ಬೆಂಗಳೂರು: ಕಳೆದ ರಾತ್ರಿ ಸುರಿದ ಮಳೆಗೆ ವರ್ತೂರು ಕೋಡಿ ಕೆರೆಯಲ್ಲಿ ನೊರೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ನೊರೆಯ ಒಂದೆಡೆ ಶೇಖರಣೆಯಾಗಿ ಹಿಮಾಲಯದಂತೆ ಕಾಣಿಸುತ್ತಿದ್ದು, ಸೆಲ್ಫೀ ಪ್ರಿಯರು ನೊರೆಯ ಮುಂಭಾಗದಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ.
ನೊರೆಯ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಬಿಡಿಎ ವತಿಯಿಂದ 20 ಅಡಿ ಎತ್ತರದ ಕಬ್ಬಿಣದ ಮೆಷ್ ಅಳವಡಿಸಲಾಗಿತ್ತು. ಆದರೆ ಬಿಡಿಎ ಅರ್ಧ ಭಾಗಕ್ಕೆ ಮಾತ್ರ ಮೆಷ್ ಅಳವಡಿಸಿ ಉಳಿದ ಅರ್ಧಭಾಗ ಕಾಲಿ ಬಿಟ್ಟಿರುವುದರಿಂದಾಗಿ ನೊರೆ ಹೆಚ್ಚು ಸಂಗ್ರಹಣೆಯಾಗಿದೆ. ಮೆಷ್ ಒಳಗಡೆ ಭಾರೀ ಪ್ರಮಾಣದಲ್ಲಿ ನೊರೆ ಸಂಗ್ರಹಣೆಯಾಗಿದ್ದು, ನೊರೆ ರಸ್ತೆಗೆ ಬಂದು ವಾಹನ ಸವಾರರು ಪರದಾಡುವಂತಾಗಿದೆ.
ಇಲ್ಲಿಯ ವರ್ಜೀನಿಯ ಮಾಲ್ ಗೇಟ್ ನಲ್ಲಿ ಬಳಿಯೇ ನೊರೆ ಶೇಖರಣೆಯಾಗಿದ್ದು, ಮಾಲ್ ಗೆ ಬರುವ ಗ್ರಾಹಕರಿಗೂ ತೊಂದರೆ ಉಂಟಾಗಿದೆ. ಮಾಲ್ ಸಿಬ್ಬಂದಿ ನೊರೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.