– ಪೊಲೀಸರ ಮುಂದೆ ಆರೋಪಿ ಹೇಳಿಕೆಯೇನು?
– ತಪ್ಪೊಪ್ಪಿಕೊಂಡ ಆರೋಪಿ ಕೃತ್ಯ ಬಯಲು
ಚಂಡೀಗಢ: ಅಚ್ಚರಿಯ ಬೆಳವಣಿಗೆಯೊಂದರಂತೆ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕಾಲುವೆಗೆ ತಳ್ಳಿದ ವಿಲಕ್ಷಣ ಘಟನೆಯೊಂದು ಹರಿಯಾಣಧ ಕರ್ನಲ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಸುಶೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ನಲಿಪುರ ಗ್ರಾಮದ ನಿವಾಸಿ. ಸುಶೀಲ್ ತನ್ನ 3, 5 ಹಾಗೂ 8 ವರ್ಷದ ಮೂವರು ಮಕ್ಕಳನ್ನು ಕಾಲುವೆಗೆ ತಳ್ಳುವ ಮೂಲಕ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ಮೂವರು ಮಕ್ಕಳನ್ನು ಹುಡುಕಾಟ ನಡೆಸಿದರೆ ಇದರುವರೆಗೂ ಎಲ್ಲೂ ಪತ್ತೆಯಾಗಿಲ್ಲ.
ಆರೋಪಿ ಹಣ್ಣು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದು, ಅಕ್ರಮ ಸಂಬಂಧದ ಕುರಿತು ಪತ್ನಿ ಜೊತೆ ವಾಗ್ವಾದ ಮಾಡಿದ್ದಾನೆ. ನಂತರ ಪತ್ನಿ ಮೇಲಿನ ಸಿಟ್ಟಿನಲ್ಲಿ ತನ್ನ ಮೂವರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಕಾಲುವೆಗೆ ತಳ್ಳಿದ್ದಾನೆ. ಘಟನೆಯ ಬಗ್ಗೆ ಅರಿತ ಸ್ಥಳೀಯರು ಕೂಡಲೇ ಮಕ್ಕಳನ್ನು ಕಾಲುವೆಯಿಂದ ರಕ್ಷಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲಿಲ್ಲ.
ಸದ್ಯ ಸುಶೀಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ಮಕ್ಕಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕುಂಜ್ಪುರ ಪೊಲೀಸ್ ಠಾಣೆ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಮುನೀಶ್ ಕುಮಾರ್ ತಿಳಿಸಿದ್ದಾರೆ.