ಬೆಂಗಳೂರು: ಅಕಾಲಿಕ ಮರಣಕ್ಕೆ ಒಳಗಾದ ಪುನೀತ್ ರಾಜ್ಕುಮಾರ್ ಸಾವಿನ ರಹಸ್ಯ ಒಂದೊಂದಾಗೇ ಬಹಿರಂಗವಾಗುತ್ತಿದೆ. ಸಾವಿನ ಹಿಂದಿನ ದಿನಗಳ ಕರಾಳ ಕತೆಗಳನ್ನು ಒಬ್ಬೊಬ್ಬರೇ ಬಿಚ್ಚಿಡುತ್ತಿದ್ದಾರೆ. ಅಪ್ಪು ಅಗಲಿಕೆಗೆ ಮುನ್ನಾ ದಿನ ಅಂದರೆ ಗುರುವಾರವೇ ಅವರಿಗೆ ಹಾರ್ಟ್ ಅಟ್ಯಾಕ್ನ ಲಕ್ಷಣ ಕಾಣಿಸಿತ್ತಾ..? ಅನ್ನೋ ಚರ್ಚೆ ಆಗ್ತಿದೆ.
ಅಕ್ಟೋಬರ್ 26ರಂದು ಭಜರಂಗಿ 2 ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ಡಲ್ಲಾಗಿ ಕಾಣಿಸಿಕೊಂಡಿದ್ದರು ಅಂತ ಗೀತಾ ಹೇಳಿದ್ರು. ಆದರೆ, ಅಪ್ಪು ವರ್ಕೌಟ್ ಮಾಡಿ ಬಂದಿರಬೇಕು ಅಥವಾ ಸುಸ್ತಾಗಿರಬೇಕು ಅಂತ ಗೀತಾಗೆ ಹೇಳಿದ್ದೆ ಅಂತ ಶಿವಣ್ಣ ಹೇಳಿದ್ದಾರೆ. ಅಲ್ಲದೆ ವಿಧಿ 10 ನಿಮಿಷ ಟೈಮ್ ಕೊಡಬೇಕಿತ್ತು. ಎಲ್ಲರಿಗೂ ಟೈಮ್ ಕೊಡುತ್ತೆ, ನನ್ನ ತಮ್ಮನಿಗೆ ಯಾಕೆ ಕೊಡಲಿಲ್ಲ. ಒಂದು ಚೂರು ಸೂಚನೆ ಸಿಕ್ಕಿದ್ದರೆ ನಾವು ಬಿಡುತ್ತಿರಲಿಲ್ಲ. ಎಲ್ಲವೂ ಸಡನ್ ಸಡನ್ ಆಗಿಹೋಯ್ತು. ಅಂಥ ಒಳ್ಳೇ ವ್ಯಕ್ತಿಗೆ ಯಾಕೆ ಕೊಡ್ಲಿಲ್ಲ. ಇದು ಕಾಡ್ತಲೇ ಇರುತ್ತೆ ಅಂತ ಶಿವಣ್ಣ ಮರುಗಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ
ಮತ್ತೊಂದೆಡೆ ನಿರ್ಮಾಪಕ ಜಯಣ್ಣ ಅವರ ಕಚೇರಿಗೆ ಗುರುವಾಗ ಅಪ್ಪು ಭೇಟಿ ನೀಡಿದ್ದರು. ಈ ವೇಳೆ ಕೈಯಲ್ಲಿ ಜೋಮು ಹಿಡಿದಂತೆ ಕಂಡಿತ್ತು. ಅಪ್ಪು ಗೋಡೆಗೆ ಒರಗಿ ಎರಡು ಬಾರಿ ಕೈ ಮೇಲೆತ್ತಿಕೊಂಡು ನಿಂತಿದ್ದರು. ಅದು ಕೈ ಸೆಳೆತವೋ ಅಥವಾ ನೋವೋ ಗೊತ್ತಿಲ್ಲ ಅಂತ ಜಯಣ್ಣ ಹೇಳಿದ್ದಾರೆ. ಈ ಬಗ್ಗೆ ಶಿವಣ್ಣಗೆ ಫೋನ್ ಮಾಡಿ ತಿಳಿಸಿದ್ದೆ. ಅಲ್ಲದೆ ಕೊರೋನಾ ಹೊಡೆತದಿಂದ ಸಿನಿಮಾ ಇಂಡಸ್ಟ್ರಿ ಚೇತರಿಕೆ ಕಾಣಬೇಕು. ಅದಕ್ಕಾಗಿ ವರ್ಷಕ್ಕೆ 2 ಸಿನಿಮಾ ಮಾಡಿಕೊಡಿ ಅಂತ ಕೇಳಿಕೊಂಡಾಗ ಅಪ್ಪು ಒಪ್ಪಿಕೊಂಡಿದ್ರು ಅಂತ ಜಯಣ್ಣ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ