Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Chitradurga

ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Public TV
Last updated: April 17, 2020 11:38 am
Public TV
Share
2 Min Read
ctd sp radhika
SHARE

ಚಿತ್ರದುರ್ಗ: ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಮಾಡಿರುವ ಲಾಕ್‍ಡೌನ್ ಅವಧಿ ವಿಸ್ತರಣೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ಯಾದಗಿರಿಯ ನಿರಾಶ್ರಿತರ ಮನವೊಲಿಸುವಲ್ಲಿ ಚಿತ್ರದುರ್ಗ ಎಸ್‍ಪಿ ಜಿ. ರಾಧಿಕಾ ಕೊನೆಗೂ ಯಶಸ್ವಿಯಾಗಿದ್ದಾರೆ.

ಭಾರತ ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ತಮ್ಮ ಸ್ವಗ್ರಾಮಗಳಿಗೆ ನಮ್ಮನ್ನು ಕಳುಹಿಸಿ ಇಲ್ಲವಾದರೆ ನಮಗೆ ನೀವು ಕೊಡುವ ಅನ್ನ-ನೀರು ಬೇಡವೆಂದು ಹಠಹಿಡಿದು, ಚಿಕ್ಕ ಹಸುಗೂಸುಗಳಿಗೂ ಹಾಲುಣಿಸದಂತೆ ನಿರಾಶ್ರಿತರು ಉಪವಾಸ ಮಾಡುತ್ತಾ ಪಟ್ಟು ಹಿಡಿದಿದ್ದರು.

ctd sp radhika 1

ಹೀಗಾಗಿ ಅವರನ್ನು ಬುಧವಾರ ಮೊಳಕಾಲ್ಮೂರಿನ ಯರ್ರೇನಹಳ್ಳಿಯಿಂದ ಬೇರೆಡೆಗೆ ಎರಡು ಗುಂಪುಗಳಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಆಗ ಮೊಳಕಾಲ್ಮೂರಿನ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮಾಹಿತಿಯ ಕೊರತೆಯಿಂದಾಗಿ ನಿರಾಶ್ರಿತರನ್ನೇ ಕೊರೊನಾ ಸೊಂಕಿತರೆಂದು ಭಾವಿಸಿ, ಅವರನ್ನು ನಮ್ಮ ಊರೊಳಗೆ ಕರೆತರಬೇಡಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರಾತ್ರಿಯಿಡಿ ಹೋರಾಟ ನಡೆಸಿದ್ದರು.

ಚಿತ್ರದುರ್ಗಕ್ಕೆ ಕರೆ ತರೋಣವೆಂದರೆ ಅಲ್ಲಿನ ಹಾಸ್ಟಲ್‍ಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಬುಧವಾರ ತಡರಾತ್ರಿ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಹಾಸ್ಟಲ್‍ಗಳಲ್ಲಿ ಎರಡು ಕಡೆ ಈ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ತಿಳಿದಿದ್ದ ಚಿತ್ರದುರ್ಗ ಎಸ್‍ಪಿ ರಾಧಿಕಾ ಅವರು ಕರ್ತವ್ಯದಲ್ಲಿ ಖಡಕ್ ಅಧಿಕಾರಿ ಆಗಿದ್ದರು ಸಹ ಆ ಚಿಕ್ಕ ಚಿಕ್ಕ ಮಕ್ಕಳ ಪರಿಸ್ಥಿತಿ ಹಾಗೂ ನಿರಾಶ್ರಿತರ ಅಸಹಯಕತೆ ಕಂಡು ಮನದಲ್ಲೆ ಮರುಗಿದ್ದರು.

ctd sp radhika 2

ಸುಮಾರು 30 ಜನ ಮಕ್ಕಳು ಸೇರಿದಂತೆ 126 ಜನ ನಿರಾಶ್ರಿತರಿರುವ ಕೇಂದ್ರಕ್ಕೆ ಗುರುವಾರ ದಿಡೀರ್ ಧಾವಿಸಿ ಎಸ್‍ಪಿ ಆ ನಿರಾಶ್ರಿತರ ಸಂಕಷ್ಟ ಆಲಿಸಿದರು. ಕರುಣೆ ಹಾಗೂ ಮಾನವೀಯತೆ ಅನ್ನೋದು ಅಧಿಕಾರಿಗಳಲ್ಲೂ ಅಡಗಿರುತ್ತದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಮೊದಲು ಅಧಿಕಾರಿಯಾಗಿ ಕಾನೂನು ಹಾಗೂ ಸದ್ಯದ ವಾತಾವರಣದ ಬಗ್ಗೆ ನಿರಾಶ್ರಿತರಿಗೆ ಅರಿವು ಮೂಡಿಸಿದರು. ಬಳಿಕ ಹಸುಗೂಸುಗಳಿಗೆ ದಯವಿಟ್ಟು ಉಪವಾಸವಿಡಬೇಡಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು. ಅಲ್ಲದೇ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಕೊರೊಮಾ ಸೋಂಕು ಹರಡದಂತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಜಾರಿಮಾಡಿದ್ದಾರೆ ಹೊರೆತು ಯಾರ ಮೇಲಿನ ದ್ವೇಷವೇನಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ctd sp radhika 3

ಈಗ ನಾವು ನಿಮ್ಮನ್ನು ನಿಮ್ಮ ಗ್ರಾಮಗಳಿಗೆ ಕಳುಹಿಸಿದರು ಸಹ ನೀವುಗಳು ನಿಮ್ಮ ಊರೊಳಗೆ ಪ್ರವೇಶಿಸೋದು ಸುಲಭವಲ್ಲ ಎಂದು ತಿಳಿ ಹೇಳಿದರು. ನಿರಾಶ್ರಿತರ ಸ್ವಗ್ರಾಮಗಳು ಹಾಗೂ ಅವರ ಜಿಲ್ಲೆಯಲ್ಲಿರುವ ಜನರ ಮನಸ್ಥಿತಿಯ ವಾಸ್ತವವನ್ನು ಅರ್ಥವಾಗುವಂತೆ ಹೇಳಿದರು. ಇದರಿಂದಾಗಿ ಸ್ವಲ್ಪ ಸಮಾಧಾನಗೊಂಡ ನಿರಾಶ್ರಿತರು ರಾಧಿಕಾ ಅವರ ಮಾತಿನಲ್ಲಿದ್ದ ಸತ್ಯವನ್ನು ಯೋಚಿಸಿದ್ದು, ಅವರ ಮನದಲ್ಲಿದ್ದ ಊರಿಗೆ ಹೋಗುವ ಆಸೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟಿದ್ದಾರೆ.

ಹಾಗೆಯೇ ನಿರಾಶ್ರಿತರಿಗಾಗಿ ರಾಧಿಕಾ ಅವರು ಪ್ರೀತಿಯಿಂದ ತಂದಿದ್ದ ಹಣ್ಣು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು, ಅವನ್ನೆಲ್ಲಾ ಪಡೆದು ಸದ್ಯ ನಿರಾಶ್ರಿತರು ಶಾಂತವಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ನಿರಾಶ್ರಿತರ ಹಠವಾದಿತನವನ್ನು ಲೇಡಿ ಸಿಂಗಂ ಅವರ ಮನಗೆಲ್ಲುವ ಮೂಲಕ ಲಾಠಿ ಹಿಡಿಯುವ ಕೈಯಲ್ಲಿ ಜನರ ಮನಗೆಲ್ಲುವ ಶಕ್ತಿ ಕೂಡ ಇರುತ್ತದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

TAGGED:ChitradurgaLockdownPublic TVRefugeesSP G. Radhikaಎಸ್‍ಪಿ ಜಿ. ರಾಧಿಕಾಚಿತ್ರದುರ್ಗನಿರಾಶ್ರತರುಪಬ್ಲಿಕ್ ಟಿವಿಲಾಕ್‍ಡೌನ್
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

SRH Player Heinrich Klaasen Loses Cool
Cricket

ಇನ್ನೊಮ್ಮೆ ಈ ರೀತಿ ಮಾಡಿದ್ರೆ ನೀನು ನೆಲದ ಮೇಲೆ ಬೀಳಬೇಕಾಗುತ್ತೆ: ಅಭಿಮಾನಿ ವಿರುದ್ಧ ಕ್ಲಾಸೆನ್ ಕೆಂಡಾಮಂಡಲ

Public TV
By Public TV
8 minutes ago
bhagwant maan
Latest

ವಿಧಾನಸಭೆಗೆ ಕುಡಿದು ಬಂದಿದ್ರಾ ಪಂಜಾಬ್‌ ಸಿಎಂ?- ಆಲ್ಕೋಹಾಲ್‌ ಟೆಸ್ಟ್‌ಗೆ ವಿಪಕ್ಷಗಳ ಒತ್ತಾಯ

Public TV
By Public TV
34 minutes ago
r ashok
Bengaluru City

ಕಾಂಗ್ರೆಸ್‌ನಲ್ಲಿ ಇಬ್ಬರ ಜಗಳ ಮೂರನೇಯವನಿಗೆ ಲಾಭದಂತಾಗಿದೆ, ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆಯೂ ಪ್ರಯತ್ನಿಸ್ತಿದ್ದಾರೆ: ಆರ್‌.ಅಶೋಕ್‌

Public TV
By Public TV
42 minutes ago
Sexual demands in the office abuse called Brown Boy Indian employee turns against JPMorgan Chases executive director Lorna Hajdini
Crime

ಕಚೇರಿಯಲ್ಲೇ ಲೈಂಗಿಕ ಬೇಡಿಕೆ, Brown Boy Indian ಕರೆದು ನಿಂದನೆ – ಜೆಪಿ ಮೋರ್ಗಾನ್ ಅಧಿಕಾರಿ ವಿರುದ್ಧ ತಿರುಗಿಬಿದ್ದ ಭಾರತೀಯ

Public TV
By Public TV
54 minutes ago
Elephant runs amok in Angamaly ernakulam tramples driver to death
Latest

ಮದವೇರಿದ ಆನೆಯ ಅಟ್ಟಹಾಸಕ್ಕೆ ಚಾಲಕ ಬಲಿ – ರಣರಂಗವಾದ ದೇವಸ್ಥಾನದ ಆವರಣ

Public TV
By Public TV
2 hours ago
hyderabad techie 300546490 16x9 0 1
Crime

ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ, ವಿಡಿಯೋ ವೈರಲ್‌ – 19 ಪುಟ ಡೆತ್‌ನೋಟ್‌ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?