ಮ ಮಕ್ಕಳಿಗಾದರೂ ಮೋದಿಜೀ ಒಳ್ಳೆಯ ರಸ್ತೆ ಮಾಡಿಕೊಟ್ಟಿದ್ದಾರೆ ಎಂದು ಖುಷಿಯಿಂದ ನಿಮ್ಮ ಹತ್ತಿರ ಇರುವ ಒಳ್ಳೆಯ ಕಾರ್‌ನಲ್ಲಿ ಓಡಾಡಿ ಎಂದು ಅಣಕಿಸಿದರು. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

Mysuru Bengaluru Highway

ಮೈಸೂರಿನ ಜನಕ್ಕೆ ಸಿದ್ದರಾಮಯ್ಯನವರು ಏನೆಂದು ಗೊತ್ತಾಗಿದೆ. ಎಲ್ಲಿಂದಲೋ ಬಂದು ನನ್ನನ್ನು ಮೈಸೂರಿನ ಜನ ಗೆಲ್ಲಿಸುತ್ತಾರೆ ಎಂದರು. ಅವರ ಬಂಡವಾಳ ಗೊತ್ತಾಗಿ ಸಿದ್ದರಾಮಯ್ಯ ಅವರನ್ನು ಜನ ಮೈಸೂರಿನಿಂದ ಖಾಲಿ ಮಾಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು. ಇದನ್ನೂ ಓದಿ: ಮೆಂಟಲ್ ಕೇಸ್ ಬಗ್ಗೆ ನಮ್ಮನ್ನು ಕೇಳಬೇಡಿ: ರಮೇಶ್ ಜಾರಕಿಹೊಳಿ‌ಗೆ ಡಿಕೆಶಿ ತಿರುಗೇಟು

TAGGED:Bengaluru-Mysuru ExpresswayH.C. Mahadevappamandyanarendra modipratap simhasiddaramaiahನರೇಂದ್ರ ಮೋದಿಪ್ರತಾಪ್ ಸಿಂಹಬೆಂಗಳೂರು-ಮೈಸೂರು ಹೆದ್ದಾರಿಮಂಡ್ಯಸಿದ್ದರಾಮಯ್ಯಹೆಚ್.ಸಿ.ಮಹದೇವಪ್ಪ
Share This Article
Facebook Whatsapp Whatsapp Telegram

Cinema news

Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories
Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories

You Might Also Like

chain snatching in ramanagara three accused arrested
Crime

ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ – ಆರೋಪಿಗಳು ಅಂದರ್‌

Public TV
By Public TV
13 seconds ago
public tv nari narayani 2026 award
Bengaluru City

ಮಹಿಳಾ ದಿನಾಚರಣೆ: ಪಬ್ಲಿಕ್‌ ಟಿವಿಯಿಂದ ಸಾಧಕಿಯರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ

Public TV
By Public TV
4 minutes ago
Davanagere Fire
Davanagere

ಜಗಳೂರು | ತೋಟಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು – 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಸುಟ್ಟು ಕರಕಲು

Public TV
By Public TV
46 minutes ago
car hits lorry three dead in kaggalipura
Crime

ರಾಮನಗರ | ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ಮೂವರು ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ

Public TV
By Public TV
1 hour ago
Haveri Milk
Chikkaballapur

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ – ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ

Public TV
By Public TV
2 hours ago
bombs oil depots in iran
Latest

ಇರಾನ್‌ಗೆ ಬಿಗ್‌ ಶಾಕ್‌ ಕೊಟ್ಟ ಅಮೆರಿಕ-ಇಸ್ರೇಲ್‌; ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?