ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಗ್ರಾಮದಲ್ಲಿ ದೈತ್ಯ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.
- Advertisement 2
ರಾಯರಪಾಳ್ಯ ಗ್ರಾಮದ ಸುಗ್ಗಯ್ಯ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಗ್ರಾಮದ ಕೆರೆಯ ಬಳಿಯೇ ಇರುವ ಸುಗ್ಗಯ್ಯ ಅವರ ಮನೆಗೆ ಕೆರೆಯಲ್ಲಿ ವಾಸವಾಗಿದ್ದ ದೈತ್ಯ ಹೆಬ್ಬಾವು ಬಂದಿತ್ತು. ಅದನ್ನು ಕಂಡು ಮನೆಯವರು ಆತಂಕಕ್ಕೆ ಒಳಗಾದರು. ಇದನ್ನೂ ಓದಿ: ʼಅಪ್ಪುʼಗೆ ನನ್ನ ದೃಷ್ಟಿಯೇ ತಾಗಿತೇನೊ ಅನಿಸುತ್ತೆ: ತಮ್ಮನ ನೆನೆದು ಶಿವಣ್ಣ ಕಣ್ಣೀರು
- Advertisement 3
- Advertisement 4
ನಂತರ ಹೆಬ್ಬಾವನ್ನು ರಕ್ಷಣೆ ಮಾಡಲು ಗ್ರಾಮದ ಶ್ರೀಕಾಂತ್ ಮತ್ತು ಗುಬ್ಬಣ್ಣಸ್ವಾಮಿ ನೇತೃತ್ವದ ಸ್ನೇಹಿತರ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಶ್ರೀಕಾಂತ್ ಹಾಗೂ ಸ್ನೇಹಿತರು ಹೆಬ್ಬಾವನ್ನು ರಕ್ಷಣೆ ಮಾಡಿ ನೆಲಮಂಗಲ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೈಯಿಂದ ಅವಾರ್ಡ್ ಪಡೆದ ಡಿಯು