ಬಳ್ಳಾರಿ: ಸ್ಯಾಂಡಲ್ ವುಡ್ ನಟ ಪುನಿತ್ ರಾಜ್ಕುಮಾರ್ ಗೆ ಅಭಿಮಾನಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಪವರ್ ಸ್ಟಾರ್ ಪುನೀತ್ ಅವರನ್ನು ಅಭಿಮಾನಿಗಳು ಅತಿ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಹೀಗೆ ತಮ್ಮನ್ನು ಪ್ರೀತಿ ಮಾಡೋ ಅಭಿಮಾನಿಯೊಬ್ಬರ ಮನೆಗೆ ಪುನೀತ್ ರಾಜ್ಕುಮಾರ್ ಹೋಗಿ ಬಂದಿದ್ದಾರೆ.
ರವಿವಾರ ಬಳ್ಳಾರಿಯಲ್ಲಿ ನಿರ್ದೇಶಕ ಸಂತೋಷ ಆನಂದರಾಮ್ ನಿಶ್ಚಿತಾರ್ಥ ಸಮಾರಂಭಕ್ಕೆ ಪುನೀತ್ ಆಗಮಿಸಿದ್ದರು. ಇದೇ ವೇಳೆ ಅವರು ಹೊಸಪೇಟೆಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದರು. ಕಟ್ಟಾ ಅಭಿಮಾನಿಯಾಗಿರುವ ಕಿಚಡಿ ವಿಶ್ವ ಎಂಬವರ ಮನೆಗೆ ತೆರಳಿದ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿ ಕುಟುಂಬದವರೆಲ್ಲಾ ಆರತಿ ಬೆಳಗಿ ಸ್ವಾಗತಿಸಿ, ಸನ್ಮಾನಿಸಿ, ಗೌರವಿಸಿದ್ದಾರೆ.
ಸಹೋದರಿ ರೇಣುಕಾರ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಈ ಹಿಂದೆ ವಿಶ್ವ ಕುಟುಂಬ ಆಹ್ವಾನವನ್ನು ನೀಡಿತ್ತು. ಅದರೆ ಅಂದು ಪಾರ್ವತಮ್ಮ ರಾಜಕುಮಾರ್ ಅವರಿಗೆ ಅನಾರೋಗ್ಯ ಇದ್ದ ಹಿನ್ನಲೆಯಲ್ಲಿ ಪುನೀತ್ ರಾಜ್ಕುಮಾರ್ ಮದುವೆ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿಯೇ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಹೊಸಪೇಟೆಗೆ ಬಂದಾಗ ವಿಶ್ವ ಅವರು ಅಂದು ನೀಡಿದ್ದ ಆಹ್ವಾನವನ್ನು ಮರೆಯದೇ ಅವರ ನಿವಾಸಕ್ಕೆ ಭೇಟಿ ನೀಡಿ ಸರಳತೆ ಮೆರೆದಿದ್ದಾರೆ.
ಇದನ್ನೂ ಓದಿ: `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ