ಚಾಮರಾಜನಗರ: ಚಿರತೆ ದಾಳಿಗೆ 10 ಕುರಿಗಳು ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿ ಇಂದು ತಡರಾತ್ರಿ ನಡೆದಿದೆ.
ಮಾದೇಗೌಡ ಅವರು ಸಾಕಿದ್ದ ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಕೊಟ್ಟಿಗೆ ಹಾಕಿದ್ದ ಬಿದಿರಿನ ತಡಿಕೆಯನ್ನು ಹಾರಿ ಕುರಿ ಹಿಂಡಿನ ಮೇಲೆ ದಾಳಿ ಮಾಡಿರುವ ಚಿರತೆ ಒಂದಾದ ನಂತರ ಒಂದರಂತೆ 10 ಕುರಿಗಳ ರಕ್ತ ಹೀರಿದೆ. ಒಂದೇ ಸಮನೆ ಕುರಿಗಳ ಕಿರುಚಾಟ ಕೇಳಿದ ಮನೆಮಂದಿ ಕೊಟ್ಟಿಗೆಗೆ ಬಂದು ನೋಡಿದಾಗ ಚಿರತೆ ಪರಾರಿಯಾಗಿದೆ. ಇದನ್ನೂ ಓದಿ: 204 ಕೋಟಿ ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ
ಈ ಸಂಬಂಧ, ಮಾದೇಗೌಡ 25 ಕುರಿಗಳಲ್ಲಿ 15 ಕುರಿ ಬದುಕುಳಿದಿವೆ. ಮೂರು ಕುರಿಗಳಿಗೆ ಗಾಯವಾಗಿದ್ದು, 10 ಕುರಿಗಳು ಚಿರತೆ ಬಾಯಿಗೆ ಸಿಕ್ಕು ಬಲಿಯಾಗಿವೆ. ಅಂದಾಜು 1 ಲಕ್ಷ ರೂ. ನಷ್ಟವಾಗಿದೆ. ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.