ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಮಳೆ ಹಲವು ಅವಾಂತರವನ್ನು ಸೃಷ್ಟಿಸಿದೆ. ಆದರೆ ಸದ್ಯ ಈ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಿದೆ. ಆದರೆ ಹಲವೆಡೆ ಗುಡ್ಡ ಕುಸಿತ ಮುಂದುವರಿದಿದೆ.
ಮಳೆ ಪ್ರಮಾಣ ಕಡಿಮೆಯಾದರೂ ಅದರಿಂದ ಸೃಷ್ಟಿಯಾಗಿರುವ ಅವಾಂತರ ಮಾತ್ರ ಸರಿಹೋಗಿಲ್ಲ. ಮಳೆರಾಯ ಕೊಂಚ ಬಿಡುವು ಕೊಟ್ಟಿರಬಹುದು. ಆದರೆ ಹಲವೆಡೆ ಗುಡ್ಡ ಕುಸಿತ ಮುಂದುವರಿದಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯಲ್ಲಿ ಬರುವ ಹೆಗಲೆತ್ತಿಯಲ್ಲಿ ಗುಡ್ಡ ಕುಸಿತವಾಗಿ ಸಾಕಷ್ಟು ಹಾನಿ ಉಂಟಾಗಿದೆ.
- Advertisement 2
- Advertisement 3
ಹೆಗಲೆತ್ತಿ ಗ್ರಾಮದಲ್ಲಿ ಸುರಿದ ಮಳೆಗೆ ಭಾರೀ ರಭಸದೊಂದಿಗೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ. ಅಲ್ಲದೆ ಮಳೆ ನೀರಿನ ಸೆಳೆತಕ್ಕೆ ಮಣ್ಣು ಕೊಚ್ಚಿಹೋಗಿದ್ದು, ಅದರ ಜೊತೆ ನೂರಾರು ಭಾರೀ ಗಾತ್ರದ ಮರಗಳು ಕೂಡ ತೇಲಿ ಬಂದಿವೆ. ಪರಿಣಾಮ ಗ್ರಾಮದ ಅಡಿಕೆ ತೋಟಗಳಿಗೆ ಅಪಾರ ಪ್ರಮಾಣದಲ್ಲಿ ಮಣ್ಣು, ಮರಗಳು ಕೊಚ್ಚಿ ಬಂದು ಸುಮಾರು 20 ಎಕ್ರೆಯಷ್ಟು ಅಡಿಕೆ ತೋಟವನ್ನು ನಾಶ ಮಾಡಿದೆ.