ಕಲಬುರಗಿ: ಮಿಸ್ಕಾಲ್ ಪ್ರೇಯಸಿಯಿಂದ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿಯ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ.
ದಯಾನಂದ್ ಕೊಲೆಯಾದವನಾಗಿದ್ದು, ಈತ ಮೇ 24ರಂದು ಆಳಂದ ತಾಲೂಕಿನ ಸುಕ್ರವಾಡಿ ಗ್ರಾಮದ ನಿವಾಸಿ. ಈತನನ್ನು ಪ್ರೇಯಸಿ ಅಂಬಿಕಾ ಆಂಡ್ ಗ್ಯಾಂಗ್ ನಿಂದ ಮೂರು ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಲಾಗಿದೆ.
ದಯಾನಂದ್ ನನ್ನ ಬರ್ಬರವಾಗಿ ಕೊಲೆ ಮಾಡುವ ವೀಡಿಯೋವನ್ನು ಸ್ವತಃ ಅಂಬಿಕಾಳೇ ಮಾಡಿದ್ದಾಳೆ. ಅಲ್ಲದೆ ಕೊಲೆಯ ವೀಡಿಯೋವನ್ನು ತನ್ನ ಇನ್ನೊಬ್ಬ ಪ್ರಿಯಕರ ಮಿಲಿಟರಿಯಲ್ಲಿರುವ ಸುನೀಲ್ ಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕೂಡಲೇ ವಿಚಾರಣೆಗೆ ಹಾಜರಾಗಿ – ಬಂಗಾಳ ಪೊಲೀಸರಿಂದ ನೂಪುರ್ಗೆ ಕೊನೆಯ ಎಚ್ಚರಿಕೆ
ಕೊಲೆಯ ಲೈವ್ ವೀಡಿಯೋ ಮಾಡಿ ತಾನು ಬಚಾವ್ ಆಗೋದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಇದೀಗ ತಾನೇ ತೋಡಿದ್ದ ಅಂಬಿಕಾ ಖೆಡ್ಡಾಗೆ ತಾನೇ ಬಿದ್ದಿದ್ದಾಳೆ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.