Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಪ್ರಬಲ ಎಡಪಂಥೀಯರಿಂದಾಗಿ ಕೇರಳದಲ್ಲಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್

Public TV
Last updated: December 6, 2021 9:41 am
Public TV
Share
2 Min Read
Pinarayi Vijayan
SHARE

– ಪರಸ್ಪರ ದ್ವೇಷ, ಜನರಲ್ಲಿ ಅನುಮಾನ ಮೂಡಿಸುವುದೇ ಸಂಘಪರಿವಾರದ ಅಜೆಂಡಾ

ತಿರುವನಂತಪುರಂ: ರಾಜ್ಯದಲ್ಲಿ ಪ್ರಬಲ ಎಡಪಂಥೀಯರಿಂದಾಗಿ ಸಂಘ ಪರಿವಾರದ ಕೋಮುವಾದಿ ಅಜೆಂಡಾವು ಕೇರಳದಲ್ಲಿ ಸಫಲವಾಗಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಕಮ್ಯೂನಿಸ್ಟ್ ಕ್ರಾಂತಿಕಾರಿ ಪಿ.ಕೃಷ್ಣ ಪಿಳ್ಳೈ ಅವರ ಸ್ಮರಣಾರ್ಥ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದ ವಿಜಯನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರ್‍ಎಸ್‍ಎಸ್ ತಮ್ಮ ಕೋಮು ಪ್ರಚಾರವನ್ನು ಹರಡುವ ಮತ್ತು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಈ ಮೂಲಕ ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

RMG Rss A

ಎಡಪಂಥೀಯನ್ನು ದುರ್ಬಲಗೊಳಿಸಲು ಅವರು ವಿವಿಧ ಕೋಮುವಾದಿ ಅಜೆಂಡಾಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಅವರು ಅದರಲ್ಲಿ ವಿಫಲರಾಗಿದ್ದಾರೆ. ಈಗ ಅವರು ಸಾರ್ವಜನಿಕ ಭಾಷಣವನ್ನು ಕಲುಷಿತಗೊಳಿಸುವತ್ತ ಗಮನಹರಿಸಿದ್ದಾರೆ. ಅದರ ಭಾಗವಾಗಿ ಅವರು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತಾ, ಕೋಮು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

ಹಲಾಲ್ ಆಹಾರದ ಬಗ್ಗೆ ಇತ್ತೀಚಿನ ವಿವಾದವನ್ನು ನೀವೆಲ್ಲರೂ ಗಮನಿಸಿರಬಹುದು. ಇತ್ತೀಚೆಗೆ ಆರ್‍ಎಸ್‍ಎಸ್ ಶಬರಿಮಲೆಯಲ್ಲಿ ನೀಡಲಾಗುವ ಪ್ರಸಾದಕ್ಕೆ ಹಲಾಲ್ ಪ್ರಮಾಣೀಕರಣದ ವಿವಾದವನ್ನು ಮಾಡುತ್ತಿದೆ. ಈ ಮೂಲಕ ಸಮಾಜದಲ್ಲಿ ‘ದ್ವೇಷ’ ವನ್ನು ಹರಡಲು ಪ್ರಯತ್ನಿಸುತ್ತಿದೆ. ಇದು ನಮ್ಮ ಸಮಾಜಕ್ಕೆ ಹೊಸ ವಿಷಯವೇ? ಸಂಸತ್ತಿನಲ್ಲಿಯೂ ಹಲಾಲ್ ಪ್ರಮಾಣೀಕೃತ ಆಹಾರವಿದೆ. ಶಬರಿಮಲೆಯಲ್ಲಿ ಹಲಾಲ್ ಗುರುತು ಹೊಂದಿರುವ ಪ್ರಸಾದವು ಸರಬರಾಜು ಮಾಡಲ್ಪಟ್ಟಿದೆ ಎಂದು ಶಿವಸೇನೆಯ ನಾಯಕರು ಹೇಳಿದರು. ಹಲಾಲ್ ಪ್ರಮಾಣೀಕರಣವು ವಿವಿಧ ದೇಶಗಳಲ್ಲಿ ವ್ಯಾಪಾರ ತಂತ್ರದ ಭಾಗವಾಗಿದೆ. ಇದನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮ ಮಾಡುವುದಿಲ್ಲ. ಅವರು ಬೇಕೆಂದು ನಮ್ಮಲ್ಲಿ ದ್ವೇಷವನ್ನು ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

BJP - CONGRESS

ಈ ಸಂಘಪರಿವಾರದ ಕೋಮುವಾದಿ ಅಜೆಂಡಾ ಇತರ ಹಲವು ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿದೆ. ಅದು ಅಲ್ಲದೇ ಅವರು ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೇರಳ ರಾಜ್ಯದಲ್ಲಿ ಎಡ ಚಳುವಳಿಯ ಪ್ರಬಲವಾಗಿದ್ದು, ಸಂಘಪರಿವಾರವು ತನ್ನ ಹಿಡಿತ ಸಾಧಿಸಲು ವಿಫಲವಾಗಿದೆ. ಹಲವು ರಾಜ್ಯಗಳ ದುರದೃಷ್ಟಕರ ಪರಿಸ್ಥಿತಿ ನಮಗೆ ತಿಳಿದಿದೆ. ಆ ರಾಜ್ಯಗಳಲ್ಲಿ ಎಡಪಕ್ಷಗಳಿಲ್ಲ ಮತ್ತು ಅಂತಹ ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರು ಕೋಮುವಾದವನ್ನು ವಿರೋಧಿಸದಿರಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು.

ಯಾವುದೇ ಧರ್ಮದ ಆಧಾರವಿಲ್ಲದೆ ರೈತರು ಮತ್ತು ಇತರ ಕಾರ್ಮಿಕ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಪರಸ್ಪರ ಹೋರಾಡಿದ ಕಾರಣ ಕಮ್ಯೂನಿಸ್ಟ್ ಚಳುವಳಿಯು ಕೇರಳದಲ್ಲಿ ಯಶಸ್ವಿಯಾಗಿದೆ. ನಾವು ವರ್ಗ ಹೋರಾಟವನ್ನು ನೋಡಿದ್ದೇವೆ. ನಮ್ಮ ಸಮಾಜವು ಹೇಗೆ ಬೆಳೆದಿದೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ, ಗ್ರಾಮೀಣ ಪ್ರದೇಶದಲ್ಲಿ ಕೇರಳವು ಅತ್ಯಧಿಕ ಕನಿಷ್ಠ ವೇತನವನ್ನು ಹೊಂದಿದೆ ಎಂಬ ಸಮೀಕ್ಷೆಯ ಫಲಿತಾಂಶವು ಹೊರಬಂದಿದೆ. ಅದು ಎಡಪಕ್ಷಗಳ ಹೋರಾಟದ ಫಲಿತಾಂಶವೂ ಆಗಿದೆ. ಆದರೆ ಸಂಘಪರಿವಾರ ಅಂತಹ ಎಲ್ಲ ಪ್ರಗತಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಣಕ್ಕಾಗಿ ಚಾಕುವಿನಿಂದ ಇರಿದು ಯುವಕ ತನ್ನ ಸ್ನೇಹಿತನನ್ನೇ ಕೊಂದ!

rss 647 101116052404

ಪರಸ್ಪರ ದ್ವೇಷ ಹುಟ್ಟುಹಾಕುವುದು, ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸುವುದು ಸಂಘಪರಿವಾರದ ಅಜೆಂಡಾವಾಗಿದೆ. ತಲಶ್ಶೇರಿಯಲ್ಲಿ ಆರ್‍ಎಸ್‍ಎಸ್ ಇತ್ತೀಚೆಗೆ ನಡೆಸಿದ ಮೆರವಣಿಗೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ನಿಲ್ಲಿಸಬೇಕು ಎಂದು ಬೆದರಿಕೆ ಹಾಕಿ ಫೋಷಣೆಯನ್ನು ಕೂಗಿದ್ದಾರೆ. ಇಂತಹ ಘೋಷಣೆಗಳನ್ನು ಎತ್ತುವ ಮೂಲಕ ಅವರ ಅಜೆಂಡಾ ಏನು? ಕೇರಳದಲ್ಲಿ ಅವರ ಅಜೆಂಡಾ ಕೆಲಸ ಮಾಡುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಜನರ ಮನಸ್ಸಿನಲ್ಲಿ ಕೋಮುಗಲಭೆ ಮೂಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

TAGGED:keralaPinarayi VijayanRSಆರ್ ಎಸ್‍ಎಸ್ಕೇರಳಪಿಣರಾಯಿ ವಿಜಯನ್
Share This Article
Facebook Whatsapp Whatsapp Telegram

Cinema Updates

Darshan Thailand
ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್
Cinema Latest Sandalwood Top Stories
Hrithika Srinivas
ಕಿರಣ್ ರಾಜ್‌ಗೆ ನಾಯಕಿಯಾದ ಉಡಾಳ ಹುಡುಗಿ ಹೃತಿಕಾ
Cinema Latest Sandalwood Top Stories
The girl Friend
ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್
Cinema Latest Top Stories
Actor Darshan At Bengaluru Airpor
ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್
Bengaluru City Cinema Latest Sandalwood Top Stories
Yogaraj Bhat Jayant Kaikini
ಯೋಗರಾಜ್ ಭಟ್ ಗೀತ ಗುಚ್ಛಕ್ಕೆ ಕಾಯ್ಕಿಣಿ ಸಾಥ್
Bengaluru City Cinema Latest Sandalwood

You Might Also Like

Nashik Accident
Latest

ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ

Public TV
By Public TV
16 minutes ago
Iraq Shopping Mall Fire
Crime

ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು

Public TV
By Public TV
37 minutes ago
JALAHALLI METRO STATION
Bengaluru City

ನೆಟ್‌ವರ್ಕ್ ಸಮಸ್ಯೆ ನಿವಾರಣೆ – ಇನ್ಮುಂದೆ ಮೆಟ್ರೋ ಮಾರ್ಗಗಳಲ್ಲಿ ವೈಫೈ

Public TV
By Public TV
41 minutes ago
ಸಾಂದರ್ಭಿಕ ಚಿತ್ರ
Latest

ಭಾರೀ ಮಳೆಗೆ ಭೂಕುಸಿತ, ಓರ್ವ ಮಹಿಳೆ ಸಾವು – ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

Public TV
By Public TV
49 minutes ago
upi apps
Bengaluru City

40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

Public TV
By Public TV
57 minutes ago
Bidar Low BP Police Constable Death
Bidar

Bidar | ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?