– ಸಿಬ್ಬಂದಿ, ಕುಟುಂಬದವರ ಜೊತೆಗೆ ಬೆಟ್ಟ ಹತ್ತಿ ಸಂತಸಪಟ್ಟ ಪೊಲೀಸರು
ಯಾದಗಿರಿ: ಕೊರೊನಾ ಲಾಕ್ಡೌನ್ ಮತ್ತು ಅನ್ಲಾಕ್ ಕಾರ್ಯದಲ್ಲಿ ಸತತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಇಂದು ವನ ಸಂಚಾರ ಮಾಡುವ ಮೂಲಕ ವಿಶ್ರಾಂತಿ ಪಡೆದಿದ್ದಾರೆ.
ಸುರಪುರ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ತಮ್ಮ ವ್ಯಾಪ್ತಿಯ ಪಿಎಸ್ಐ, ಸಿಪಿಐ ಸಿಬ್ಬಂದಿ, ಕುಟುಂಬ್ಥರು ಹಾಗೂ ಅವರ ಮಕ್ಕಳ ಜೊತೆಗೆ ಕಾಲ ಕಳೆಯಲು ಇಂದು ಅನುವು ಮಾಡಿಕೊಂಡಿದ್ದಾರೆ. ಸದಾ ತಮ್ಮ ಕೆಲಸದಲ್ಲಿ ಬ್ಯಸಿಯಾಗಿರುತ್ತಿದ್ದ ಪೊಲೀಸರು, ಕುಟುಂಬಸ್ಥರ ಜೊತೆ ಕಾಲ ಕಳೆಯುವುದೇ ಅಪರೂಪವಾಗಿತ್ತು. ಇದನ್ನು ಗಮನಿಸಿದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ಎಲ್ಲ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಶಹಪುರದ ಬೆಟ್ಟದಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದಾರೆ.
ಇದಕ್ಕೂ ಮೊದಲು ಶಹಪುರ ನಗರದಲ್ಲಿ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್ ಅಧಿಕಾರಿಗಳು, ಬಳಿಕ ಬೆಟ್ಟಕ್ಕೆ ತೆರಳಿದರು. ಈ ಔಟಿಂಗ್ ನಲ್ಲಿ ಸುರಪುರ, ಶಹಪುರ, ಕೇಂಭಾವಿ, ಗೋಗಿ, ಬಿಗುಡಿ ಸಿಬ್ಬಂದಿ ಪಾಲ್ಗೊಂಡಿದ್ದರು.