ಧಾರವಾಡ: ಇವನು ಯಾವುದೇ ಘನಂಧಾರಿ ಕೆಲಸ ಮಾಡಿದವನಲ್ಲ. ಯಾವುದೇ ಸಮಾಜ ಉದ್ಧಾರ ಕೆಲಸ ಕೂಡ ಮಾಡಿಲ್ಲ. ಆದ್ರೂ ತೆರೆದ ವಾಹನದಲ್ಲಿ ಈತನನ್ನ ಮೆರವಣಿಗೆ ಮಾಡಿದ್ರು, ಘೋಷಣೆ ಕೂಗಿದ್ರು. ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ರಾಜ ಮರ್ಯಾದೆ ಮೂಲಕ ಬೆಂಬಲಿಗರು ಕರೆಯೊಯ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ಪೆಂಡಾರಗಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ ಮಕ್ತುಮ್ ಸೊಗಲದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಗುರುವಾರದಂದು ನ್ಯಾಯಾಲಯದಿಂದ ಜಾಮೀನಿನ ಮೇಲೆ ಆರೋಪಿ ಮುಕ್ತುಂ ಸೊಗಲದ ಬಿಡುಗಡೆಯಾಗಿದ್ದ.
ಬಿಡುಗಡೆಯಾದ ನಂತರ ಆರೋಪಿ ಮುಕ್ತುಂ ಸೊಗಲದಗೆ ಬೆಂಬಲಿಗರು ರಾಜಾ ಮರ್ಯಾದೆಯಿಂದ ಮೆರವಣಿಗೆ ಮಾಡುವ ಮೂಲಕ ಕರೆದುಕೊಂಡು ಹೋಗಿದ್ದಾರೆ.
ಅತ್ಯಾಚಾರ ಆರೋಪಿಗೆ 500 ಬೈಕ್, ಕಾರು, ಆಟೋಗಳ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗಿದೆ. ಮುಕ್ತುಂ ಸೊಗಲದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.