ತುಮಕೂರು: ಎರಡು ವರ್ಷಗಳಿಂದ ಪ್ರೀತಿ ಮಾಡಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದು, ಈಗ ಯುವತಿಗೆ ಮೋಸ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಿವಾಸಿ ಸೌಮ್ಯಾ(ಹೆಸರು ಬದಲಾಯಿಸಲಾಗಿದೆ)ಗೆ ಅದೇ ಊರಿನ ಟಾಟಾ ಏಸ್ ಚಾಲಕ ಸೋಮಲಿಂಗಯ್ಯ ಮೋಸ ಮಾಡಿ ಪರಾರಿಯಾಗಿದ್ದಾನೆ. ಜೆಡಿಎಸ್ ಕಾರ್ಯಕರ್ತನೂ ಆದ ಸೋಮಲಿಂಗಯ್ಯ ಮದುವೆಯಾಗುದಾಗಿ ನಂಬಿಸಿ, ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ ಯುವತಿ ಈಗ 5 ತಿಂಗಳ ಗರ್ಭಿಣಿಯಾಗಿದ್ದಾರೆ.
ಯುವತಿ ಗರ್ಭಿಣಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಸೋಮಲಿಂಗಯ್ಯ ನಾನವನಲ್ಲ ಎಂದು ಹೇಳಿ ಪರಾರಿಯಾಗಿದ್ದಾನೆ. ಈ ವಿಚಾರದ ಬಗ್ಗೆ ಊರ ಹಿರಿಯರು ಪಂಚಾಯತಿ ಮಾಡಿ ಸೌಮ್ಯಾ ಹಾಗೂ ಸೋಮಲಿಂಗಯ್ಯರಿಗೆ ಮದುವೆ ಮಾಡಲು ಹೊರಟಿದ್ದಾರೆ. ಆದರೆ ಹಂದನಕೆರೆ ಜಿಲ್ಲಾಪಂಚಾಯತ್ ಜೆಡಿಎಎಸ್ ಸದಸ್ಯ ರಾಮಚಂದ್ರಯ್ಯ ಇದಕ್ಕೆ ಅಡ್ಡಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಸಂಬಂಧ ಹಂದನಕೆರೆ ಠಾಣೆಯಲ್ಲಿ ಸೋಮಲಿಂಗಯ್ಯ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.