ಬೆಳಗಾವಿ: ಚುನಾವಣೆ (Election) ಬಂದ್ಮೇಲೆ ಬಿಜೆಪಿಯವರು (BJP) ಮಸೀದಿ, ಮಂದಿರ, ಪಾಕಿಸ್ತಾನ ಅಷ್ಟೇ ತೋರಿಸೋದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯವರು ಇದನೆಲ್ಲ ಪ್ರಾರಂಭ ಮಾಡ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಸೀದಿ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಚುನಾವಣೆ ಬರುತ್ತಿದ್ದಂತೆ ಮಸೀದಿ, ಮಂದಿರ, ಪಾಕಿಸ್ತಾನ ಅಷ್ಟೇ ತೋರಿಸೋದು. ಅಭಿವೃದ್ಧಿ, ಉದ್ಯೋಗ, ಬೆಲೆ ಏರಿಕೆ ಮರೆಮಾಚಲು ಇದನ್ನು ಮುಂದೆ ಬಿಟ್ಟೇ ಬಿಡ್ತಾರೆ. ಈ ಹಿಂದೆ ಮಂಗಳೂರು, ಉಡುಪಿ, ಕಾರವಾರದಲ್ಲಿ ಚುನಾವಣೆ ಬಂದಾಗ ಯಾವ ರೀತಿ ಮಾಡಿದ್ದರು ಅನ್ನೋದನ್ನು ನೋಡಿದ್ದೇವೆ. ಈಗ ಇಲ್ಲಿಯೂ ಮಾಡ್ತಾರೆ, ಬೇರೆಡೆಯೂ ಮಾಡ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಅನಧಿಕೃತ ಮಸೀದಿ ನಿರ್ಮಾಣ ಆರೋಪ- ಫಾತೀಮಾ ಮಸೀದಿಗೆ ಬೀಗ
ನೂರಾರು ವರ್ಷಗಳಿಂದ ಮಸೀದಿ ಇದೆ. ಮಂದಿರ ಇದೆ, ಚರ್ಚ್ ಸಹ ಇದೆ. ಈಗ ತಗೆಯುವಂತಹ ಅವಶ್ಯಕತೆ ಏನು ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗ್ತಿದ್ರೆ, ನ್ಯಾಯಾಲಯ ಆದೇಶ ನೀಡಿದ್ರೆ ಆ ಮಾತು ಬೇರೆ ಆಗುತ್ತಿತ್ತು. ಆದ್ರೆ, ಶಾಸಕರು ಮುಂದೆ ನಿಂತು ಪೊಲೀಸರಿಗೆ ಹೇಳಿ ಆ ಮಸೀದಿ ತೆಗೆಯಿರಿ, ಈ ಮಸೀದಿ ತೆಗೆಯಿರಿ ಅನ್ನೋದು ತಪ್ಪು ಆಗುತ್ತದೆ. ಅದರಿಂದ ಸಾರ್ವಜನಿಕರಿಗೆ ಏನು ತೊಂದರೆ ಆಗುತ್ತಿದೆ ಎನ್ನುವುದನ್ನು ನೋಡಬೇಕು. ಚುನಾವಣೆ ಆಗೋವರೆಗೂ ಬಿಜೆಪಿ ಇದನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಇದು ಒಂಥರಾ ವಿಥೌಟ್ ಇನ್ವೆಸ್ಟ್ಮೆಂಟ್, ರಿಟರ್ನ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ
ಅವರು ಸ್ವಂತ ಜಾಗದಲ್ಲಿ ಮಸೀದಿ ಕಟ್ಟಿಕೊಂಡಿದ್ದಾರೆ. ಸರ್ಕಾರಿ ಜಾಗ ಅಲ್ಲ. ಅದರ ಬಗ್ಗೆ ವಿಚಾರಿಸಲು ಕಾರ್ಪೋರೇಶನ್, ಜಿಲ್ಲಾಡಳಿತ ಇದೆ. ವಿಶೇಷವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ನಡೀತಿದೆ. ಅಂತಿಮವಾಗಿ ಅದು ಕಾನೂನಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k