ತೆಲುಗು ಮತ್ತು ತಮಿಳು ಚಿತ್ರದ ಮೂಲಕ ಈಗಾಗಲೇ ಗಮನ ಸೆಳೆದಿರುವ ನಟ ತ್ರಿಗುಣ್ ಈಗ ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. `ಲೈನ್ಮ್ಯಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ.
ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಸೈ ಎನಿಸಿಕೊಂಡಿರುವ ಕಲಾವಿದ ತ್ರಿಗುಣ್ ಈಗ ಸ್ಯಾಂಡಲ್ವುಡ್ನತ್ತ ಮುಖ ಮಾಡಿದ್ದಾರೆ. ವಿ. ರಾಘು ಶಾಸ್ತ್ರಿ ನಿರ್ದೇಶನದ ದ್ವಿಭಾಷಾ ಪ್ರಾಜೆಕ್ಟ್ನಲ್ಲಿ ತ್ರಿಗುಣ್ ಕಾಣಿಸಿಕೊಳ್ಳಲಿದ್ದಾರೆ. ಏಕಕಾಲದಲ್ಲಿ ತೆಲುಗು ಮತ್ತು ಕನ್ನಡದಲ್ಲಿ ಈ ಚಿತ್ರ ಮೂಡಿ ಬರಲಿದೆ. ಮಂಡ್ಯ ಸೊಗಡು ಕೂಡ ಈ ಚಿತ್ರದಲ್ಲಿದ್ದು, ಮಂಡ್ಯ ಭಾಷೆಯಲ್ಲಿ ಮೂಡಿ ಬರಲಿದೆ.
ಮಂಡ್ಯದಲ್ಲಿ `ಲೈನ್ಮ್ಯಾನ್’ ಕೆಲಸ ಮಾಡುವ ಪಾತ್ರದಲ್ಲಿ ತ್ರಿಗುಣ್ ಬಣ್ಣ ಹಚ್ಚಲಿದ್ದಾರೆ. ಇನ್ನು ಶೂಟಿಂಗ್ ಶುರುವಾಗುವ ಮೊದಲೇ ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಜತೆಗೆ ಕನ್ನಡ ಭಾಷೆಯನ್ನು ಕೂಡ ಕಲಿಯುತ್ತಿದ್ದಾರೆ. ಭಿನ್ನ ಕಥೆ ಮತ್ತು ಪಾತ್ರದ ಮೂಲಕ ಕನ್ನಡಕ್ಕೆ ನಟ ತ್ರಿಗುಣ್ ಬರುತ್ತಿದ್ದಾರೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸಾಥ್
View this post on Instagram
`ಲೈನ್ಮ್ಯಾನ್’ ಚಿತ್ರದ ರಿಲೀಸ್ಗೂ ಮುನ್ನವೇ ಕನ್ನಡದ ಮತ್ತೊಂದು ಸಿನಿಮಾ ತ್ರಿಗುಣ್ ಪಾಲಾಗಿದ್ದು, `ಗಂಜಾಂ’ ಎನ್ನುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣದ ಸಿನಿಮಾದಲ್ಲಿ ಗಮನ ಸೆಳೆದ ಹಾಗೇ ಕನ್ನಡ ಚಿತ್ರದಲ್ಲೂ ತ್ರಿಗುಣ್ ಕಮಾಲ್ ಮಾಡುತ್ತಾರಾ ಅಂತಾ ಕಾದು ನೋಡಬೇಕಿದೆ.