ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ರಚಿತಾ ರಾಮ್ ಅವರಿಗೆ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಅತ್ತ ಸೀತಾರಾಮ ಕಲ್ಯಾಣ, ಮತ್ತೊಂದೆಡೆ ರುಸ್ತುಂ ಚಿತ್ರದಲ್ಲಿನ ಪಾತ್ರದಲ್ಲಿ ತೊಡಗಿಸಿಕೊಂಡಿರೋ ರಚಿತಾ ಇದೀಗ ಶಿವಣ್ಣನ ಚಿತ್ರವೊಂದಕ್ಕೆ ನಾಯಕಿಯಾಗಿದ್ದಾರೆ.
- Advertisement 2
ಶಿವರಾಜ್ ಕುಮಾರ್ ಈಗ ಸಣ್ಣ ವಿರಾಮವೂ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ರುಸ್ತುಂ, ದ್ರೋಣ ಸೇರಿದಂತೆ ಅವರ ಕೈಲಿರೋ ಚಿತ್ರಗಳ ಪಟ್ಟಿ ದೊಡ್ಡದಿದೆ. ಅದಾಗಲೇ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರೆ.
- Advertisement 3
- Advertisement 4
ಈ ಚಿತ್ರಕ್ಕೆ ಇದೀಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಶಿವಣ್ಣನ ಜೊತೆ ನಟಿಸಲು ಥ್ರಿಲ್ ಆಗಿಯೇ ಒಪ್ಪಿಕೊಂಡಿರೋ ರಚಿತಾ ಈ ಬಗ್ಗೆ ಹೊರ ಬೀಳಲಿರೋ ಅಧಿಕೃತ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಚಿತ್ರ ಈ ವರ್ಷವೇ ಆರಂಭವಾಗೋದಿಲ್ಲ. ಶಿವರಾಜ್ ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳನ್ನು ಮುಗಿಸಿಕೊಂಡ ನಂತರ ಹೊಸ ವರ್ಷದ ಆರಂಭದಲ್ಲಿಯೇ ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಆರಂಭಿಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv