ಭುವನೇಶ್ವರ: ಸ್ಮಾರ್ಟ್ ಫೋನ್ಗಾಗಿ (Smart Phone) ಪತಿಯೊಂದಿಗೆ (Husband) ಜಗಳವಾಡಿದ (Conflict) ನಂತರ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಓಡಿಶಾದ (Odisha) ಮಲ್ಕಾನ್ಗಿರಿ ಜಿಲ್ಲೆಯ ಕಲಿಮೇಲಾ ಬ್ಲಾಕ್ನಲ್ಲಿ ನಡೆದಿದೆ.
ಜ್ಯೋತಿ ಮೃತ ಮಹಿಳೆ. ಈಕೆ ಒಂದು ವರ್ಷದ ಹಿಂದೆ ಕನ್ನಯ್ಯ ಎಂಬಾತನನ್ನು ಮದುವೆಯಾಗಿದ್ದಳು. ಆ ವೇಳೆ ಆಕೆ ಪತಿ ಕನ್ನಯ್ಯ ಬಳಿ ಸ್ಮಾರ್ಟ್ ಫೋನ್ ಕೊಡಿಸಲು ಬೇಡಿಕೆ ಇಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ EMI ಆಧಾರದ ಮೇಲೆ ಜ್ಯೋತಿಗೆ ಕನ್ನಯ್ಯ ಸ್ಮಾರ್ಟ್ಫೋನ್ ಖರೀದಿಸಿ ಕೊಟ್ಟಿದ್ದ. ಆದರೆ ಜ್ಯೋತಿಗೆ ಹಣಕಾಸಿನ ವಿಚಾರವನ್ನು ತಿಳಿಸಿರಲಿಲ್ಲ.
ಆದರೆ ಫೈನಾನ್ಸ್ ಕಂಪನಿಯವರು ಎಲ್ಲಾ ಕಂತನ್ನು ಪಾವತಿಸಿದ ನಂತರ ಡಾಕ್ಯುಮೆಂಟ್ ಸಹಿಗಾಗಿ ಕನ್ನಯ್ಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕನ್ನಯ್ಯ ಮನೆಯಲ್ಲಿ ಇರಲಿಲ್ಲ. ಬದಲಿಗೆ ಜ್ಯೋತಿ ಮನೆಯಲ್ಲಿದ್ದಳು. ಇದರಿಂದಾಗಿ ಜ್ಯೋತಿ ಇಎಂಐನಲ್ಲಿ ಮೊಬೈಲ್ ಖರೀದಿಸಿದ ಬಗ್ಗೆ ತಿಳಿದುಕೊಂಡಿದ್ದಾಳೆ. ಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು
ನಂತರ ಕನ್ನಯ್ಯ ಮನೆಗೆ ಹಿಂದಿರುಗಿದಾಗ ಜ್ಯೋತಿ ಆತನೊಂದಿಗೆ ಜಗಳವಾಡಿ ವಿಷ ಸೇವಿಸಿದ್ದಾಳೆ. ಆಕೆಯ ಕೃತ್ಯದಿಂದಾಗಿ ವಿಚಲಿತನಾದ ಕನ್ನಯ್ಯ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಜ್ಯೋತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ಚಿನ್ನದ ವ್ಯಾಪಾರಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನಾಭರಣ ಕಳ್ಳತನ
ಘಟನೆಗೆ ಸಂಬಂಧಿಸಿ ಕನ್ನಯ್ಯ ಮಾತನಾಡಿ, ನನ್ನ ಹೆಂಡತಿ ದುಬಾರಿ ಫೋನ್ ಖರೀದಿಸುವಂತೆ ಕೇಳಿದಳು. ಆದರೆ ನನ್ನ ಬಳಿ ಹಣವಿರಲಿಲ್ಲ. ಇದರಿಂದಾಗಿ ನಾನು ಅವಳಿಗೆ ಹೇಳದೆ ಇಎಂಐ ಮೂಲಕ ಫೋನ್ ಖರೀದಿಸಿದ್ದೆ. ಆದರೆ ಆಕೆಗೆ ವಿಷಯ ತಿಳಿದ ನಂತರ ನಮ್ಮ ನಡುವೆ ಜಗಳವಾಗಿತ್ತು. ನಂತರ ಅವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ತಿಳಿಸಿದರು.