ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು(Annual Award) ಪ್ರಕಟಿಸಲಾಗಿದ್ದು, ಅತ್ಯುತ್ತಮ ರಾಜಕೀಯ ವಿಮರ್ಶೆಗಾಗಿ ಪಬ್ಲಿಕ್ ಟಿವಿಯ (PUBLiC TV) ಹಿರಿಯ ರಾಜಕೀಯ ವರದಿಗಾರ ಡಿ.ಎಚ್.ಸುಖೇಶ್ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ (Kadri Shamanna Award) ಲಭಿಸಿದೆ.
38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ದಾವಣಗೆರೆಯಲ್ಲಿ ಇದೇ ಫೆಬ್ರವರಿ 3 ಮತ್ತು 4 ರಂದು ಸಮ್ಮೇಳನ ನಡೆಯಲಿದೆ. ಇದನ್ನೂ ಓದಿ: ಗುರುವಾರ ಕೇಂದ್ರ ಬಜೆಟ್ – ರೈತರು, ಜನಸಾಮಾನ್ಯರ ನಿರೀಕ್ಷೆ ಏನು?
ಒಟ್ಟು 29 ವಿಭಾಗಗಳಲ್ಲಿ ಹಲವು ಪತ್ರಕರ್ತರಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.