ಯಾದಗಿರಿ: ಕುರಿಗಾಯಿ ತನ್ನ ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಬೇರೆ ಊರಿಗೆ ಕುರಿಯನ್ನು ಮೇಯಿಸುತ್ತಾ ತೆರಳುತ್ತಿದ್ದಾಗ ಸರ್ಕಾರಿ ಬಸ್ ಹರಿದು ಸಾವನಪ್ಪಿದ್ದ ಘಟನೆ ಗುರಮಠಕಲ್ ಗಡಿ ಭಾಗವಾಗಿರುವ ಅನಪೂರ ಗ್ರಾಮದ ಬಳಿ ನಡೆದಿದೆ.
ನರಸಪ್ಪ ಪೂಜಾರಿ(65) ಮೃತ ದುರ್ದೈವಿ. ಈತ ಕುರಿಗಾಯಿ ಮೂಲತ ಶಹಾಪೂರ ತಾಲೂಕಿನ ತಡಿಬಿಡಿ ಗ್ರಾಮದ ವ್ಯಕ್ತಿ ಎಂದು ಪೆÇಲೀಸರು ಗುರುತಿಸಿದ್ದಾರೆ. ತೆಲಂಗಾಣದ ಮಹಿಬೂಬ ನಗರ ಜಿಲ್ಲೆಯ ನಾರಾಯಣಪೇಟೆ ಕಡೆ ಹೊರಟ್ಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
- Advertisement 2
ಘಟನಾ ಸ್ಥಳದಿಂದ ಬಸ್ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಗುರಮಠಕಲ್ ಪೊಲೀಸರು ಭೇಟಿ ನೀಡಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.