ಹೆಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಬೆಲ್ಲದ್‌

Public TV
1 Min Read
aravind Bellad 4

ಧಾರವಾಡ: ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಮಾಜಿ ಪ್ರಧಾನಿ ಹಾಗೂ ಮಹಾಮುತ್ಸದ್ಧಿ ದೇವೇಗೌಡರ (HD Deve Gowda) ಮಗನಾಗಿದ್ದರೂ ಇಂತಹ ತಳಬುಡ ಇಲ್ಲದ ಹೇಳಿಕೆ ಕೊಟ್ಟಿದ್ದಾರೆ ಎಂದು ಧಾರವಾಡ ಶಾಸಕ ಅರವಿಂದ್‌ ಬೆಲ್ಲದ್‌ (Aravind Bellad) ಕಿಡಿಕಾರಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಗೋಡ್ಸೆ ವಂಶಸ್ಥರು ಎಂಬ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತದೆ. ಅವರ ಪಕ್ಷದಿಂದ ಜನ ಓಡಿ ಹೋಗುತ್ತಿದ್ದಾರೆ. ಅವರ ನಾಯಕರೇ ಅವರ ವಿರುದ್ಧ ಬಂಡೆದ್ದಿದ್ದಾರೆ. ಹೀಗಾಗಿ ಏನು ಮಾಡಬೇಕು, ಏನು ಮಾತನಾಡಬೇಕು ತಿಳಿಯದಾಗಿದೆ ಎಂದರು.

HDKumaraswamy 1

ಈ ರೀತಿ ಹೇಳಿಕೆ ನೀಡಿರುವುದು ಬಹಳ ದುರಾದೃಷ್ಟಕರ ವಿಚಾರ. ಮೋದಿ ಸರ್ಕಾರದಲ್ಲಿ ಜಾತಿ, ಪಂಥ ನೋಡದೆ ಯೋಗ್ಯರಿದ್ದವರಿಗೆ ಸಿಎಂ ಮಾಡುತ್ತಾರೆ ಎಂದ ಅವರು, ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ, ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು

Pralhad Joshi 4

ಕುಮಾರಸ್ವಾಮಿ ಈ ಹೇಳಿಕೆ ಮೂಲಕ ತಮಗೆ ಮಾತ್ರವಲ್ಲ ಗೌಡರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ದೇವೇಗೌಡ, ರೇವಣ್ಣ ಕುಟುಂಬದವರು ಎಲ್ಲರೂ ಕುಮಾರಸ್ವಾಮಿ ಹೇಳಿಕೆ ಖಂಡಿಸುತ್ತಾರೆ ಎಂದು ಕೊಂಡಿದ್ದೇನೆ ಎಂದ ಅವರು, ತಮ್ಮ ವಿಚಾರ ಎಷ್ಟು ಕೆಳಮಟ್ಟದೆಂದು ತೋರಿಸಿದ್ದಾರೆ. ಸಾಮರಸ್ಯ ಕೆಡಿಸುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ, ಬ್ಯಾಲೆನ್ಸ್ ಇಲ್ಲದ ಹೇಳಿಕೆ ಅವರು ನೀಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: Traffic Fine- 50% ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಿ: ಸಿಎಂಗೆ ಆಪ್‌ ಪತ್ರ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *