ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ, ಆಮೇಲೆ ಜೆಡಿಎಸ್ ಬಗ್ಗೆ ಮಾತನಾಡಲಿ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ವಿರುದ್ಧ ಮಾತನಾಡಿದ ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿದ ಅವರು, `ಅನ್ಯರ ಡೊಂಕು ನಿಮಗ್ಯಾಕೆ, ನಿಮ್ಮ ಡೊಂಕು ತಿದ್ದಿಕೊಳ್ಳಿ’ ಎಂದು ಬಸವಣ್ಣ ಹೇಳಿದ್ದಾರೆ. ಅದರಂತೆ ಸಿದ್ದರಾಮಯ್ಯ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ
ಜೆಡಿಎಸ್ಗೆ (JDS) 80 ಸೀಟು ಬರುತ್ತೆ ಅಂತಾ ಸರ್ವೆ ಹೇಳುತ್ತಿದೆ. ಆದರೆ ನಾವು ಯಾವುದೇ ಸರ್ವೇ ಮಾಡಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನವರು ಎಸಿ ಬಸ್ನಲ್ಲಿ (AC Bus) ಪ್ರವಾಸ ಮಾಡ್ತಿದ್ದಾರೆ. ಹೋದ ಜಿಲ್ಲೆಯಲ್ಲಿ ಚಿಕನ್ ತಿಂದು ವಾಪಸ್ ಆಗ್ತಿದ್ದಾರೆ. ಕಾಂಗ್ರೆಸ್ನವರು ಕರೆತಂದ ಜನಕ್ಕೆ ಭಾಷಣ ಮಾಡ್ತಿದ್ದಾರೆ. ನಾವು ಬಂದ ಜನಕ್ಕೆ ಭಾಷಣ ಮಾಡ್ತಿದ್ದೇವೆ. ಕುಮಾರಸ್ವಾಮಿ ಯಾತ್ರೆಗೆ ಜನರ ಬೆಂಬಲ ಸಿಗುತ್ತಿದೆ. ನಮ್ಮ ಯಾತ್ರೆಯಲ್ಲಿ ಯಾರನ್ನೂ ಬೈಯ್ಯುವ ಚಿಂತೆಯಿಲ್ಲ. ನಾಡಿನ ಜನರ ಚಿಂತೆ ನಮಗಿದೆ ಎಂದು ಹೇಳಿದ್ದಾರೆ.
ಜನರ ಸಹಕಾರ ಏನಿದೆ ಅಂತ ಟಿವಿಯಲ್ಲಿ ನೋಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮಕ್ಕೂ ನಮಗೂ ಏನು ವ್ಯತ್ಯಾಸವಿದೆ ಅಂತಾ ಜನ ನೋಡ್ತಿದ್ದಾರೆ. ನಿರುದ್ಯೋಗಿ ರಾಜಕಾರಣಿಗಳನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k