ವಿಜಯಪುರ: ಭೀಮಾತೀರದಲ್ಲಿ (Bhimathira) 6 ಜನರ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ 12 ಜನ ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಇಂದು ಇಂಡಿ ಕೋರ್ಟ್ಗೆ ಚಡಚಣ ಪೋಲಿಸರು (Vijayapura Police) ಆರೋಪಿಗಳನ್ನ ಹಾಜರುಪಡಿಸಲಿದ್ದಾರೆ.
ಮೇ 29 ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಹತ್ಯಾಕಾಂಡ ನಡೆದಿತ್ತು. ಡಬಲ್ ಬ್ಯಾರಲ್ ಗನ್ನಿಂದ ಗುಂಡು, ಮಚ್ಚುಗಳಿಂದ ಕತ್ತರಿಸಿ 6 ಜನರ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಭೀಮಾತೀರದಲ್ಲಿ ಹತ್ಯಾಕಾಂಡ – ಸ್ಥಳಕ್ಕೆ ಐಜಿಪಿ ಭೇಟಿ

ಈ ಹತ್ಯಾಕಂಡದಲ್ಲಿ ಚಡಚಣದ ಪ್ರತಿಷ್ಠಿತ ಕುಟುಂಬದ 5 ಜನರ ಹಾಗೂ ಇವರ ಜೊತೆಗೆ ಬಂದಿದ್ದ ಓರ್ವನನ್ನ ಹಂತಕರು ಹತ್ಯೆಗೈದಿದ್ದರು. ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ಶಿವಪುತ್ರ ಮಕ್ಕಳಾದ ರಾಹುಲ್ (25), ಸಮರ್ಥ (23) ಹಾಗೂ ಶಬ್ಬಿರ್ ಅತ್ತಾರ್ (45) ಹತ್ಯೆಗೀಡಾದವರು.
ಈ ಹತ್ಯೆ ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಕುಟುಂಬ ಸದಸ್ಯರಿಂದ ನಡೆದಿದೆ ಎಂದು ನಿರಾಳೆ ಕುಟುಂಬಸ್ಥರು ದೂರು ದಾಖಲಿಸಿದ್ದರು. ಸದ್ಯ ಈ ಹತ್ಯಾಕಾಂಡ ನಡೆಸಿದ್ದವರ ಪೈಕಿ 12 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು – 6 ಜನರ ಭೀಕರ ಹತ್ಯೆ
