ಮಂಗಳೂರು: ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಸೇರಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಮಂಗಳೂರಿನ ಕದ್ರಿ ದೇವಸ್ಥಾನ ಬಳಿ ಸೋಮವಾರ ರಾತ್ರಿ ತಂಗಿದ್ದ ಬ್ರಹ್ಮರಥಕ್ಕೆ ಇಂದು ಬೆಳಗ್ಗೆ ಸಾರ್ವಜನಿಕರು, ಪ್ರಮುಖರು ಸೇರಿ ಆರತಿ ಎತ್ತಿದರು. ಸುಮಾರು 2.5 ಕೋಟಿ ವೆಚ್ಚದಲ್ಲಿ ಕುಂದಾಪುರದ ಕೋಟೇಶ್ವರದಲ್ಲಿ ಅಪೂರ್ವ ರಥ ನಿರ್ಮಿಸಲಾಗಿದ್ದು, ದೇವಸ್ಥಾನಕ್ಕೆ ತಲುಪಿದ ಬಳಿಕ ಚಕ್ರ, ಇನ್ನಿತರ ಪರಿಕರಗಳ ಜೋಡಣೆ ಆಗಲಿದೆ. ಇದನ್ನೂ ಓದಿ: ಕೋಟೇಶ್ವರದಿಂದ ಕುಕ್ಕೆಗೆ ಹೊರಟ ಬ್ರಹ್ಮರಥ- ಉಡುಪಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ
- Advertisement 2
- Advertisement 3
ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉದ್ಯಮಿ ರಾಕೇಶ್ ಮಲ್ಲಿ, ದಾನಿ ಅಜಿತ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಚೆಂಡೆ ವಾದ್ಯಗಳ ಮೂಲಕ ರಥವನ್ನು ಸ್ವಾಗತಿಸಿ, ಬಳಿಕ ಉಪ್ಪಿನಂಗಡಿಯತ್ತ ಬೀಳ್ಕೊಡಲಾಯಿತು.
- Advertisement 4
ಇಂದು ಬಂಟ್ವಾಳ ಕಲ್ಲಡ್ಕ ಮೂಲಕ ಉಪ್ಪಿನಂಗಡಿಗೆ ತೆರಳಿ, ಅಲ್ಲಿಂದ ಬುಧವಾರ ಸಂಜೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯ ತಲುಪಲಿದೆ. ರಥದ ಜೊತೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಾಥ್ ನೀಡಿದ್ದಾರೆ.