ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯ ತಾವು ಮಾಡುತ್ತಿರುವ ಸಮಾಜ ಸೇವೆಯಿಂದ ಸುದ್ದಿಯಾಗುತ್ತಿದ್ದಾರೆ. ಮನೆಯಿಲ್ಲದವರಿಗೆ, ಪೊಲೀಸರಿಗೆ, ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕವಾಗಿ ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
View this post on Instagram
- Advertisement 2
ನಿರಾಶ್ರಿತರು ಹಾಗೂ ಬಂದೋಬಸ್ತ್ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದ ರಾಗಿಣಿ ಚಿತಾಗಾರ ಹಾಗೂ ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್ ಹಂಚಿದ್ದಾರೆ. ರಾಗಿಣಿ ದ್ವಿವೇದಿ ಕಳೆದ ಲಾಕ್ಡೌನ್ನಲ್ಲೂ ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನಸಿ ಹಾಗೂ ಆಹಾರ ನೀಡುವ ಮೂಲಕ ನೆರವಾಗಿದ್ದರು. ಈಗಲೂ ಸಹ ನಟಿ ರಾಗಿಣಿ ಈ ಕೆಲಸವನ್ನು ಮುಂದುವರೆಸಿದ್ದಾರೆ.
- Advertisement 3
View this post on Instagram
- Advertisement 4
ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಸ್ಮಶಾನಕ್ಕೆ ಭೇಟಿ ಕೊಟ್ಟು ಅಲ್ಲಿ ಕೆಲಸ ಮಾಡುವವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ಚಿತಾಗಾರದಲ್ಲಿ ಕೆಲಸ ಮಾಡುವವರಿಗೆ ನೀಡಿದ್ದಾರೆ. ಸರ್ವಜ್ಞನಗರದ ಕಲ್ಲಹಳ್ಳಿ ರುದ್ರಭೂಮಿಗೆ ತೆರಳಿ ಅಲ್ಲಿ ನೆಲೆಸಿರುವ ಗುಂಡಿ ಅಗೆಯುವ ಕಾರ್ಮಿಕರು ಹಾಗೂ ಕುಟುಂಬದ ಮಹಿಳೆಯರನ್ನು ಭೇಟಿ ಮಾಡಿದ್ದಾರೆ ರಾಗಿಣಿ. ನಿರಾಶ್ರಿತರು ಹಾಗೂ ಬಂದೋಬಸ್ತ್ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದಾರೆ.
View this post on Instagram
ನನ್ನ ಪ್ರಕಾರ ಚಿತಾಗಾರದಲ್ಲಿ ಕೆಲಸ ಮಾಡುವವರೇ ಗ್ರೇಟ್ ಕೊರೊನಾ ವಾರಿಯರ್ಸ್ ಇವರ ಕೆಲಸದ ಹಿಂದಿರುವ ನೋವನ್ನ ಯಾರೂ ಪರಿಗಣಿಸುವಿದೇ ಇಲ್ಲ. ಹಾಗೇ ಇವರಲ್ಲಿ ಅದೆಷ್ಟೋ ಜನರಿಗೆ ಸಂಬಳ ಹಾಗೂ ಊಟ ಕೂಡ ಸಿಗುತ್ತಿಲ್ಲ. ನಮ್ಮ ಕೈಲಾದಷ್ಟು ಅವರ ಒಂದು ತಿಂಗಳಿಗೆ ಆಗುಷ್ಟು ರೇಷನ್ ಸಹಾಯ ಮಾಡಿದ್ದೇವೆ. ಕಳೆದ ನಾಲ್ಕು ಪೀಳಿಗೆಯಿಂದಲೂ ಈ ಚಿತಾಗಾರದಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತನ್ನು ನೋಡದೇ ಇರುವ ಓರ್ವ ಮಹಿಳೆಯನ್ನು ಬೇಟಿ ಮಾಡಿದೆ. ಖುಷಿ ಆಯ್ತು. ಇವರಿಂದ ನಾವು ದಿನಾ ಕಲಿಯುವುದು ಬಹಳಷ್ಟಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
View this post on Instagram
ರಾಗಿಣಿ ಕೊರೊನಾ ಸಮಯದಲ್ಲಿ ಮಾಡುತ್ತಿರುವ ಈ ಸಹಾಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಗಿಣಿ ತಾವು ಮಾಡುತ್ತಿರುವ ಸಹಾಯವನ್ನು ಮುಮದುವರೆಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವಲ್ಲಿ ರಾಗಿಣಿ ತೊಡಗಿಸಿಕೊಂಡಿದ್ದಾರೆ.
View this post on Instagram