ಮುಂಬೈ: ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್ ಕಾರು ಝೋಮ್ಯಾಟೋ ಡೆಲಿವರಿ ಹುಡುಗನ ಬೈಕಿಗೆ ಗುದ್ದಿದೆ. ಈ ವೇಳೆ ಯುವಕ ಚಕ್ರಗಳ ಕೆಳಗೆ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಮುಂಬೈನ ಪಶ್ಚಿಮ ಅಂಧೇರಿಯ ಲೋಖಂಡ್ವಾಲಾ ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ಸತೀಶ್ ಗುಪ್ತಾ(19) ಎಂದು ಗುರುತಿಸಲಾಗಿದೆ. ಈತ ಅಂಧೇರಿಯ ನಿವಾಸಿಯಾಗಿದ್ದಾನೆ. ಝೋಮ್ಯಾಟೋ ಆರ್ಡರ್ ಡೆಲಿವರಿಗೆಂದು ಹೋಗುತ್ತಿದ್ದ ವೇಳೆ ರಾಂಗ್ ರೂಟ್ನಲ್ಲಿ ಬಂದ ಮರ್ಸಿಡಿಸ್ ಕಾರು ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮರ್ಸಿಡಿಸ್ ಕಾರು ರಾಂಗ್ ರೂಟ್ನಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ದ್ವಿಚಕ್ರವಾಹದಲ್ಲಿ ಹೋಗುತ್ತಿದ್ದ ಝೋಮ್ಯಾಟೋ ಹುಡಗನ ಬೈಕಿಗೆ ಗುದ್ದಿದೆ. ಕಾರಿನ ಚಾಲಕ ದ್ವಿಚಕ್ರ ವಾಹನವನ್ನು ಗುದ್ದಿದ ನಂತರ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಕಾರಿನ ಬಾನೆಟ್ ನಡುವೆ ಯುವಕ ಸಿಲುಕಿಕೊಂಡಿದ್ದಾನೆ. ವೇಗದಲ್ಲಿದ್ದ ಕಾರು ಸ್ವಲ್ಪ ದೂರ ಯುವಕನ್ನು ಎಳೆದುಕೊಂಡು ಹೋಗಿದೆ. ಈ ವೇಳೆ ಸವಾರ ಕಾರಿನ ಚಕ್ರದಡಿ ಸಿಲುಕಿದ್ದಾನೆ. ತಕ್ಷಣ ಚಾಲಕ ಕಾರಿನಿಂದ ಹೊರಬಂದಿದ್ದಾನೆ. ಆಟೋವನ್ನು ಬಾಡಿಗೆಗೆ ತೆಗೆದುಕೊಂಡು ಸತೀಶ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದನು. ಸತೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದನು ಎಂದು ಮೂಲಗಳು ತಿಳಿಸಿವೆ.
ಓಶಿವಾರಾ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ಅಪಘಾತದ ಸಮಯದಲ್ಲಿ ಕಾರು ಚಾಲನೆ ಮಾಡುತ್ತಿದ್ದ ತೈಫೂರ್ ತನ್ವೀರ್ ಶೇಖ್ ಅವರನ್ನು ವಶಕ್ಕೆ ಪಡೆದಿದೆ. ಚಾಲನೆ ಮಾಡುವಾಗ ಅವನು ಕುಡಿದಿದ್ದಾನೆಯೇ ಎಂದು ಕಂಡುಹಿಡಿಯಲು ಅವರ ವೈದ್ಯಕೀಯವನ್ನು ನಡೆಸಲಾಗುತ್ತಿದೆ ಎಂದು ಓಶಿವಾರಾ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.