ಶ್ರೀಲೀಲಾ (Sreeleela) ಮತ್ತೆ ಸುದ್ದಿಗೆ ಬಂದಿದ್ದಾರೆ. ಇದುವರೆಗೆ ಸಿನಿಮಾ ಗೆದ್ದಿದ್ದು, ಸೋತಿದ್ದಕ್ಕೆ ಮಾತ್ರ ಲೈಮ್ಲೈಟಿನಲ್ಲಿದ್ದರು. ಮೊದಲ ಬಾರಿ ಪ್ರೀತಿ ತೋರಿಸಿ ಎಲ್ಲರಿಂದ ಭಪ್ಪರೇ ಹುಡುಗಿ ಎಂದು ಹೊಗಳಿಸಿಕೊಂಡಿದ್ದಾರೆ. ಅಂಥ ಕಾಯಕ ಏನು ಮಾಡಿದರು ಶ್ರೀಲೀಲಾ? ಅದ್ಯಾವ ಜೀವಗಳಿಗೆ ಆಸರೆಯಾದರು ? ಮನ ಕಲಕುವ ಕಥನ ಇಲ್ಲಿದೆ.
ಸಿನಿಮಾ ನಟ ನಟಿಯರು ಸುದ್ದಿಯಲ್ಲಿ ಸದಾ ಇರುತ್ತಾರೆ. ಒಳ್ಳೆಯದು, ಕೆಟ್ಟದ್ದು ಎರಡನ್ನೂ ಮಾಧ್ಯಮ ಬಿಚ್ಚಿಡುತ್ತವೆ. ಕೆಲವರು ಒಳ್ಳೆಯದನ್ನು ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ.. ಉಳಿದವರು ಕೆಟ್ಟದ್ದಕ್ಕೆ ಕಿಡಿ ಕಾರುತ್ತಾರೆ. ಆದರೆ ಶ್ರೀಲೀಲಾ ಮಾತ್ರ ಎರಡನ್ನೂ ಒಪ್ಪಿಕೊಂಡಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ನೆರವಾಗಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿಕೊಂಡಿದ್ದಾರೆ. ಇದಪ್ಪಾ ರಿಯಲ್ ಹೀರೋಯಿನ್ ಲಕ್ಷಣ ಎಂದಿದ್ದಾರೆ ಜನ.
ಕನ್ನಡದ ಈ ಹುಡುಗಿ ಏಕಾಏಕಿ ಟಾಲಿವುಡ್ನಲ್ಲಿ ಸರ ಪಟಾಕಿ ಹಚ್ಚಿದ್ದು ಸಣ್ಣ ಮಾತಲ್ಲ. ಹತ್ತತ್ತು ಸಿನಿಮಾ ಒಪ್ಪಿ, ಟಾಪ್ ಸ್ಟಾರ್ಸ್ ಜೊತೆ ಹೆಜ್ಜೆ ಹಾಕಿ ಸೆನ್ಸೇಶನಲ್ ಹೀರೋಯಿನ್ ಪಟ್ಟ ಏರಿದರು. ರಶ್ಮಿಕಾ ಬಾಲಿವುಡ್ಗೆ ಹೋಗಿದ್ದು ಶ್ರೀಲೀಲಾ ಹಾದಿಗೆ ಹೂವು ಹಾಸಿತು. ಪವನ್ಕಲ್ಯಾಣ್ ಸಿನಿಮ ಹಿಟ್ ಆದರೆ ಶ್ರೀ ಆಕಾಶಕ್ಕೆ ಏರುವುದು ಖಚಿತ. ಅದೇ ಹುಡುಗಿ ಈಗ ಇಬ್ಬರು ಮಕ್ಕಳ ಬಾಳಿಗೆ ದೀಪ ಹಚ್ಚಿದ್ದಾರೆ. ಹಣ ಇದ್ದರೆ ಸಾಲದು ಅದನ್ನು ಅಸಹಾಯಕರಿಗೆ ಹಂಚುವ ಮನಸು ಬೇಕು. ಅದು ಶ್ರೀಗೆ ಇದೆ.