ಕಾರವಾರ: ಗೋವಾದಿಂದ (Goa) ಸಮುದ್ರ ಅಧ್ಯಯನಕ್ಕೆಂದು ತೆರಳಿದ್ದ ನೌಕೆಯಲ್ಲಿ ಎಂಜಿನ್ ವೈಫಲ್ಯ ಉಂಟಾಗಿ ಮುಳುಗುವ ಹಂತ ತಲುಪಿದ್ದ ನೌಕೆಯಲ್ಲಿದ್ದ 36 ಜನರನ್ನು ಭಾರತೀಯ ಕೋಸ್ಟ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಗೋವಾ – ಕಾರವಾರ (Karwar) ಗಡಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಗೋವಾದಿಂದ ಅರಬ್ಬಿ ಸಮುದ್ರದಲ್ಲಿ ಸಂಶೋಧನೆಗೆಂದು ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್ಟಿಟ್ಯೂಟ್ (NIO) ಹಡಗು ಸಂಶೋಧನೆ ಕೇಂದ್ರದ ‘ಸಿಂಧು ಸಾಧನ’ ಹಡಗಿನಲ್ಲಿ 36 ಜನರು ಪಣಜಿಯಿಂದ ಹೊರಟು ಅರಬ್ಬಿ ಸಮುದ್ರದ ಮೂಲಕ ಕಾರವಾರ ಬಂದರಿಗೆ ಆಗಮಿಸುವ ಮಾರ್ಗದಲ್ಲಿ ಎಂಜಿನ್ ವೈಫಲ್ಯ (Engine Failure) ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ
ಘಟನೆಯ ಪರಿಣಾಮ ಹಡಗು (Ship) ಮುಳುಗುವ ಹಂತ ತಲುಪಿತ್ತು. ಭಾರತೀಯ ಕೋಸ್ಟ್ಗಾರ್ಡ್ನ ಸಿಐಆರ್, ಎನ್ಐಒ ಹಡಗಿನಿಂದ ರಕ್ಷಣಾ ಕಾರ್ಯಾಚರಣೆ ಮಾಡಿ ಮುಳುಗುತಿದ್ದ ಹಡಗಿನ ಸಮೇತ ಗೋವಾದಲ್ಲಿರುವ ವಾಸ್ಕೊದ ಬಂದರಿಗೆ ಕರೆತರಲಾಗುತ್ತಿದೆ. ಅಲ್ಲದೇ ಸಂಶೋಧಕರ ತಂಡದ 36 ಸದಸ್ಯರು ಜುಲೈ 28ರಂದು ವಾಸ್ಕೋಗೆ ಮರಳಲಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಎಎಸ್ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್
Web Stories