ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ದಿನೇಶ್ ಕಾರ್ತಿಕ್ ಇದೀಗ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಕಾಮೆಂಟರಿ ಮಾಡುತ್ತಿದ್ದ ಕಾರ್ತಿಕ್ ಅವರ ಕಮೆಂಟ್ ಒಂದು ಅವರ ಬೆವರಿಳಿಸಿದೆ.
ದಿನೇಶ್ ಕಾರ್ತಿಕ್ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ಫೈನಲ್ನಲ್ಲಿ ವೀಕ್ಷಕ ವಿವರಣೆಗಾರರಾಗಿದ್ದರು. ಆದಾದ ಬಳಿಕ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲೂ ಕಾಮೆಂಟರಿ ಮಾಡುತ್ತಿದ್ದರು. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಕಾರ್ತಿಕ್ ಕಾಮೆಂಟರಿ ಮಾಡುತ್ತಾ ಆಟಗಾರರು ಬ್ಯಾಟ್ಗಳನ್ನು ಬದಲಾಯಿಸಿಕೊಂಡು ಆಡುವುದು ಸಾಮಾನ್ಯ. ಕೆಲಬ್ಯಾಟ್ಸ್ಮ್ಯಾನ್ ಗಳು ತಮ್ಮ ಬ್ಯಾಟ್ನ್ನು ಇಷ್ಟ ಪಡುವುದಿಲ್ಲ. ಅವರು ಯಾವತ್ತು ಮತ್ತೊಬ್ಬರ ಬ್ಯಾಟನ್ನು ಇಷ್ಟ ಪಡುತ್ತಾರೆ. ಬ್ಯಾಟ್ಗಳು ಪಕ್ಕದ ಮನೆಯವನ ಹೆಂಡತಿಯಾಗಿ, ಯಾವತ್ತು ಸುಂದರವಾಗಿ ಕಾಣುತ್ತದೆ ಎಂದಿದ್ದರು. ಈ ಕಮೆಂಟ್ ಬಾರಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸುದೀಪ್ ಸಿಡಿಪಿಯಲ್ಲಿ ರಾರಾಜಿಸುತ್ತಿದೆ ಮಾಹಿಯ ನಾನಾ ಅವತಾರ
ಈ ನಡುವೆ ಕಾರ್ತಿಕ್ ಅವರ ಈ ಕಮೆಂಟ್ ಕೇಳಿಸಿಕೊಂಡ ಅವರ ಪತ್ನಿ ಮತ್ತು ತಾಯಿ ಅವರಿಗೆ ಬೈದಿದ್ದರಂತೆ ಹಾಗಾಗಿ ಕಾರ್ತಿಕ್ ಇಂಗ್ಲೆಂಡ್ ಮತ್ತು ಶ್ರೀಲಂಕಾ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಈ ಕಮೆಂಟ್ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಯಿಂದ ಉಂಟಾದ ವಿವಾದಕ್ಕೆ ತೆರೆ ಎಳೆದಿದ್ದಾರೆ.