ಕುಡಿದು ವಾಹನ ಚಲಾಯಿಸಿದ ನೌಕಾ ಸಿಬ್ಬಂದಿಗೆ ಧರ್ಮದೇಟು

Public TV
1 Min Read
kwr accident

ಕಾರವಾರ: ಕುಡಿದು ವಾಹನ ಚಲಾವಣೆ ಮಾಡುತ್ತಿದ್ದ ನೌಕಾದಳದ ಸಿಬ್ಬಂದಿಯೊಬ್ಬರಿಗೆ ಇತರೇ ವಾಹನ ಸವಾರರು ಧರ್ಮದೇಟು ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾದಲ್ಲಿ ನಡೆದೆ.

ಕದಂಬ ನೌಕಾದಳದ ಗೇಟ್ ಬಳಿ ನೌಕಾದಳದ ಸಿಬ್ಬಂದಿ ರಾಜಾಶಾಮ್ ಅವರು ಧರ್ಮದೇಟು ತಿಂದಿದ್ದಾರೆ. ಶನಿವಾರ ರಾತ್ರಿ ರಾಜಾಶಾಮ್ ಅವರು ಕುಡಿದು ವಾಹನ ಚಲಾವಣೆ ಮಾಡಿದ್ದು, ಕುಡಿತದ ಅಮಲಿನಲ್ಲಿ ದಾರಿಯಲ್ಲಿದ್ದ ಮೂರ್ನಾಲ್ಕು ವಾಹನಕ್ಕೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ವಾಹನ ಮಾಲೀಕರು ರಾಜಾಶಾಮ್ ತಮ್ಮ ವಾಹನವನ್ನು ನೌಕಾದಳದ ಗೇಟ್ ಬಳಿ ನಿಲ್ಲಿಸುತ್ತಿದ್ದಂತೆ ಸಖತ್ ಗೂಸ ನೀಡಿದ್ದಾರೆ.

kwr accident 1

ಅಷ್ಟೇ ಅಲ್ಲದೆ ನೌಕಾದಳದ ಸಿಬ್ಬಂದಿಯಿಂದ ಅಪಘಾತಗೊಂಡ ಕಾರಿನವರು ಆತನಿದ್ದ ಸ್ಥಳಕ್ಕೆ ಬಂದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ರಾಜಾಶಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *