ಮೆಟ್ರೋ ದುರಂತ: ತನಿಖೆ ನಡೆಸಿ ವರದಿ ಸಲ್ಲಿಸಿಲು ಐಐಎಸ್‍ಸಿಗೆ ಮನವಿ – ಮತ್ತಷ್ಟು ಅಧಿಕಾರಿಗಳ ತಲೆದಂಡ ಸಾಧ್ಯತೆ

Public TV
1 Min Read
Mother child die in Namma Metro under construction pillar collapse in Bengalurus Nagavara area 1

ಬೆಂಗಳೂರು: ನಾಗಾವರದ ಮೆಟ್ರೋ ಪಿಲ್ಲರ್ (Metro Pillar) ದುರಂತ ಬೆಂಗಳೂರಿಗರಲ್ಲಿ (Bengaluru) ಆತಂಕ ಹೆಚ್ಚಿಸಿದೆ. ಬಿಎಂಆರ್‌ಸಿಎಲ್‌ (BMRCL) ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ತಾಯಿ ಮಗು ಸಾವು ಕರುಳು ಹಿಡುವಂತಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ (IISc) ಮನವಿ ಪತ್ರ ಕಳುಹಿಸಿದ್ದು, ಘಟನೆಗೆ ಕಾರಣ ಏನು ಎಂದು ತನಿಖೆ ಮಾಡಿ ವರದಿ ನೀಡುವಂತೆ ಮನವಿ ಮಾಡಿಕೊಂಡಿದೆ.

Mother child die in Namma Metro under construction pillar collapse in Bengalurus Nagavara area 2

ಮೆಟ್ರೋ ಪಿಲ್ಲರ್ ದುರಂತದ ಬಳಿಕ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದೆ. 40% ಕಮಿಷನ್‍ ಪರಿಣಾಮ ಹೀಗೆ ಆಗಿದೆ ಅಂತಾ ಆರೋಪ ಕೂಡ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಎಂಜಿನಿಯರ್‌ ವಜಾ

ಈಗಾಗಲೇ ಕೆಳ ಹಂತದ ಅಧಿಕಾರಿ ವೆಂಕಟೇಶ್ ವಿರುದ್ಧ ಕ್ರಮ ಜರುಗಿಸಲಾಗಿದೆ. ಕಾಮಗಾರಿಗೆ ಬಳಸಿರೋ ವಸ್ತುಗಳು, ಸರಕುಗಳು ಕಳಪೆ ಗುಣಮಟ್ಟದ್ದು ಅಂತಾ ವರದಿಯಾದ್ರೆ ಮತ್ತಷ್ಟು ಅಧಿಕಾರಿಗ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪಬ್ಲಿಕ್ ಟಿವಿಗೆ ಬಿಎಂಆರ್‌ಸಿಎಲ್‌ ಎಂಡಿ ಅಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ದುರಂತ – 8 ಮಂದಿ‌ ಮೇಲೆ FIR: ಆರಗ ಜ್ಞಾನೇಂದ್ರ

ಮೆಟ್ರೋ ಪಿಲ್ಲರ್ ದುರಂತದ ಬಗ್ಗೆ BMRCL ನಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿಯನ್ನು ನೀಡಿದ್ದು, ಡಿಟೇಲ್ ವರದಿಯನ್ನು ಇಂದು ಸಂಜೆ ಒಳಗಡೆ ನೀಡಲಿದೆ. ಕೇಂದ್ರ ಸರ್ಕಾರಕ್ಕೂ ಇಂದು ಸಂಜೆಯೇ ವರದಿ ನೀಡಲಿರುವ ಬಿಎಂಆರ್‌ಸಿಎಲ್‌, ಘಟನೆ ಹೇಗಾಯ್ತು? ಕಾರಣ ಏನು? ತೆಗೆದುಕೊಂಡಿರುವ ಕ್ರಮಗಳೇನು ಅಂತಾ ವರದಿ ಸಲ್ಲಿಸಲಿದೆ. ಬಿಎಂಆರ್‌ಸಿಎಲ್‌ನಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೂಡ ವರದಿ ನೀಡಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *