ಚಾಮರಾಜನಗರ: ಹುಲಿ ದಾಳಿಗೆ (Tiger Attack) ಕುರಿಗಾಹಿಯೊಬ್ಬ (Shepherd) ಬಲಿಯಾದ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ (Bandipur) ವ್ಯಾಪ್ತಿಯ ಹಾಡಿನಕಣಿವೆ ಬಳಿ ನಡೆದಿದೆ.
ಬಸವ (50) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಇವರು ಬುಡಕಟ್ಟು ಜೇನುಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಡಂಚಿನಲ್ಲಿ ಇವರ ಮೃತದೇಹ ಅರ್ಧಂಬರ್ಧ ತಿಂದ ಸ್ಥಿತಿಯಲ್ಲಿ ದೊರೆತಿದೆ. ಬಸವ ಕುರಿ ಮೇಯಿಸಲು ಹೋಗಿದ್ದು, ಹಾಡಿಯ ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದರು. ಈ ವೇಳೆ ಹುಲಿ ದಾಳಿ ಮಾಡಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ – ಮಹಿಳೆ ದಾರುಣ ಸಾವು
ಹುಲಿ ಅರ್ಧ ಕಿಮೀ ದೂರ ಕುರಿಗಾಹಿಯನ್ನು ಎಳೆದೊಯ್ದಿದೆ. ಸ್ಥಳದಲ್ಲಿ ಬಂಡೀಪುರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೃತದೇಹ ಕಾಡಿನಿಂದ ಹೊರತರಲೂ ಅಧಿಕಾರಿಗಳು ಮುಂದಾಗಿದ್ದಾರೆ. ಬಂಡೀಪುರದ ಕುಂದುಕೆರೆ ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಶಂಕೆ