ಹಾಸನ: ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಭಾರೀ ಟೀಕೆಗೆ ಗುರಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮೆಣಸಿನಕಾಯಿ ಬಜ್ಜಿಯನ್ನು ತಿಂದು ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರೇವಣ್ಣ, ಹೋಟೆಲ್ ನವರು ನೀಡಿದ್ದ ಮೆಣಸಿನಕಾಯಿ ಬಜ್ಜಿಯನ್ನು ತಿಂದಿದ್ದಾರೆ. ತಿಂದ ಬಳಿಕ ಮೆಣಸಿನಕಾಯಿ ಖಾರದ ರಭಸಕ್ಕೆ ಕಣ್ಣೀರು ಗಳಗಳನೆ ಬರತೊಡಗಿದೆ. ಇದನ್ನು ಮರೆಮಾಚಲು ತಮ್ಮ ಬಳಿಯಿದ್ದ ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡಿದ್ದಾರೆ.
ಅಲ್ಲದೇ ಹೋಟೆಲ್ ಸಿಬ್ಬಂದಿಗೆ “ಏನ್ರಪ್ಪ ಜೈಲಿನಲ್ಲಿ ಕೊಡುವ ರೀತಿ ಖಾರದ ಬಜ್ಜಿ ಕೊಡ್ತಿರಲ್ಲಪ್ಪ” ಎಂದು ತಮಾಷೆ ಮಾಡಿ, ನನಗೆ ಮೆಣಸಿನಕಾಯಿ ಬಜ್ಜಿ ಬೇಡ, ಬೇಕಾದರೇ ಆಲೂಗಡ್ಡೆ ಅಥವಾ ಹೀರೇಕಾಯಿ ಬಜ್ಜಿ ಇದ್ದರೇ ಕೊಡಿ ಎಂದು ಹೋಟೆಲ್ ಸಿಬ್ಬಂದಿ ಜೊತೆ ಕೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv