ಬೆಂಗಳೂರು: ಸಾರಿಗೆ ಕಾರ್ಮಿಕರಿಗೆ ಕೆಎಸ್ಆರ್ಟಿಸಿ (KSRTC) ಬಂಪರ್ ಗಿಫ್ಟ್ ನೀಡಿದೆ. ಹಬ್ಬ, ಜಾತ್ರೆ ಮತ್ತು ರಜಾದಿನಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡುತ್ತಿದೆ.
ಪ್ರಯಾಣಿಕರಿಗೆ ಗುಣಮಟ್ಟ ಸೇವೆ ನೀಡಲು ಸಿಬ್ಬಂದಿ ಕೊರತೆ ನಿಗಸಲು ಕೆಎಸ್ಆರ್ಟಿಸಿ ಇಲಾಖೆಯು ಈ ಕ್ರಮವನ್ನು ಕೈಗೊಂಡಿದೆ. ಜ. 23 ರಿಂದ ಜೂ. 23ರವರೆಗೆ ಹಬ್ಬ ಹಾಗೂ ಸಾರ್ವತಿಕ ರಜೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡುವಂತೆ KSRTC ಆದೇಶ ಹೊರಡಿಸಿದೆ.
ಜ. 23ರಿಂದ ಈ ಹೊಸ ನಿಯಮ ಅನ್ವಯ ಮಾಡಿದೆ. ಅಂದಿನಿಂದ ಜೂ. 23ರವರೆಗೆ ಈ ಡಬಲ್ ಸಂಬಳದ ಬಂಪರ್ ನಿಯಮ ಅಪ್ಲೈ ಆಗಲಿದೆ. ಈ ಅವಧಿಯಲ್ಲಿ ಸಾಕಷ್ಟು ರಜಾ ದಿನಗಳು ಬರುವುದರಿಂದ ಚಾಲಕ (Driver), ಕಂಡಕ್ಟರ್ಸ್ ಹಾಗೂ ಇತರೆ ಸಿಬ್ಬಂದಿ ಕೊರತೆ ಎದುರಾಗುವುದು ಸಹಜವಾಗಿರುತ್ತೆ. ಆದರೆ ಇಂತಹ ಅವಧಿಯಲ್ಲೇನಾದರೂ ಕಾರ್ಮಿಕ ಸಿಬ್ಬಂದಿ ರಜೆ ಪಡೆಯದೆ ಕೆಲಸಕ್ಕೆ ಹಾಜರಾದರೆ ಅವರಿಗೆ ಡಬಲ್ ಸಂಬಳ ಸಿಗಲಿದೆ ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಬೃಹತ್ ಕಾರ್ಯಕ್ರಮದಲ್ಲಿ `ಸಿದ್ದು ನಿಜಕನಸುಗಳು’ ಕೃತಿ ಬಿಡುಗಡೆಗೆ ಪ್ಲಾನ್?
ಸಾರ್ವತ್ರಿಕ ರಜೆಗಳ ವೇಳೆ ಸಾರ್ವಜನಿಕರಂತೆ ಕಾರ್ಮಿಕ ಸಿಬ್ಬಂದಿ ಕೂಡ ರಜೆ ಪಡೆದು ಧೀರ್ಘಾವಧಿ ಪ್ರವಾಸಕ್ಕೆ ತೆರಳುವುದು ಕಾಮನ್. ಕಾರ್ಮಿಕರ ಕೊರತೆ ಈ ವೇಳೆ ಕಂಡುಬರುವುದರಿಂದ ಇಂಥದ್ದೊಂದು ಆಲೋಚನೆಯನ್ನು ಸಾರಿಗೆ ನಿಗಮ ಮಾಡಿದೆ. ಇದನ್ನೂ ಓದಿ: ಸಿಬ್ಬಂದಿ ಕೊರತೆ, ಸ್ಥಳದ ಕೊರತೆ ನೆಪ- ಬೆಂಗಳೂರಿಗೆ ಸದ್ಯಕ್ಕಿಲ್ಲ ನಮ್ಮ ಕ್ಲಿನಿಕ್ ಭಾಗ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k