ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ದೆಹಲಿ ಲಾಕ್ಡೌನ್ ನಿರ್ಬಂಧವನ್ನು ತೆರವುಗೊಳಿಸಿ ಮತ್ತೆ ಸಹಜ ರೀತಿಯಲ್ಲಿ ಎಲ್ಲವನ್ನೂ ಪುನಾರಂಭಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
- Advertisement 2
ನಾಳೆಯಿಂದ ಅಂಗಡಿಗಳು, ಮಾರುಕಟ್ಟೆ ಮತ್ತು ಮಾಲ್ಗಳನ್ನು ಸಂಪೂರ್ಣವಾಗಿ ತೆರೆಯಬಹುದಾಗಿದೆ. ಅಲ್ಲದೇ ಹೋಟೆಲ್ಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಿದೆ.
- Advertisement 3
ನಾಳೆ ಬೆಳಗ್ಗೆ 5 ಗಂಟೆಯ ನಂತರ ಕೆಲವು ಚಟುವಟಿಕೆಗಳಿಗೆ ನಿಯಮಗಳ ಅನುಸಾರವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಉಳಿದ ಚಟುವಟಿಕೆಗಳನ್ನು ನಿಷೇಧಿಸಿರುವುದಾಗಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
- Advertisement 4
ಮಾರುಕಟ್ಟೆ ಮತ್ತು ಮಾಲ್ಗಳನ್ನು ಒಂದು ವಾರ ಸಂಪೂರ್ಣವಾಗಿ ತೆರೆದು ನಂತರ ಪರಿಶೀಲಿಸಿ, ಕೊರೊನಾ ಪ್ರಕರಣಗಳು ಹೆಚ್ಚಾದರೆ ಈ ಹಿಂದೆ ಇದ್ದ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುತ್ತೇವೆ. ಕಡಿಮೆ ಪ್ರಕರಣ ದಾಖಲಾದರೆ ಈ ಅನ್ಲಾಕ್ ನಿಯಮಗಳೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್