ಬೆಂಗಳೂರು: 16 ನೇ ಶತಮಾನದಲ್ಲಿ ನಿರ್ಮಿಸಲಾದ ಅಮಾನಿ ಕೆರೆಗೆ ದೂರದ ವಿದೇಶದಿಂದ ಪಕ್ಷಿಗಳು ಬಂದು ಮೊಟ್ಟೆ ಇಟ್ಟು ಮರಿ ಮಾಡಿಕೊಂಡು ಹೋಗುತ್ತವೆ. ರಾಜಧಾನಿ ಕೂಗಳತೆ ದೂರದಲ್ಲಿಯೇ ಅಮಾನಿ ಕೆರೆ ಇದೆ. ಆದರೂ ಅವನತಿಯ ಹಾದಿ ಹಿಡಿದಿದೆ.
ಹೊಸಕೋಟೆಯಲ್ಲಿರುವ ಅಮಾನಿಕೆರೆ ಬೆಂಗಳೂರಿಗೆ ಅತಿ ದೊಡ್ಡ ಕೆರೆ. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಇರೋ ಈ ಕೆರೆಗೆ ನವೆಂಬರ್ ಸಮಯದಲ್ಲಿ ವಿದೇಶದಿಂದ ಹಕ್ಕಿಗಳು ಆಗಮಿಸಿ ತಮ್ಮ ಸಂತಾನ ಬೆಳಸಿಕೊಂಡು ಹಿಂದಿರುಗುತ್ತವೆ. ಆ ಸಮಯದಲ್ಲಿ ಈ ಕೆರೆ ಹಕ್ಕಿಗಳ ಕಲರವದಿಂದ ಕೂಡಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಕೆರೆ ಅವನತಿಯತ್ತ ಸಾಗುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ.
ಈ ಕೆರೆಗೆ ಯಾವುದೇ ರಕ್ಷಣೆ ಇಲ್ಲದಿಯುವುದು ಈ ಕೆರೆ ಹಾಳಾಗಲು ಪ್ರಮುಖ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ರಾತ್ರಿಯಾದ್ರೆ ಈ ಕೆರೆಯ ಬಯಲು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡುತ್ತೆ ಹೀಗಾಗಿ ಹಗಲು ಹೊತ್ತಿನಲ್ಲೇ ಜನ ಈ ಕೆರೆಯ ಬಳಿ ಓಡಾಡೋಕು ಭಯಪಡುತ್ತಾರೆ. ಇದನ್ನೂ ಓದಿ: ಕರ್ನಾಟಕದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ..!
ಇನ್ನು ಈ ಕೆರೆ ಸುಮಾರು 16 ನೆ ಶತಮಾದಲ್ಲಿ ನಿರ್ಮಾಣವಾಗಿದ್ದು ಕೆರೆಗೆ ಹೊಂದಿಕೊಂಡಂತೆ ಗಂಗಮ್ಮ ಹಾಗೂ ಆಂಜನೇಯನ ದೇವಾಲಯವಿದೆ. ಈ ಕೆರೆಯ ಕಟ್ಟೆ ಈಗಾಗ್ಲೇ ಹಾಳಾಗಿದೇ ಇನ್ನು ಕೆರೆ ಬೆಂಗಳೂರಿಗೆ ಹೊಂದಿಕೊಂಡಂತಿದ್ದು ಸರ್ಕಾರ ಈ ಕೆರೆಯ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯರ ಪ್ರಕಾರ ಈ ಕೆರೆಯ ಸುತ್ತ ಫೆನ್ಸಿಂಗ್ ಅಳವಡಿಸಿ ಗೇಟ್ ಹಾಕಿ ಕಾವಲುಗಾರರನ್ನು ಇರಿಸಿ ಅಭಿವೃದ್ಧಿ ಮಾಡಿದ್ರೆ ಇದೊಂದು ಸುಂದರ ಪಕ್ಷಿಧಾಮ ಆಗುತ್ತೆ. ಆಗ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತೆ ಅಂತ ಪಕ್ಷಿ ಪ್ರಿಯರೊಬ್ಬರು ತಿಳಿಸುತ್ತಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗಿದೆ ದೊಡ್ಡ ಸವಾಲು – ಅತಿವೃಷ್ಠಿ, ಪ್ರವಾಹ, 3ನೇ ಅಲೆಯೇ ಟ್ರಬಲ್