ಮುಂಬೈ: ಎರಡನೇ ಬಾರಿಯೂ ಬಿಗ್ ಬಾಸ್ ರಿಯಾಲಿಟಿ ಶೋನಿಂದ ನಟಿ ರಾಖಿ ಸಾವಂತ್ ಹೊರಗುಳಿದ್ದಿದ್ದು, ಈ ಸಂಬಂಧ ಇದೀಗ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಟಿ ಎಂದಿನಿಂತೆ ಜಿಮ್ ಗೆ ತೆರಳುತ್ತಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು, ಬಿಗ್ ಬಾಸ್ ನಿಂದ ಎರಡನೇ ಬಾರಿ ಹೊರ ಬಂದಿರುವುದಕ್ಕೆ ಅಸಮಾಧಾನ ಹೊರಹಾಕಿದರು.
ಪ್ರತಿ ವರ್ಷ ನೀವು ನನಗೆ ಕರೆ ಮಾಡುತ್ತೀರಿ. ಮತ್ತು ನಿಮಗೆ ಬೇಕಾದಂತೆ ನನ್ನನ್ನು ಬಳಸಿಕೊಳ್ಳುತ್ತೀರಿ ಎಂಬುದನ್ನು ಇದು ತೋರಿಸುತ್ತಿದೆ. ನಾನು ಟಿಶ್ಯೂ ಪೇಪರ್ ಅಲ್ಲ ಆದರೆ ಜೀವಂತ, ಉಸಿರಾಡುವ ಮನುಷ್ಯ. ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಅದನ್ನು ಹಿಂಡುತ್ತೀರಿ ನಂತರ ಸಿಪ್ಪೆಯನ್ನು ಎಸೆಯುತ್ತೀರಿ. ಅಂತೆಯೇ ನನ್ನ ಮನರಂಜನೆ ಬೇಕಾಗುವವರೆಗೆ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ನಾನು ಕಿತ್ತಳೆ, ನಿಂಬೆ ಅಥವಾ ಟಿಶ್ಯೂ ಪೇಪರ್ ಅಲ್ಲ, ನೀವು ನನ್ನಿಂದ ಎಲ್ಲಾ ಮನರಂಜನೆಯನ್ನು ಪಡೆಯುತ್ತೀರಿ. ಆದರೆ ನನ್ನ ಬಿಟ್ಟು ಇತರರನ್ನು ಅಂತಿಮ ಹಂತಕ್ಕೆ ಕರೆದೊಯ್ಯುತ್ತೀರಿ. ಬಿಗ್ ಬಾಸ್, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಟ್ರೋಫಿಗೆ ಅರ್ಹನಾಗಿದ್ದೆ ಎಂದು ಹೇಳುತ್ತಾ ರಾಖಿ ಕಣ್ಣೀರು ಹಾಕಿದರು.
ಸದ್ಯ ರಾಖಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ರಾಖಿ ಕಣ್ಣೀರಿಗೆ ಕರಗಿದ್ದಾರೆ. ಹೌದು ನಿಮಗೆ ಮತ್ತೆ ಅನ್ಯಾಯವಾಗಿದೆ, ಇನ್ನೊಮದು ಬಾರಿ ಕರೆದರೆ ಹೋಗಬೇಡಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ಮತ್ತೊಬ್ಬರು. ಹೌದು ಅಲ್ಲಿ ಟಿಆರ್ಪಿ ಕಡಿಮೆಯಾಗುತ್ತಿದ್ದಂತೆಯೇ ಇವರ ಅವಶ್ಯಕತೆ ಅಲ್ಲಿ ಬೇಕಾಯಿತು. ಆದರೆ ಫಿನಾಲೆವರೆಗೆ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎಮದು ಮತ್ತೊಬ್ಬ ಅಭಿಮಾನಿ ಕಿಡಿಕಾರಿದ್ದಾರೆ.
View this post on Instagram