ಶಿವಮೊಗ್ಗ: ಮರಣ ಮೃದಂಗ ಭಾರಿಸುತ್ತಿರುವ ಮಾರಕ ಮಂಗನ ಕಾಯಿಲೆಗೆ ಮಲೆನಾಡಿಗರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಸರ್ಕಾರ ನೀಡುತ್ತಿರುವ ಔಷಧಿಗಳು ಕೂಡ ಈ ಮಾರಣಾಂತಿಕ ಕಾಯಿಲೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಆದರಿಂದ ಮಂಗನ ಕಾಯಿಲೆಗೆ ಹೆದರಿ ಮಲೆನಾಡಿನ ಕೆಲವು ಭಾಗಗಳಲ್ಲಿ ಜನರು ಊರು ಬಿಡುತ್ತಿದ್ದಾರೆ.
ಹೌದು, ಮಂಗನ ಕಾಯಿಲೆ ಮಲೆನಾಡಿನ ಜನರಿಗೆ ಬೆನ್ನುಬಿಡದೇ ಕಾಡುತ್ತಿದೆ. ಅಲ್ಲದೆ ಈ ಬಗ್ಗೆ ಸರ್ಕಾರ ಎಷ್ಟೇ ಕ್ರಮಗಳನ್ನು ತೆಗೆದುಕೊಂಡಿದ್ದರು ಮಂಗನ ಜ್ವರ ನಿಯಂತ್ರಣ ಮಾಡುವಲ್ಲಿ ಸೋತಿದೆ. ವ್ಯಾಕ್ಸನ್, ಡಿಎಂಪಿ ತೈಲ ಬಳಸಿದ ಮೇಲೂ ಕೂಡ ಜನ ಮಂಗನ ಜ್ವರದಿಂದ ಸಾಯುತ್ತಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಈ ಮಾರಕ ಕಾಯಿಲೆಗೆ ಹದಿನೈದು ಜನ ಮೃತಪಟ್ಟಿದ್ದಾರೆ. ಇದರಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮಂಡವಳ್ಳಿ, ಕೊಪ್ಪರಿಗೆ, ಬಣ್ಣುಮನೆ ಸೇರಿ ಈ ಭಾಗದ ಪ್ರತೀ ಹಳ್ಳಿಯಲ್ಲೂ ಸಾವುಗಳು ಸಂಭವಿಸಿವೆ. ಇದನ್ನೂ ಓದಿ:ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ
- Advertisement 2
- Advertisement 3
ಮಂಗನ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಏನೂ ಮಾಡಲಾಗದೆ ಅಸಹಾಯಕರಾಗಿರುವ ಇಲ್ಲಿನ ಜನ ಊರು ಬಿಡುತ್ತಿದ್ದಾರೆ. ಕಾಡಿನ ನಡುವೆ ಇರುವ ಒಂಟಿ ಮನೆಗಳಿಗೆ ಈಗ ಬೀಗ ಹಾಕಲಾಗಿದೆ. ಐತುಮನೆ ಎಂಬ ಊರಿನ ಎಲ್ಲಾ ಮನೆಗಳಿಗೆ ಬೀಗ ಹಾಕಲಾಗಿದೆ. ಉಳಿದ ಗ್ರಾಮದವರು ಬೇರೆ ಊರುಗಳಿಗೆ ಹೋಗಲು ಸಿದ್ಧವಾಗುತ್ತಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ
- Advertisement 4
ಅಲ್ಲದೆ ಕೃಷಿ ಮಾಡುತ್ತಲೇ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನ ತಮ್ಮ ತೋಟ ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದರಿಂದ ಕೊಯ್ಲಿಗೆ ಬಂದ ಅಡಕೆಗಳು ತೋಟದಲ್ಲೇ ಹಣ್ಣಾಗಿ ಉದುರುತ್ತಿದೆ. ಜಾನುವಾರುಗಳನ್ನು ಮನೆಯಲ್ಲೇ ಕಟ್ಟಿ ಮೇವು ಹಾಕಬೇಕಾದ ಪರಿಸ್ಥಿತಿ ಈ ಭಾಗಗಳಲ್ಲಿ ಮಂಗನ ಕಾಯಿಲೆಯಿಂದ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv