ಬೆಂಗಳೂರು: ಸಾರಿಗೆ ಸಂಚಾರ ತಡೆಯಲು ಬಂದಿದ್ದ 9 ಮಂದಿ ಸಾರಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು 9 ಮಂದಿ ಸಾರಿಗೆ ನೌಕರರ ಮೇಲೆ ಪ್ರತ್ಯೇಕ 2 ಎಫ್ಐಆರ್ ದಾಖಲು ಮಾಡಲಾಗಿದೆ. ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪದಡಿ ಕೇಸ್ ದಾಖಲು ಮಾಡಿ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ವಿಜಯಪುರದಲ್ಲಿಯೂ ಕೂಡ ಚಾಲಕ ಕಮ್ ಕಂಡಕ್ಟರ್ ಭೀಮಪ್ಪ ಬೆಳ್ಳಂಕಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಬೆಳಗ್ಗಿನಿಂದಲೇ ಪ್ರಾಯೋಗಿಕ ಸಾರಿಗೆ ಸಂಚಾರ ಶುರು ಮಾಡಲಾಗಿತ್ತು. ಈ ವೇಳೆ ಬಸ್ ತಡೆಯಲು ಬಂದ ಚಾಲಕ ನಿರ್ವಾಹಕ ಭೀಮಪ್ಪ ಬೆಳ್ಳಂಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಸ್ಯಾಟೆಲೈಟ್ ಬಸ್ ನಿಲ್ದಾಣದಲ್ಲಿ ಬಸ್ ತಡೆಯೋಕೆ ಬಂದಿದ್ದ ಸಾರಿಗೆ ಸಿಬ್ಬಂದಿ ಭೀಮಪ್ಪನನ್ನ ವಿಜಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಕೆಲವಷ್ಟು ಬಸ್ಸುಗಳನ್ನು ರಸ್ತೆಗೆ ಇಳಿಸುವ ಮೂಲಕವಾಗಿ ಪ್ರತಿಭಟನೆಗೆ ಅಡ್ಡಿ ಪಡುಸುತ್ತಿದೆ ಎನ್ನುವ ಉದ್ದೇಶದಿಂದ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ಗಳನ್ನು ತಡೆದು ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.