ಲಕ್ನೋ: ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನೊಂದಿಗಿನ ಸಂಬಂಧ ವಿರೋಧಿಸಿದ್ದಕ್ಕಾಗಿ ಹದಿಹರೆಯದ ಮಗನನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
16 ವರ್ಷದ ಮಗನನ್ನೇ ಕೊಂದಿರುವ ವಿಧವೆ ಹಾಗೂ ಆಕೆಯ ಪ್ರೇಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್
ಮುನೇಶ ಗೋದಾರ ಹಾಗೂ ಆಕೆಯ ಪ್ರಿಯಕರ ಸತೇಂದ್ರ ಸೋಮವಾರ ಮುಂಜಾನೆ 16 ವರ್ಷದ ಆಶಿಶ್ನನ್ನು ಕೊಂದು ಶವವನ್ನು ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ. ಬಳಿಕ ಮೃತದೇಹ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಜೈಸ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಹೆಚ್ಡಿಕೆ ಕಿಡಿ
ಆಶಿಶ್ ತಮ್ಮ ಸಂಬಂಧವನ್ನು ವಿರೋಧಿಸಿದ್ದರಿಂದ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತಿ ತೀರಿಕೊಂಡ ಬಳಿಕ ಮಹಿಳೆ, ಸತೇಂದ್ರ ಜತೆ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.